Breaking News

Monthly Archives: June 2026

ರಾಜ್ಯದಲ್ಲಿ ವಿದ್ಯುತ್ ವಿತರಣೆ ಕಾರ್ಯ ಟಾಟಾ ಪವರ್ ಗೆ ನೀಡುವ ಹುನ್ನಾರ – ಯಲ್ಲಾಪುರ ಹೆಸ್ಕಾಂನಿಂದ ಪ್ರತಿಭಟನೆ

ಪ್ರತಿಧ್ವನಿ ಯಲ್ಲಾಪುರ : ವಿದ್ಯುತ್ ವಿತರಣೆಯನ್ನು ಟಾಟಾ ಪವರ್ ಕಂಪನಿಗೆ ನೀಡುವುದನ್ನು ವಿರೋಧಿಸಿ ಪಟ್ಟಣದ ಹೆಸ್ಕಾಂ ಉಪ ವಿಭಾಗದಲ್ಲಿ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘ ಹಾಗೂ ಹೆಸ್ಕಾಂ ಸಿಬ್ಬಂದ್ದಿಗಳು ಪ್ರತಿಭಟನೆ ನಡೆಸಿದರು. ಸರಕಾರದ ನಿಲುವಿನಿಂದಾಗಿ ವಿದ್ಯುತ್ ಗುತ್ತಿಗೆದಾರರಿಗೂ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಲು ತೊಂದರೆ ಯಾಗಿ ನಿರುದ್ಯೋಗಿಗಳಾಗುತ್ತಾರೆ. ವಿದ್ಯುತ್ ಕಂಪನಿಗಳ ಅಸ್ತಿತ್ವ, ಹಿತರಕ್ಷಣೆ, ನೌಕರ ಭವಿಷ್ಯದ ದೃಷ್ಟಿಯಿಂದ ಕಾರ್ಮಿಕರ ಉದ್ಯೋಗ ಭದ್ರತೆ, ಗ್ರಾಮೀಣ ಗ್ರಾಹಕರ ಹಿತರಕ್ಷಣೆಯ ಸಲುವಾಗಿ ಟಾಟಾ …

Read More »

ಯಲ್ಲಾಪುರ ತಾಲೂಕಿನ ನೂತನ ದಂಢಾಧಿಕಾರಿಯಾಗಿ ಎಂ.ಆರ್.ಕುಲಕರ್ಣಿ ಅಧಿಕಾರ ಸ್ವೀಕಾರ.

ಪ್ರತಿಧ್ವನಿ ಯಲ್ಲಾಪುರ : ತಾಲೂಕು ದಂಢಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಚಂದ್ರಶೇಖರ ಹೊಸ್ಮನಿ ವರ್ಗಾವಣೆ ಆದ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಸರ್ಕಾರದ ಆದೇಶದಂತೆ  ಎಂ ಆರ್ ಕುಲಕರ್ಣಿ ಯವರು ಯಲ್ಲಾಪುರ ತಾಲ್ಲೂಕಿನ ನೂತನ ದಂಢಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುತ್ತಾರೆ. ಎಂ.ಆರ್.ಕುಲಕರ್ಣಿಯವರು ಮೂಲತಃ ದಾರವಾಡ ಜಿಲ್ಲೆಯವರಾಗಿದ್ದು ರಾಜ್ಯದ ವಿವಿಧ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗು ಸಿದ್ದಾಪುರದಲ್ಲಿ ಕರ್ತವ್ಯ ನಿರ್ವಹಿಸಿದ್ದು ಇದೀಗ ಯಲ್ಲಾಪುರ ತಾಲೂಕಿನ ತಹಶಿಲ್ದಾರರಾಗಿ ಜವಾಬ್ದಾರಿ ತೆಗೆದುಕೊಂಡಿರುತ್ತಾರೆ. ನೂತನ …

Read More »

ಮಂಗಳೂರು ಸಂಚಾರಿ ಪೀಠ ಸ್ಥಾಪನೆ – ಉತ್ತರ ಕನ್ನಡ ಅದರ ವ್ಯಾಪ್ತಿಗೆ ಸಮಂಜಸವಲ್ಲದ ನಡೆ – ರಾಮು ನಾಯ್ಕ್

ಪ್ರತಿಧ್ವನಿ,ಯಲ್ಲಾಪುರ : ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳ ಜನರ ಅನುಕೂಲಕ್ಕಾಗಿ ಹೈಕೋರ್ಟ್ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಆರಂಭಿಸಲು ಸರಕಾರ ಮುಂದಾಗಿದ್ದು, ಅದಕ್ಕೆ ನಮ್ಮ ವಿರೋಧವಿಲ್ಲ. ಈ ಪೀಠದ ವ್ಯಾಪ್ತಿಯಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಸೇರಿಸಲು ಹೊರಟಿದ್ದು ಮಾತ್ರ ಸರ್ವತಾ ಸಮರ್ಥನೀಯವಲ್ಲ. ಉತ್ತರ ಕನ್ನಡ ಜಿಲ್ಲೆ, ವಿಶೇಷವಾಗಿ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳು ಈ ಸೇರ್ಪಡೆಯನ್ನು ತೀವ್ರವಾಗಿ ವಿರೋಧಿಸುತ್ತೇವೆ.‌ ಕಳೆದ ಹತ್ತಾರು ವರ್ಷಗಳಿಂದ ನಾವು ಧಾರವಾಡ ಸಂಚಾರಿ ಪೀಠದ ಜೊತೆಗೆ ಗುರುತಿಸಿಕೊಂಡಿದ್ದೇವೆ. …

Read More »

ಅತಿ ಹೆಚ್ಚು ದಿನಗಳು ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳು – ರಾಮುನಾಯ್ಕ್.

ಪ್ರತಿಧ್ವನಿ ಯಲ್ಲಾಪುರ : 2014 ಮೇ 26 ರಂದು ದೇಶದ ಪ್ರಧಾನಮಂತ್ರಿ ಪದ ಸ್ವೀಕರಿಸಿದ ಮೋದಿಜೀ, ಇಂದು 4399 ದಿನಗಳನ್ನು ಪೂರೈಸಿ, ಭಾರತದ ಮೊಟ್ಟ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ದಾಖಲೆ ಮುರಿದು ಮುಂದೆ ಹೆಜ್ಜೆ ಇಟ್ಟಿದ್ದಾರೆ. ಈ ಹನ್ನೆರಡು ವರ್ಷಗಳ ಅವಧಿಯಲ್ಲಿ ದೇಶ ಅಪರಿಮಿತ ಅಭಿವೃದ್ಧಿ ಸಾಧಿಸಿದೆ. ಗಡಿಗಳು ಸಧ್ರಡಗೊಂಡಿವೆ. ಸೈನ್ಯದ ವಿಶ್ವಾಸ ಇಮ್ಮಡಿಯಾಗಿದೆ. ಮೋದಿ ಭಾರತ ಈಗ ಮೊದಲಿನಂತಿಲ್ಲ. “ಘುಸಕೆ ಮಾರೇಂಗೆ” ಕೇವಲ ಸ್ಲೋಗನ್ನಲ್ಲ, ಶತ್ರು …

Read More »

ಬೇಡ್ತಿ-ಅಘನಾಶನಿ ಕೊಳ್ಳ ಸಂರಕ್ಷಣಾ ಸಮಿತಿಯಿಂದ ವೃಕ್ಷಾಪರೋಪಣ ಹಸಿರು ಸಮಾರಂಭ.

ಕೇಬಲ್ ನಾಗೇಶ್, ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ:  ಸರ್ಕಾರಕ್ಕೆ  ಬೇಡ್ತಿ ಯೋಜನೆ ಮಾಡುವುದಕ್ಕೆ ಬಹಳ ಅವಸರ ಮತ್ತು ಆಸಕ್ತಿ. ಆದ್ದರಿಂದ ನದಿ ತಟದಿಂದ  ಗಂಗಾವಳಿ ತುದಿಯವರೆಗೂ ಜಾಗೃತಿ ನಡೆಸುವ ಕೆಲಸ ಮಾಡಬೇಕಿದೆ ಅದಕ್ಕಾಗಿ‌ ಒಗ್ಗಟ್ಟಿನಿಂದ ಮುಂದಡಿ ಇಡಬೇಕಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಪರಿಸರ ಸಂರಕ್ಷಣೆಯ ಬದ್ದತೆಯ ಕರೆ ನೀಡಿದರು. ಅವರು ಬುಧವಾರ ಬೇಡ್ತಿ ನದಿಯ ತಟದಲ್ಲಿ ಹೊಳೆ ಹುಲಿಯಪ್ಪ ಬಳಿ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ …

Read More »

ಯಲ್ಲಾಪುರದಲ್ಲಿ ಗಾಂಜಾ ಘಮಲು 50 ಸಾವಿರ ಮೌಲ್ಯದ ಗಾಂಜದೊಂದಿಗೆ ಆರೋಪಿ ಸೆರೆ.

ಕೇಬಲ್ ನಾಗೇಶ್, ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ: ತಾಲ್ಲೂಕಿನ ಕಿರವತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿ ದೊಡ್ಡ ಯಲವಳ್ಳಿ ಕ್ರಾಸ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದು 860 ಗ್ರಾಂ ತೂಕ 50 ಸಾವಿರ ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ. ದೊಡ್ಡ ಯಲವಳ್ಳಿ ನಿವಾಸಿ 64 ವರ್ಷ ವಯೋಮಾನದ ಬೈಯ್ಯ ವಾಗು ಕೊಕರೆ ಎಂಬಾತನೆ ಗಾಂಜಾ ಮಾರುತ್ತಿದ್ದ ವ್ಯಕ್ತಿಯಾಗಿದ್ದು ಖಚಿತ ಮಾಹಿತಿಯನ್ನಾಧರಿಸಿ ದಾಳಿ ಮಾಡಿದ ಯಲ್ಲಾಪುರ …

Read More »