ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಜನಪ್ರಿಯ ಹಾಗು ಹೃದಯವಂತ ಶಿಕ್ಷಕ ಎನಿಸಿ ದೀರ್ಘಕಾಲ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಸೇವೆಸಲ್ಲಿಸಿದ ಎಲ್ಲರ ನೆಚ್ಚಿನ ಶಿಕ್ಷಕ ಪ್ರಕಾಶ್ ನಾಯಕ ನೇಣಿಗೆ ಶರಣಾಗಿದ್ದು ಹಿತೈಷಿ,ಬಂಧುಗಳು ಅಪಾರ ಸ್ನೇಹ ಬಳಗ ಕಂಬನಿ ಮಿಡಿದಿದೆ.ಮೂಲತಃ ಅಂಕೋಲಾ ತಾಲೂಕಿನ ಮೊಗಟಾ ಮೂಲದವರಾದ ಪ್ರಕಾಶ್ ನಾಯಕ ಕಳೆದ 30 ಕ್ಕು ಅಧಿಕ ವರ್ಷಗಳ ಯಲ್ಲಾಪುರದ ಬಾಂಧವ್ಯ ಹೊಂದಿದ್ದಾರೆ. ಶುಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ …
Read More »ಹರಳಯ್ಯಸ್ತ್ರೀ ಶಕ್ತಿ ಸಂಘದಿಂದ ಅಂಬೇಡ್ಕರ್ ಜಯಂತಿ ಆಚರಣೆ.
ಪ್ರತಿಧ್ವನಿ ಯಲ್ಲಾಪುರ : 14.4.2026 ರಂದು ಶಾರದಾಗಲ್ಲಿ ಅಂಬೇಡ್ಕರ್ ಭವನದಲ್ಲಿ ಹರಳಯ್ಯಸ್ತ್ರೀ ಶಕ್ತಿ ಸಂಘದಿಂದ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ ವಿಜೇತೆ ಸುನಂದಾ ಪಾಠಣಕರ್ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು. ಹಾಗೂ2024-25 ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಸಮರ್ಥ್ ಪಾಠಣಕರ್, ಸಂಕೇತ್ ಪಾಲೇಕರ್, ಆದಿತ್ಯ ಇವರಿಗೆ ಅವರ ಪರವಾಗಿ ಪೋಷಕರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಂಬೇಡ್ಕರ್ ಸೇವಾ ಸಂಘದ ಅಧ್ಯಕ್ಷ …
Read More »ಸನಾತನ ಧರ್ಮದ ಸಂಸ್ಕಾರ ಮತ್ತು ಸಂಸ್ಕೃತಿ ಗಳನ್ನು ಉಳಿಸಿಕೊಂಡು ಮುಂದೆ ಸಾಗಬೇಕಿದೆ – ಹೆಬ್ಬಾರ್
ಪ್ರತಿಧ್ವನಿ ಯಲ್ಲಾಪುರ : ವೈದಿಕ ಪರಂಪರೆಗೆ ಬಹುದೊಡ್ಡ ಇತಿಹಾಸವಿದೆ. ವೇದ, ಉಪನಿಷತ್ತು, ಜ್ಯೋತಿಷ್ಯ, ಸಂಸ್ಕೃತ ಇವುಗಳ ಪರಿಪೂರ್ಣ ಅಧ್ಯಯನ ಮಾಡಿದವನಿಗೆ ಸಮಾಜದಲ್ಲಿ ಸದಾ ಶ್ರೇಷ್ಠರೆನಿಸಿಕೊಳ್ಳುತ್ತಾರೆ. ಅಲ್ಲದೇ ಒಬ್ಬ ಐಎಎಸ್ ಅಧಿಕಾರಿಗಿಂತಲೂ ಗೌರವ ಪಡೆಯುತ್ತಾನೆ. ಅಂತಹ ಸನಾತನ ಧರ್ಮದಲ್ಲಿ ನಾವು ಬಂದಿದ್ದೇವೆ. ಅದನ್ನು ಉಳಿಸಿಕೊಂಡು ಹೋಗುವಲ್ಲಿ ಇಂದಿನ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು. ಅವರು, ಮಂಗಳವಾರ ಪಟ್ಟಣದ ನಾಯಕನಕೆರೆಯ ಶ್ರೀ ಶಾರದಾಂಬಾ ವೇದ, ಸಂಸ್ಕೃತ ಪಾಠಶಾಲಾ ಸಭಾಭವನದಲ್ಲಿ …
Read More »ಬಿಜೆಪಿ ವತಿಯಿಂದ ಸಂವಿಧಾನ ಶಿಲ್ಪಿ ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ..
ಪ್ರತಿಧ್ವನಿ ಯಲ್ಲಾಪುರ: ಭಾರತದ ಸಂವಿಧಾನ ಶಿಲ್ಪಿ,ಸಾಮಾಜಿಕ ನ್ಯಾಯದ ಹರಿಕಾರರು,ಶೋಷಿತರ ದ್ವನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ನಿಮಿತ್ತ ಭಾರತೀಯ ಜನತಾ ಪಾರ್ಟಿ ಯಲ್ಲಾಪುರ ಮಂಡಳ ಕಾರ್ಯಲಯ ದಲ್ಲಿ ಶ್ರದ್ದೆಯ ನಮನಗಳನ್ನು ಸಲ್ಲಿಸಿ ಪುಷ್ಪ ನಮನ ,ಸಂಸ್ಮರಣೆ ಮಾಡಲಾಯಿತು. ಈ ಸಂಧರ್ಭದಲ್ಲಿ ಮಂಡಳ ಅಧ್ಯಕ್ಷರಾದ ಪ್ರಸಾದ ಹೆಗಡೆ,ರಾಜ್ಯ ವಕ್ತಾರರಾದ ಹರಿಪ್ರಕಾಶ ಕೋಣೆಮನೆ, ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಭಟ್ಟ,ಜಿಲ್ಲಾ ವಿಶೇಷ ಆಹ್ವಾನಿತ ಸದಸ್ಯರಾದ ರಾಮು ನಾಯ್ಕ,ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ವೆಂಕಟ್ರಮಣ ಬೆಳ್ಳಿ,ಪಕ್ಷದ SC ಮೋರ್ಚಾ …
Read More »ಯಲ್ಲಾಪುರದ ತಾಲ್ಲೂಕು ಆಡಳಿತ ಹಾಗು ಸಮಾಜಕಲ್ಯಾಣ ಇಲಾಖೆ ಅಡಿ ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ.
ಪ್ರತಿಧ್ವನಿ ಯಲ್ಲಾಪುರ :ಭವ್ಯ ಭಾರತದ ಬೃಹತ್ ಪ್ರಜಾಪ್ರಭುತ್ವಕ್ಕೆ ಸಂವಿಧಾನ ನೀಡಿದ ಮಹಾ ಚೇತನ, ಜಗತ್ತಿನ ಎಲ್ಲಾ ದೇಶಗಳ ಒಳಿತನ್ನು ಆರಿಸಿ ಭಾರತ ನೆಲದ ಜೀವನ ಪದ್ದತಿಗೆ ಅನುಕೂಲ ಆಗುವಂತಹ ಮತ್ತು ದಮನಿತರ ಬದುಕು ಹಸನಾಗಿಸಲು ಸಂವಿಧಾನ ನೀಡಿದ ಮಹಾ ನಾಯಕ ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ಅವರು. ಅವರ ಜೀವನ ಶ್ರದ್ದೆ ಬದುಕಿನ ಪಥ ಅನುಕರಣೀಯ ಹಾಗು ಪ್ರಸ್ತುತ ಪೀಳಿಗೆಗೆ ಪ್ರೇರಣಾದಾಯಕ ವ್ಯಕ್ತಿತ್ವ. ಅಂತಹ ಮಹನೀಯರ ಜಯಂತಿ ಆಚರಣೆ ಅರ್ಥಪೂರ್ಣ ಎಂದು …
Read More »ದೇವರ ಕಲ್ಲಳ್ಲಿಯಲೊಂದು ಬುಡಕಟ್ಟು ಸಿದ್ದಿ ಸಮುದಾಯದ ಜಾನಪದ ಜಗತ್ತಿನ ಪರಿಚಯ.
ಕೇಬಲ್ ನಾಗೇಶ್, ಯಲ್ಲಾಪುರ.🖋 ಪ್ರತಿಧ್ವನಿ ಯಲ್ಲಾಪುರ : ನಶಿಸಿ ಹೋಗುತ್ತಿರುವ ಅನೇಕ ಸಂಸ್ಕೃತಿಗಳಲ್ಲಿ ಅರಣ್ಯ ವಾಸಿ ಬುಡಕಟ್ಟು ಸಿದ್ದಿ ಸಮುದಾಯದ ಜೀವನದೊಂದಿಗೆ ಬೆಸೆದುಕೊಂಡು ಬರುತ್ತಿರುವ ಸಂಪ್ರದಾಯ ಪರಂಪರೆ ಕಲೆ ಸಂಸ್ಕೃತಿ ಉಳಿವಿಗಾಗಿ ನಿರಂತರ ಪ್ರಯತ್ನ ಸಾಗಿದೆ. ತಾಲ್ಲೂಕಿನ ಮಂಚಿಕೇರಿ ಸಮೀಪ ದೇವರ ಕಲ್ಲಳ್ಳಿಯಲ್ಲಿ ಸಿದ್ದಿ ಸಮುದಾಯದವರೆ ಸ್ವತಃ ನಿರ್ಮಿಸಿ ಬೆಳೆಸಿಕೊಂಡು ಬರುತ್ತಿರುವ “ಸಿದ್ದಿ ಟ್ರಸ್ಟ್” ಅಡಿಯಲ್ಲಿ 1985 ರಲ್ಲಿ ಖ್ಯಾತ ರಂಗಕರ್ಮಿ ಚಿದಂಬರರಾವ್ ಜಂಬೆ ನಿರ್ದೇಶಿತ “ಕಪ್ಪು ಜನ ಕೆಂಪು …
Read More »ತ್ಯಾಗ ಮತ್ತು ಸೇವೆ ಭಾರತಿಯ ಚಿಂತನೆಯ ಅಂತರಂಗ – ಅರುಣ್ ಕುಮಾರ್ ಜಿ..
ಪ್ರತಿಧ್ವನಿ ಯಲ್ಲಾಪುರ:ಭಾರತೀಯ ಜೀವನ ಪದ್ಧತಿಯ ತಿರುಳು ತ್ಯಾಗ ಮತ್ತು ಸೇವೆ. ನಮ್ಮ ಜೀವನ ಅದಕ್ಕಾಗಿ ಮುಡಿಪಿರಬೇಕು ಎಂದು ರಾಷ್ಟ್ರೀಯ ಸವಯಂಸೇವಕ ಸಂಘದ ಕರ್ನಾಟಕದ ಪ್ರಚಾರ ವಿಭಾಗದ ಪ್ರಮುಖ ಅರುಣ ಕುಮಾರ ಹೇಳಿದರು. ವಿಸ್ವದರ್ಶನ ಸೇವಾ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಮತ್ತು ಗೋವರ್ಧನ ಗೋಶಾಲೆ ಕರಡೊಳ್ಳಿಯ ಆಶ್ರಯದಲ್ಲಿ ನಡೆದ ಭಾರತೀಯ ಜೀವನ ಶಿಕ್ಷಣ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರುನಮಗೆ ಆತಂಕ ಒತ್ತಡಗಳಿಲ್ಲ. ಹಿಂದೆ ಏನನ್ನು ಮಾಡಿದ್ದವೋ ಅದನ್ನು ಅನುಭವಿಸುತ್ತಾರೆ. …
Read More »ಯಲ್ಲಾಪುರ ಕುದಲೆ ಕುಟುಂಬದ ಕುಡಿಗೆ ಒಲಿದ “ವಿಶ್ವಕರ್ಮ ರಾಷ್ಟ್ರೀಯ ಪ್ರಶಸ್ತಿ “
ಪ್ರತಿಧ್ವನಿ ಯಲ್ಲಾಪುರ : ಹಲವು ದಶಕಗಳ ಹಿಂದಿನ ಯಲ್ಲಾಪುರದ ಮೂಲ ಕುಟುಂಬಗಳಲ್ಲಿ ಒಂದೆನಿಸಿಕೊಂಡ ಕುದಲೆ ಕುಟುಂಬದ ನಂದಕಿಶೋರ ಕುದಲೆ ಅವರಿಗೆ “ವಿಶ್ವಕರ್ಮ ರಾಷ್ಟ್ರೀಯ ಪ್ರಶಸ್ತಿ ” ಲಭಿಸಿದ್ದು ಕುದಲೆ ಕುಟುಂಬದ ನಿಕಟವರ್ತಿಗಳಿಗೆ ವಿಶೇಷವಾಗಿ ತಿಲಕ್ ಚೌಕ್ ಸಮಸ್ತ ಕುಟುಂಬಗಳಿಗೆ ಸಂತಸ ತಂದಿದೆ. ರಾಷ್ಟ್ರ ಪ್ರಶಸ್ತಿ ಪಡೆದ ನಂದಕಿಶೋರ ಕುದಲೆ ಹುಟ್ಟಿದ್ದು ಬೆಳೆದಿದ್ದು ಪ್ರಾಥಮಿಕ ಹಾಗು ಪ್ರೌಡ ಶಿಕ್ಷಣ ಪಡೆದದ್ದು ಸಹ ಇದೇ ಯಲ್ಲಾಪುರದ ನೆಲದಲ್ಲೆ. ಕುದಲೆ ಕುಟುಂಬದ ವಿಶೇಷತೆ ಎಂದರೆ …
Read More »ಖರ್ಗೆ ಕೋಮು ಪ್ರಚೋದನೆ ಭಾಷಣಕ್ಕೆ ಬಿಜೆಪಿ ಕೆಂಡಾಮಂಡಲ ಎಫ್ ಐ ಆರ್ ದಾಖಲಿಸಲು ಆಗ್ರಹ.
ಪ್ರತಿಧ್ವನಿ ಯಲ್ಲಾಪುರ : ಇತ್ತೀಚಿನ ಕೆಲ ದಿಗಳ ಹಿಂದೆ ಅಸ್ಸಾಂ ಚುನಾವಣ ಪ್ರಚಾರ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಯವರು ಕೋಮು ಪ್ರಚೋದನೆ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಯಲ್ಲಾಪುರ ಬಿಜೆಪಿ ಯುವಮೋರ್ಚಾ ವತಿಯಿಂದ ಯಲ್ಲಾಪುರ ಪೋಲಿಸ್ ಠಾಣೆಗೆ ತೆರಳಿ ಎಫ್.ಐ.ಆರ್ ಹಾಕುವಂತೆ ಆಗ್ರಹಿಸಲಾಯಿತು. ಕುರಾನ್ ನಲ್ಲಿ ಬರೆದಿರುವಂತೆ ” ನಮಾಝ್ ಮಾಡುವ ವೇಳೆ ವಿಷಸರ್ಪ ಬಂದರೆ ಕೊಲ್ಲಬೇಕು ಆರ್.ಎಸ್.ಎಸ್ ಮತ್ತು ಬಿಜೆಪಿ ಆದೇ ರೀತಿಯ ವಿಷಸರ್ಪಗಳು ಅದನ್ನು ಕೊಲ್ಲಬೇಕು ಎಂಬುದಾಗಿ ಹೇಳುವ …
Read More »ವಜ್ರಳ್ಳಿಯಲ್ಲಿ ಭಾಗ್ಯಶ್ರೀ ಸಂಜೀವಿನಿ ಒಕ್ಕೂಟದ ವಾರ್ಷಿಕೋತ್ಸವ…
ಪ್ರತಿಧ್ವನಿ ಯಲ್ಲಾಪುರ : ನಿತ್ಯ ಬದುಕಿನ ಒತ್ತಡದ ನಡುವೆಯೂಸಾಮಾಜಿಕ ಚಟುವಟಿಕೆಗಳಲ್ಲಿ ಮಹಿಳೆಯರು ಭಾಗವಹಿಸುವ ಮೂಲಕ ಉತ್ತಮ ಕೊಡುಗೆ ನೀಡಲು ಸಶಕ್ತವಾಗಬೇಕಾದರೆ ಸಂಘಟನೆ ಸಾರ್ಥಕವಾಗಿರಬೇಕು.ಜೀವನ ನಿರ್ವಹಣೆಯಲ್ಲಿ ಹೆಣ್ಣು ಜವಾಬ್ದಾರಿ ಹೊತ್ತು ನಿಂತಾಗ ಅದು ಪ್ರಾಮಾಣಿಕ ಸೇವೆಯ ಫಲ ಸಿಗುವಂತಾಗುತ್ತದೆ. ಸಂಜೀವಿನಿ ಒಕ್ಕೂಟದ ಮಹಿಳೆಯರ ಆರ್ಥಿಕ ಭದ್ರತೆಯ ಜೊತೆಗೆ ಜೀವ ವಿಮಾ ಸೌಲಭ್ಯ ಎಲ್ಲರಿಗೂ ಸಿಗುವಂತೆ ಆಗಬೇಕು.ಎಂದು ಸರ್ವೋದಯ ಶಿಕ್ಷಣ ಸಮಿತಿಯ ಅಧ್ಯಕ್ಷ ಡಿ.ಶಂಕರ ಭಟ್ಟ ಹೇಳಿದರು. ತಾಲೂಕಿನ ವಜ್ರಳ್ಳಿಯ ಭಾಗ್ಯಶ್ರೀ ಸಂಜೀವಿನಿ …
Read More »
Prathidvani Yellapura