
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಚವತಿ ಗ್ರಾಮದ ನಿವಾಸಿಯಾಗಿದ್ದ 41 ವರ್ಷದ ಪುರುಷ, ಇವರಿಗೆ ದಿನಾಂಕ 17-06-2026 ರಂದು Infuenza A ವೈರಲ್ ಜ್ವರ/ ಶೀತ ಜ್ವರ/ ಫ್ಲೂ ಎಂದು ಖಚಿತವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 21-06-2026 ಮರಣ ಹೊಂದಿರುತ್ತಾರೆ.

ಇವರು ದಿನಾಂಕ 10-06-2026 ರಂದು ಜ್ವರ ಕಾಣಿಸಿಕೊಂಡ ಕಾರಣ ಉಮ್ಮಚಗಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿರುತ್ತಾರೆ ಮತ್ತೆ 12-06-2026 ಜ್ವರ ಕಾಣಿಸಿಕೊಂಡ ಕಾರಣ ಮಂಚಿಕೆರಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿರುತ್ತಾರೆ. ದಿನಾಂಕ 16-06-2026 ರಂದು ಜ್ವರ ಸುಸ್ತು ಇತ್ಯಾದಿ ಲಕ್ಷಣಗಳು ಕಂಡು ಬಂದ ಕಾರಣ ದಿನಾಂಕ 16-06-2026 ರಂದು ಶಿರಸಿ ಖಾಸಗಿ ಆಸ್ಪತ್ರೆಯಲ್ಲಿ ಒಳ ರೋಗಿ ವಿಭಾಗದಲ್ಲಿ ಚಿಕಿತ್ಸೆ ನಂತರ ವೈದ್ಯರ ಸಲಹೆ ಮೇರೆಗೆ ದಿನಾಂಕ 17-06-2026 ರಂದು ಮಂಗಳೂರಿನ ಕೆ. ಎಸ್. ಹೆಗಡೆ ಆಸ್ಪತ್ರೆಯಲ್ಲಿ ಒಳ ರೋಗಿ ವಿಭಾಗದಲ್ಲಿ ಚಿಕಿತ್ಸೆಗೆ ಹೋಗಿರುತ್ತಾರೆ ಆದರೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 21-06-2026 ರಂದು ಮರಣ ಹೊಂದಿರುವುದಾಗಿ ಸಂಬಂಧಿಕರು ತಿಳಿಸಿರುತ್ತಾರೆ. ದಿನಾಂಕ 18-06-2026 ರಂದು ಆರೋಗ್ಯ ಇಲಾಖೆ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯವರು ಮನೆ ಹಾಗೂ ಕ್ಷೇತ್ರ ಭೇಟಿ ನೀಡಿ ಮನೆಯ ಇತರ ಸದಸ್ಯರಿಗೆ ತಾಲೂಕ ಆಸ್ಪತ್ರೆ ಯಲ್ಲಾಪುರದಲ್ಲಿ ಇರಿಸಿ ಸೂಕ್ತ ತಪಾಸಣೆಯೊಂದಿಗೆ ಪ್ರತ್ಯೇಕತೆಯ ತುರ್ತು ಕ್ರಮ ವಹಿಸಲಾಯಿತು. ಗ್ರಾಮದಲ್ಲಿ ಸಮೀಕ್ಷೆ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ.

Infuenza A ವೈರಲ್ ಜ್ವರ/ ಶೀತ ಜ್ವರ/ ಫ್ಲೂ ಇದು ಮೂಗು, ಗಂಟಲು ಮತ್ತು ಶ್ವಾಸಕೋಶವನ್ನು ಬಾಧಿಸುವ ಉಸಿರಾಟದ ಸಾಂಕ್ರಾಮಿಕ ಕಾಯಿಲೆಯಾಗಿದೆ.
ಸಾಮಾನ್ಯ ಲಕ್ಷಣಗಳು: ತಿವ್ರವಾದ ಜ್ವರ, ಮೈ-ಕೈ ನೋವು, ಕೆಮ್ಮು, ನೆಗಡಿ, ತಲೆ ನೋವು, ಗಂಟಲು ನೋವು ಮತ್ತು ಸುಸ್ತು.
ಹರಡುವ ವಿಧಾನ: ಸೋಂಕಿತರು ಕೆಮ್ಮಿನದಾಗ ಅಥವಾ ಸೀನಿದಾಗ ಗಾಳಿಯ ಮೂಲಕ ಇತರರಿಗೆ ಹರಡುತ್ತದೆ.
ಚಿಕಿತ್ಸೆ: ಸಾಮಾನ್ಯವಾಗಿ ಇದು ವಿಶ್ರಾಂತಿ ಹಾಗೂ ಹೆಚ್ಹಿನ ದ್ರವ ಆಹಾರ, ನೀರು ಸೇವನೆಯೊಂದಿಗೆ ವೈದ್ಯರಿಂದ ರೋಗ ಲಕ್ಷಣ ಅಧಾರಿತ ಚಿಕಿತ್ಸೆಯಿಂದ ಕಡಿಮೆಯಾಗುತ್ತದೆ.
ತಿವ್ರವಾದ ಉಸಿರಾಟದ ತೊಂದರೆ, ಎದೆ ನೋವು, ನಿರ್ಜಲೀಕರಣ, ಸುಸ್ತು, ಗೊಂದಲ ಕಂಡು ಬಂದಲ್ಲಿ ಹೆಚ್ಹಿನ ತುರ್ತು ಚಿಕಿತ್ಸೆ ಅವಶ್ಯಕತೆ ಇರುತ್ತದೆ. ಕಾರಣ ಸಾರ್ವಜನಿಕರು ಯಾವುದೇ ತರಹದ ಜ್ವರ, ಕೆಮ್ಮು, ನೆಗಡಿ, ಮೈ ಕೈ ನೋವು, ಗಂಟಲು ನೋವು, ಉಸಿರಾಟದ ತೊಂದರೆ, ಸುಸ್ತು ಇತ್ಯಾದಿ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆ/ ತಾಲೂಕ ಆಸ್ಪತ್ರೆ ಭೇಟಿ ನೀಡಿ ಸೂಕ್ತ ತಪಾಸಣೆ ಹಾಗೂ ಚಿಕಿತ್ಸೆ ಪಡೆಯಬೇಕಿದೆ. ಡಾ,ನರೇಂದ್ರ ಪವಾರ್, ತಾಲ್ಲೂಕು ಆರೋಗ್ಯಾಧಿಕಾರಿ , ಆಸ್ಪತ್ರೆ ವೈಧ್ಯಾಧಿಕಾರಿ,ಯಲ್ಲಾಪುರ








Prathidvani Yellapura