ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಕಿರವತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಣ್ಣ ಪಾನಿಗುಂಡಿ ಗ್ರಾಮ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ಮತ್ತು ಉದಯಕಾಲ ಸುದ್ದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ತಾಲೂಕು ದಂಢಾದಿಕಾರಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಭೇಟಿಯಾಗಿ ವಾಸ್ತವಿಕತೆ ಅರಿತರು. ತಹಶಿಲ್ದಾರ್ ಚಂದ್ರಶೇಖರ ಹೊಸಮನಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿನ ಸಮಸ್ಯೆಗಳನ್ನು ಆಲಿಸಿ ಪರಿಸ್ಥಿತಿ ಯನ್ನು ಪ್ರತ್ಯಕ್ಷವಾಗಿ ಕಂಡರು. …
Read More »ತೃತೀಯ ಭಾಷೆ “ಹಿಂದಿ” ವಿಷಯಕ್ಕೆ ಗ್ರೇಡಿಂಗ್ ಪದ್ಧತಿ – ವಿದ್ಯಾರ್ಥಿಗಳಲ್ಲಿ ಗೊಂದಲ – ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ
ಪ್ರತಿಧ್ವನಿ ಯಲ್ಲಾಪುರ : ಎಸ್.ಎಸ್.ಎಲ್.ಸಿ ಹಿಂದಿ ಪರೀಕ್ಷೆ ಮಾರ್ಚ 31 ರ ಮಂಗಳವಾರ ಜರುಗುತ್ತಿರುವ ಸಂದರ್ಭದಲ್ಲಿ ಸರಕಾರ ಏಕಾಏಕಿಯಾಗಿ ತೃತೀಯ ಭಾಷೆ ಹಿಂದಿಗೆ ಅಂಕಗಳ ಬದಲಾಗಿ ಗ್ರೇಡಿಂಗ್ ಪದ್ಧತಿಯನ್ನು ಜಾರಿಗೆ ತರಲು ಕೈಕೊಂಡ ನಿರ್ಧಾರ ವಿದ್ಯಾರ್ಥಿಗಳಲ್ಲಿ ಆತಂಕ ಹಾಗೂ ಗೊಂದಲಕ್ಕೆ ಕಾರಣವಾಗಿದೆ ಮತ್ತು ಇದು ದುಡಿಕಿನ ನಿರ್ಧಾರ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಏನೇ ಬದಲಾವಣೆ ತರುವದಿದ್ದರೂ ಶೈಕ್ಷಣಿಕ …
Read More »ಯಲ್ಲಾಪುರದಲ್ಲಿ ನಡೆದ HESCOM POWER CUP -2026 ಸೌಹಾರ್ದ ಕ್ರಿಕೇಟ್ ಪಂದ್ಯಾವಳಿ
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಕಾಳಮ್ಮ ನಗರ ತಾಲೂಕು ಕ್ರೀಡಾಂಗಣದಲ್ಲಿ ಯಲ್ಲಾಪುರ ಹೆಸ್ಕಾಂ ವತಿಯಿಂದ ” ಹೆಸ್ಕಾಂ ಪವರ್ ಕಪ್ – 2026 ” ಸೌಹಾರ್ದ ಕ್ರಿಕೇಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಪಂದ್ಯವನ್ನು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಮಾಕಾಂತ ನಾಯ್ಕಉದ್ಘಾಟಿಸಿದರು. ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಛಾಯಪ್ಪ ಮುರಡಿ ಆಟಗಾರರನ್ನುಪರಿಚಯಿಸಿದರು.ಸಹಾಯಕ ಲೆಕ್ಕಾಧಿಕಾರಿ ವಿನಯ್ ಶೇಟ್ ಆಟಗಾರರನ್ನು ಅಭಿನಂದಿಸಿದರು ಈ ಸಂದರ್ಭದಲ್ಲಿ ನೌಕರರ ಸಂಘದ …
Read More »ಯಡಳ್ಳಿ ಶ್ರೀ ರಾಮನಾಥೇಶ್ವರ ದೇವಸ್ಥಾನ ಶಿಲಾಮಯ ದೇಗುಲ ಏ,26,27,28 ರಂದು ಪುನರ್ ಪ್ರತಿಷ್ಟಾಪನೆ.
ಪ್ರತಿಧ್ವನಿ ಯಲ್ಲಾಪುರ : ಇದೇ ಬರುವ ಏಪ್ರಿಲ್ ತಿಂಗಳಿನ 26 ,27 ,28, /2026ರಂದು ಯಡಳ್ಳಿ ಯಲ್ಲಿ ನಡೆಯುವ ಶ್ರೀ ರಾಮನಾಥೇಶ್ವರ ದೇವಸ್ಥಾನದ ಶಿಲಾಮಯ, ನೂತನ ಕಟ್ಟಡದ ಪುನರ್ ಪ್ರತಿಷ್ಠಾಪನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಆಮಂತ್ರಣ ಪತ್ರಿಕೆಯನ್ನ ಊರಿನ ಹಿರಿಯರೆಲ್ಲ ಸೇರಿ ವಿದ್ಯುಕ್ತವಾಗಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ,ಎಂ ಕೆ ಭಟ್ ಯಡಳ್ಳಿ, ಶಿವಕುಮಾರ್ ಭಟ್, ಯಡಳ್ಳಿ, ರಾಮಕೃಷ್ಣ ಭಟ್ , ಬಿ ಕೆ ಭಟ್ ಯಡಳ್ಳಿ ಮಂಜುನಾಥ್ ಗೌಡ ಕೃಷ್ಣಮೂರ್ತಿ …
Read More »ಒಲ್ಲದ ಮದುವೆಗೆ ಮನೆ ಬಿಟ್ಟ ಅಣ್ಣ – ಹುಡುಕಿ ಕೊಡುವಂತೆ ಕಂಪ್ಲೇಂಟ್ ಕೊಟ್ಟ ತಮ್ಮ!!.
ಪ್ರತಿಧ್ವನಿ ಯಲ್ಲಾಪುರ : ಅವನದು ಕಾರ್ಪೆಂಟರ್ ವೃತ್ತಿ ತಾಲ್ಲೂಕಿನ ವಡೇಹುಕ್ಕಳಿ ಸಮೀಪ ಕನ್ನಡಗಲ್ ಚಿನ್ನೆಹುಕ್ಕಳ್ಳಿ ಗ್ರಾಮದವನು ಮದುವೆ ಒಲ್ಲೆ ಎಂದು ಮನೆಯಿಂದ ಕಾಲ್ಕಿತ್ತಿದ್ದಾನೆ ಅಣ್ಣನನ್ನು ಹುಡುಕಿಕೊಡಿ ಎಂದು ಕಾಣೆಯಾದವನ ತಮ್ಮ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಸತೀಶ ರಮೇಶ ಮಳಿಕ (26) ಎಂಬ ಯುವಕನೆ ಕಾಣೆಯಾದವನಾಗಿದ್ದು ತನ್ನ ತಮ್ಮವಿಷ್ಣು ಮಳಿಕನ ಮೊಬೈಲ್ ಗೆ ನನಗೆ ಮದುವೆ ಇಷ್ಟವಿಲ್ಲ ಎಂಬ ಮೆಸೇಜ್ ಒಂದನ್ನು ಮಾ,28 ರಂದು ಕಳಿಸಿ ಮನೆಯಿಂದ ಹೊರ ನಡೆದವನು …
Read More »ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ಸುದ್ದಿಗೆ ದಲಿತ ಸಂಘಟನೆ-ಜಯ ಕರ್ನಾಟಕ ಸಂಘಟನೆ ಸ್ಪಂಧನೆ – ಸಣ್ಣ ಪಾನಿಗುಂಡಿಗೆ ಭೇಟಿ.
ಪ್ರತಿಧ್ವನಿ ಯಲ್ಲಾಪುರ – ಕಳೆದೆರಡು ದಿನಗಳ ಹಿಂದೆ ಮೂಲಭೂತ ಸೌಕರ್ಯ ವಂಚಿತ ಸಣ್ಣ ಪಾನಿಗುಂಡಿ ಗ್ರಾಮದ ಕುರಿತು ” ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ” ವಿಸ್ತೃತ ವರದಿ ಪ್ರಕಟಿಸಿತ್ತು. ಅಧಿಕಾರಿಗಳು ಗಮನಿಸಿದ್ದಾರೊ ಇಲ್ಲವೊ ಆದರೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ, ಯುವ ಕರ್ನಾಟಕ ರಕ್ಷಣಾ ವೇದಿಕೆ ಹಾಗು ಜಯಕರ್ನಾಟಕ ಸಂಘಟನೆಗಳು ರವಿವಾರ ಸಣ್ಣ ಪಾನಿಗುಂಡಿ ಗ್ರಾಮಕ್ಕೆ ಭೇಟಿ ನೀಡಿ ಸತ್ಯಾಸತ್ಯತೆ ಅರಿತು ಗ್ರಾಮಸ್ಥರೊಂದಿಗೆ . ಪ್ರತಿಧ್ವನಿ ಯಲ್ಲಾಪುರ ನ್ಯೂಸ್ ಮತ್ತು …
Read More »ಮಾನವೀಯತೆಯ ಸಾಕಾರವೇ ರಕ್ತದಾನ: ಡಾ,ಆರ್.ಡಿ.ಜನಾರ್ಧನ್.
ಪ್ರತಿಧ್ವನಿ ಯಲ್ಲಾಪುರ: ಪ್ರತಿಯೊಬ್ಬ ವ್ಯಕ್ತಿಯು ರಕ್ತದಾನ ಮಾಡುವ ಮೂಲಕ ಮತ್ತೊಂದು ಜೀವ ಉಳಿಸುವ ಪುಣ್ಯದ ಕೆಲಸದಲ್ಲಿ ಭಾಗಿಗಳಾಗಬೇಕು. ಯುವಜನತೆ ಇಂತಹ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ.ಮಾನವಿಯತೆಯ ಸಾಕಾರವೆ ರಕ್ತ ದಾನ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್.ಡಿ. ಜನಾರ್ದನ್ ಹೇಳಿದರು. ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯೂತ್ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ (NSS) …
Read More »ಯಲ್ಲಾಪುರ ತಾಲೂಕಿನ ಆನಗೋಡು ನಲ್ಲಿದೆ ಪುರಾತನ ಪ್ರಸಿದ್ಧ ಶಕ್ತಿ ಕ್ಷೇತ್ರ “ಶ್ರೀ ಗೋಪಾಲಕೃಷ್ಣ ದೇವಸ್ಥಾನ”
ಕೇಬಲ್ ನಾಗೇಶ್, ಯಲ್ಲಾಪುರಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಆನಗೋಡಿನಲ್ಲಿ ನೆಲೆ ನಿಂತ ಶ್ರೀ ಗೋಪಾಲಕೃಷ್ಣ ಸನ್ನಿಧಿ 800 ವರ್ಷ ಪುರಾತನ ಕದಂಬರ ಕಾಲದ ಇತಿಹಾಸವುಳ್ಳ ಶಕ್ತಿ ಕ್ಷೇತ್ರವಾಗಿದೆ. ಬೇಡಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾ, ರೋಗ ರುಜಿನಗಳನ್ನು ಪರಿಹರಿಸುತ್ತಾ ಪಾವನ ಕ್ಷೇತ್ರವಾಗಿದೆ. ಯಲ್ಲಾಪುರ ತಾಲೂಕಿನ ಆನಗೋಡು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಮಹತ್ವ ಮತ್ತು ಮಾಹಿತಿ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ ಯಲ್ಲಾಪುರ ಪಟ್ಟಣದಿಂದ ಸರಿಸುಮಾರು 8 ಕಿಲೋಮೀಟರ್ ಅಂಂತರವಿರುವ …
Read More »ಸ್ವಾತಂತ್ರ್ಯ ಭಾರತದಲ್ಲಿ ಇಂದಿಗು ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಕಿರವತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಣ್ಣ ಪಾನಿಗುಂಡಿ ಗ್ರಾಮ.
ಕೇಬಲ್ ನಾಗೇಶ್..🖋 ಯಲ್ಲಾಪುರಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಕಿರವತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಣ್ಣ ಪಾನಿಗುಂಡಿ ಎಂಬ ಗ್ರಾಮ ಮಕ್ಕಳು ಸೇರಿದಂತೆ 125 ಮಂದಿ ಜನಸಂಖ್ಯೆ ಹೊಂದಿರುವ 70 ವರ್ಷಕ್ಕು ಹಿಂದಿನ ಗ್ರಾಮವಾಗಿದೆ. ವಿಪರ್ಯಾಸವೆಂದರೆ ಸ್ವಾತಂತ್ರ್ಯ ಬಂದು ಇಂದಿಗು ಸರ್ಕಾರದಿಂದ ವಿದ್ಯುತ್ ಹೊರತುಪಡಿಸಿ ಬೇರಾವ ಮೂಲಭೂತ ಸೌಕರ್ಯಗಳು ಸಿಗದೆ ವಂಚಿತವಾದ ಗ್ರಾಮವಾಗಿದೆ. ಈ ಪುಟ್ಟ ಕುಗ್ರಾಮಕ್ಕೆ ತೆರಳಲು ಸಮರ್ಪಕ ರಸ್ತೆ ಇಲ್ಲ, ಕುಡಿಯುವ ನೀರಿಲ್ಲ,ಶಾಲೆ ಇಲ್ಲ,ಅಂಗನವಾಡಿ ಇಲ್ಲ ಒಟ್ಟಿನಲ್ಲಿ ಕರೆಂಟ್ …
Read More »ಆನಗೋಡು “ಶ್ರೀ ಗೋಪಾಲಕೃಷ್ಣ ಸ್ವಾಮಿ ” ದೇಗುಲದಲ್ಲಿ ಏ,8 ರಿಂದ 11 ರ ವರೆಗೆ ಅಷ್ಟಬಂಧ ಮಹೋತ್ಸವ.
ಪ್ರತಿಧ್ವನಿ ಯಲ್ಲಾಪುರ : ಸುಮಾರು 800ವರ್ಷಗಳಷ್ಟು ಹಳೆಯ ಕದಂಬರ ಕಾಲದಲ್ಲಿ ನಿರ್ಮಾಣಗೊಂಡ ಶಿಲಾಮಯ ಐತಿಹಾಸಿಕ ದೇವಸ್ಥಾನ ಯಲ್ಲಾಪುರ ತಾಲೂಕಿನ ಆನಗೋಡಿನ ಗೋಪಾಲಕೃಷ್ಣ ಸ್ವಾಮಿ ದೇವಾಲಯವಾಗಿದೆ. ಸುಧೀರ್ಘ ತಪಸ್ಸು ಮಾಡಿದ ಸಾಧಕ ಗುರುಗಳ ಸಮಾಧಿಯೂ ದೇಗುಲದ ಪರಿಸರದಲ್ಲಿದ್ದು ಬೇಡಿ ಬಂದ ಭಕ್ತರ ಇಷ್ಟಾರ್ಥಗಳನ್ನು ಸಿದ್ದಿಸುತ್ತಾ ಪ್ರಖ್ಯಾತಿ ಪಡೆದಿದೆ. ಏ.08ರಿಂದ ಏ.11ರವರೆಗೆ ನಾಲ್ಕು ದಿನಗಳ ಕಾಲ ಅಷ್ಟಬಂಧ ಮಹೋತ್ಸವವನ್ನು ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ದಿವ್ಯ ಆಶೀರ್ವಾದದೊಂದಿಗೆ ನೆರವೇರಲಿದ್ದು ಭಕ್ತ …
Read More »
Prathidvani Yellapura