
ಕೇಬಲ್ ನಾಗೇಶ್ ಯಲ್ಲಾಪುರ..🖋
ಪ್ರತಿಧ್ವನಿ ಯಲ್ಲಾಪುರ : ಸರಕಾರ ಬಸವಣ್ಣ ನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ ಪ್ರತಿಯೊಂದು ಕಚೇರಿಯಲ್ಲಿ ಅವರ ಫೋಟೋ ಹಾಕುವದು ಕಡ್ಡಾಯಗೊಳಿಸಿದ್ದಾರೆ ಅದರಡಿ ಕಾರ್ಯ ನಿರ್ವಹಿಸುವ
ಎಲ್ಲ ಅಧಿಕಾರಿಗಳು , ಸಿಬ್ಬಂದಿಗಳು ಕಾಯಕವೇ ಕೈಲಾಸ ವೆಂದು ಸಾರಿದ ಬಸವಣ್ಣನವರ ಆದರ್ಶವನ್ನು ಪಾಲಿಸುವಂತಾಗಬೇಕು ಎಂದು ಅಖಿಲಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ಅಲ್ಲಯ್ಯನವರಮಠ ಹೇಳಿದರು.
ಅವರು ಮಂಗಳವಾರ ತಾಲೂಕಡಳಿತ ಸೌಧದ ಸಭಾಭವನದಲ್ಲಿ ತಾಲೂಕಡಳಿತ ಪ ಪಂ, ವೀರಶೈವ ಲಿಂಗಾಯತ ಸಂಘಟನೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರರ ಭಾವಚಿತ್ರ ಕ್ಕೆ ಪೂಜೆ, ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ತಾಲೂಕು ಆಡಳಿತದಿಂದ ಪತ್ರಕರ್ತೆ ಪ್ರಭಾವತಿ ಗೋವಿಯವರನ್ನು ಸನ್ಮಾನಿ ಗೌರವಿಸಲಾಯಿತು. ನಂತರ ಮಾತನಾಡಿ ಇಂದು ಸಂಸತ್ ನಲ್ಲಿ ಮಹಿಳಾ ಮೀಸಲಾತಿ ನೀಡಲು ಮೀನ ಮೇಷ ಎನಿಸುತ್ತಿರುವದನ್ನು ನಾವು ಕಾಣಬಹುದಾಗಿದೆ. ಆದರೆ ಬಸವಣ್ಣ ನವರು ಹನ್ನೆರಡನೇ ಶತಮಾನದಲ್ಲಿಯೇ ಮಹಿಳೆಯರಿಗೆ ಅಭಿಪ್ರಾಯ ವ್ಯಕ್ತ ಪಡಿಸಲು ಅವಕಾಶ ನೀಡಿ ಸಮಾನತೆಯಿಂದ ಕಾಣುವ ಮೂಲಕ ಮಹಿಳೆಯರ ಕೀರ್ತಿ ಗೌರವ ಹೆಚ್ಚಿಸಿದ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ ಎಂದರು.

ಪ್ರಸ್ತುತ ಸಮಾಜಕ್ಕೆ ಬಸವಣ್ಣನವರ ಆದರ್ಶ ಮತ್ತು ವಚನಗಳು ಹೇಗೆ ಪ್ರಸ್ತುತ ಎಂಬುದನ್ನು ವಿವರಿಸಿ ಸಮುದಾಯದ ಪ್ರಮುಖ ಸಿದ್ಧಾರ್ಥ ನಂದೊಳ್ಳಿ ಮಠ ಶ್ರೀ ಬಸವೇಶ್ವರ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಉಪತಹಸೀಲ್ದಾರ್ ಕೆ ಎಚ್ ಫರ್ನಾಂಡಿಸ್, ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ,ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಸಂಜೀವ ಕುಮಾರ ಹೊಸ್ಕೆರಿ,ಅ ಭಾ ವೀ ಮಹಾಸಭಾ ದ ಪ್ರಮುಖರಾದ ಮಹೇಶಗೌಳಿ, ಗುರುಪಾದಯ್ಯ ನಂದೊಳ್ಳಿಮಠ, ಜಯರಾಜ್, ಅಧಿಕಾರಿಗಳಾದ ಗೀತಾ ಜಾಧವ, ನಾಗೇಶ ಮಲಮೇತ್ರಿ, ಎಫ್ ಎಚ್ ಬಾಸುರ, ಇತರರು ಇದ್ದರು.
ಲೆಕ್ಕಧಿಕಾರಿ ಶ್ರೀಧರ ಮಡಿವಾಳ ನಿರ್ವಹಿಸಿದರು.








Prathidvani Yellapura