
ಪ್ರತಿಧ್ವನಿ ಯಲ್ಲಾಪುರ : ತಾಲೂಕು ದಂಢಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಚಂದ್ರಶೇಖರ ಹೊಸ್ಮನಿ ವರ್ಗಾವಣೆ ಆದ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ಸರ್ಕಾರದ ಆದೇಶದಂತೆ ಎಂ ಆರ್ ಕುಲಕರ್ಣಿ ಯವರು ಯಲ್ಲಾಪುರ ತಾಲ್ಲೂಕಿನ ನೂತನ ದಂಢಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುತ್ತಾರೆ.
ಎಂ.ಆರ್.ಕುಲಕರ್ಣಿಯವರು ಮೂಲತಃ ದಾರವಾಡ ಜಿಲ್ಲೆಯವರಾಗಿದ್ದು ರಾಜ್ಯದ ವಿವಿಧ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಿರುತ್ತಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗು ಸಿದ್ದಾಪುರದಲ್ಲಿ ಕರ್ತವ್ಯ ನಿರ್ವಹಿಸಿದ್ದು ಇದೀಗ ಯಲ್ಲಾಪುರ ತಾಲೂಕಿನ ತಹಶಿಲ್ದಾರರಾಗಿ ಜವಾಬ್ದಾರಿ ತೆಗೆದುಕೊಂಡಿರುತ್ತಾರೆ. ನೂತನ ತಹಶಿಲ್ದಾರರಿಗೆ ಇಲಾಖೆಯ ಅಧಿಕಾರಿ ವರ್ಗ ಆತ್ಮೀಯತೆಯಿಂದ ಸ್ವಾಗತಿಸಿರುತ್ತಾರೆ.


Prathidvani Yellapura