
ಪ್ರತಿಧ್ವನಿ ಯಲ್ಲಾಪುರ : ಗ್ಯಾರಂಟಿ ಹೆಸರನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ ಯಲ್ಲಾಪುರ ದಲ್ಲಿ ಕನ್ನಡ ಶಾಲೆಯಲ್ಲಿ ಬಿಸಿಊಟಕ್ಕೆ ಆಹಾರಧಾನ್ಯದ ಕೊರತೆಯಾಗಿದ್ದು ಶಾಲಾ ಮಕ್ಕಳ,ಶಿಕ್ಷಕರ ಪರಿಸ್ಥಿತಿ ನೋಡಿ ಅತ್ಯಂತ ದುಃಖವೆನೆಸಿದೆ.
ಈ ಆಡಳಿತ ವ್ಯವಸ್ಥೆ ಜನಪರವೇ?
ಈ ಆಡಳಿತ ವ್ಯವಸ್ಥೆ ಮಾನವೀಯತೆ ಯಿಂದ ಕೂಡಿದೆಯೇ?
ಸರಕಾರದ ಅವ್ಯವಸ್ಥೆ ಗೆ ಇದೊಂದು ಕೈಗನ್ನಡಿ.
ಈ ಆಡಳಿತ ವ್ಯವಸ್ಥೆ ಗೆ ಏನನ್ನು ಹೇಳಬೇಕು
ಶಾಲಾಮಕ್ಕಳಿಗೆ ಯಲ್ಲಾಪುರ ದಲ್ಲಿ ಅಕ್ಕಿಯ ಆಹಾರ ಧಾನ್ಯ ದ ಕೊರತೆಗೆ ಕಾರಣವೇನು ಎಂಬುದನ್ನು ತಕ್ಷಣ ಸಂಬಂಧಿಸಿದ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಳ್ಳಬೇಕು.
ಒಂದು ವೇಳೆ ಯಲ್ಲಾಪುರ ತಾಲ್ಲೂಕಿನಲ್ಲಿ ಶಾಲೆಯಲ್ಲಿ ಅಕ್ಕಿಯ ಸರಬರಾಜನಲ್ಲಿ ಟೆಂಡರ್ ವ್ಯವಸ್ಥೆ ಸಮಸ್ಯೆ ಆದರೆ ತಕ್ಷಣ ಅದರ ಬಗ್ಗೆ ಅವಲೋಕನಮಾಡಿ
ಇನ್ನೂ ಒಂದು ವಾರದಲ್ಲಿ ಈ ಸಮಸ್ಯೆ ಬಗೆಹರಿಸಿ ,ಕೆಲ ಶಾಲೆ ಯಲ್ಲಿ ಆಹಾರ ಧಾನ್ಯ ದ ಕೊರತೆ ಮುಂದುವರಿದರೇ ಬಿಜೆಪಿ ನಿಯೋಗ ಆ ಶಾಲೆಗಳಿಗೆ ಬೇಟಿ ನೀಡಿ ಸಂಭಂದಿಸಿದ ಅಧಿಕಾರಿಗಳನ್ನು ಆ ಶಾಲೆಗೆ ಕರೆಸುತ್ತೇವೆ.ಇಲ್ಲ ಸಮಸ್ಯೆ ಇದ್ದರೇ ತಿಳಿಸಿ,ಮಕ್ಕಳಿಗಾಗಿ ಅಕ್ಕಿ ಯನ್ನು ಪ್ರತಿಮನೆಯಿಂದ ಸಂಗ್ರಹಿಸಿ ಶಾಲೆಗೆ ನೀಡುತ್ತೇವೆ.
ತಕ್ಷಣ ಎಚ್ಚೆತ್ತುಕೊಂಡು ಟೆಂಡರ್ ಪ್ರಕ್ರಿಯೆ ಸರಿಪಡಿಸಿ ಶಾಲಾ ಮಕ್ಕಳಿಗೆ ಯಾವುದೇ ಸಮಸ್ಯೆ ಉದ್ಬವಿಸದೇ ಇರುವ ಹಾಗೆ ಕ್ರಮಕೈಗೊಳ್ಳಬೇಕಾಗಿ ಬಿಜೆಪಿ ಯಲ್ಲಾಪುರ ಮಂಡಳ ಆಗ್ರಹಿಸುತ್ತದೆ.
ಮೊಟ್ಟೆಯ ದರ ವನ್ನು ಶಿಕ್ಷಕರಿಗೆ ಸರಿಯಾಗಿ ಪಾವತಿಸಿ – ಶಾಲಾ ಶಿಕ್ಷಕರು ಕೋಳಿ ಮೊಟ್ಟೆಗೆ ಮಾರುಕಟ್ಟೆಯಲ್ಲಿ 6 ರಿಂದ 7 ರುಪಾಯಿ ನೀಡಿ ಖರೀದಿಸುತ್ತಿದ್ದು ಸರಕಾರದಿಂದ ಕೇವಲ 4 ರುಪಾಯಿ ನೀಡುತ್ತಿದ್ದಾರೆ. ಈ ವಿಚಾರವನ್ನು ಕೆಲ ಶಿಕ್ಷಕರು ನೊಂದುಕೊಂಡು ಮಾತನಾಡುವುದನ್ನು ಕೇಳಿದ್ದೇವೆ. ಇಂತಹ ಅವ್ಯವಸ್ಥೆ ಸರಿಪಡಿಸಿ ಎಂದು ಯಲ್ಲಾಪುರ ಬಿಜೆಪಿ ಮಂಡಳ ಆಗ್ರಹಿಸುತ್ತದೆ ಎಂದು ಮಂಡಳಾಧ್ಯಕ್ಷ ಪ್ರಸಾದ್ ಹೆಗಡೆ ಆಗ್ರಹಿಸಿದ್ದಾರೆ.





Prathidvani Yellapura