
ಪ್ರತಿಧ್ವನಿ ಯಲ್ಲಾಪುರ – ತಾಲ್ಲೂಕಿನ ಹುಣಶೆಟ್ಟಿಕೊಪ್ಪದಲೊಂದು ನಡೆದ ದೌರ್ಜನ್ಯ ಪ್ರಕರಣ ಯಲ್ಲಾಪುರ ಠಾಣೆ ಮೆಟ್ಟಿಲೇರಿದ್ದು 15 ಜನರ ಮೇಲೆ ದೂರು ದಾಖಲಾಗಿದೆ.
ಘಟನೆ ವಿವರ – ಹುಣಶೆಟ್ಟಿಕೊಪ್ಪ ಗ್ರಾಮದ ನಿವಾಸಿ ಚಂದ್ರಕಾಂತ ನಾರಾಯಣ ತಿನೇಕರ್ ಎಂಬುವರು ಮಡದಿ ಮಕ್ಕಳೊಂದಿಗೆ ಕಿರಾಣಿ ಅಂಗಡಿ ನಟಡಸುತ್ತಾ ಜೀವನ ಸಾಗಿಸುತ್ತಿದ್ದು ಕಳೆದರಾತ್ರಿ ದಿಡೀರನೆ ಸ್ಥಳೀಯರ ಗುಂಪೊಂದು ಅಂಗಡಿ ಮೇಲೆ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಪಿರ್ಯಾದಿ ಹೆಂಡತಿ ಕೆನ್ನೆಗೆ ಹೊಡೆದು ಆತನ ಮಗನ ಮೇಲು ಹಲ್ಲೆ ಮಾಡಿರುವುದಾಗಿ ಹಾಗು. ಒಟ್ಟು 27 ಸಾವಿರ ಮೌಲ್ಯದ ಸ್ವತ್ತು ಹಾನಿಯಾಗಿರುವುದಾಗಿ ದೂರಿನಲ್ಲಿ ದಾಖಲಿಸಲಾಗಿದೆ. ಈ ಸಂಬಂಧ ಚಂದ್ರಕಾಂತ ನಾರಾಯಣ ತಿನೇಕರ ತನ್ನ ಕುಟುಂಬಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವುದಾಗಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ಎಸಗಿದ 15 ಮಂದಿಯ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ದೂರಿನಲ್ಲಿರುವ 15 ಮಂದಿ : 1) ಚಂದ್ರಕಾಂತ ಸದಾನಂದ ಕಳಸೂರಕರ 2) ವಿಜಯ್ ಕುಮಾರ್ ಬರ್ಕೆಲಾ ಕಳಸೂರಕರ 3) ಈರಪ್ಪ ಬರ್ಕೆಲಾ ಕಳಸೂರಕರ 4) ಸತೀಶ್ ಹರಿಶ್ಚಂದ್ರ ತಿನೇಕರ 5)ಚಂದ್ರಕಾಂತ ವಿಠ್ಠಲ ಮಡಕರ 6)ಸುಬಾಷ್ ಗಣಪತಿ ತೊರಸ್ಕರ್ 7)ನಾಗರಾಜ್ ಗುಂಡಪ್ಪಕರ್ 8)ಸಂತೋಷ್ ನಾಗಪ್ಪ ಕಳಸೂರಕರ 9) ದೇವರಾಜ್ ನೀಲಕಂಠ ಮರಾಠಿ 10)ಶಿವಾನಂದ ಬಾಲ ಮರಾಠಿ, 11)ರಾಜಕುಮಾರ್ ತಮ್ಮು ಕೇಸರಕರ 12) ಬಾಲಾಜೀವ ಮರಾಠಿ 13) ಸಿದ್ದೇಶ್ವರ ವೆಂಕಟರಮಣ ನಾಯ್ಡು 14)ಗಣಪತಿ ನಾಗಪ್ಪ ಕೇಸರಕರ 15)ರವಿ ರಾಜೇಂದ್ರ ತಿನೇಕರ.
ಎಂಬುವರ ಮೇಲೆ ದೂರು ದಾಖಲಿಸಲಾಗಿದೆ.
ಪ್ರಕರಣ ದಾಖಲಿಸಕೊಂಡ ಯಲ್ಲಾಪುರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



Prathidvani Yellapura