ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಮಾಗೋಡು ಕಾಲೋನಿ ಹಿರಿಯಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಕುಮಾರಿ ಶ್ರಾವ್ಯ ಶ್ರೀರಾಮ ಹೆಗಡೆ 2026 ನೇ ಸಾಲಿನ ನವೋದಯ ಪ್ರವೇಶ ಪರೀಕ್ಷೆಯಲ್ಲಿ ಆಯ್ಕೆಯಾಗಿರುತ್ತಾಳೆ. ಶ್ರೀರಾಮ ಹೆಗಡೆ ಮತ್ತು ಸೌಮ್ಯ ಭಾಗ್ವತ ಶಿಕ್ಷಕ ದಂಪತಿಗಳ ಮಗಳಾಗಿರುತ್ತಾಳೆ. ಶಾಲೆಯ ಎಲ್ಲ ಶಿಕ್ಷಕರು ಎಸ್ ಡಿ ಎಮ್ ಸಿ ಯವರು ಊರ ನಾಗರಿಕರು ವಿದ್ಯಾರ್ಥಿನಿಯ ಸಾಧನೆಯನ್ನು ಅಭಿನಂದಿಸಿದ್ದಾರೆ. .
Read More »Yearly Archives: 2026
ಯಲ್ಲಾಪುರದಲ್ಲಿ ನಡೆದ ಯುಗಾದಿ ಉತ್ಸವದ ಜಾಗೃತಿಗಾಗಿ ಬೃಹತ್ ಬೈಕ್ ರ್ಯಾಲಿ.
ಪ್ರತಿಧ್ವನಿ ಯಲ್ಲಾಪುರ : ಹಿಂದುಗಳ ನೂತನ ವರ್ಷಾರಂಭ ಯುಗಾದಿ ಯಿಂದ ಪ್ರಾರಂಭಗೊಳ್ಳುವ ಹಿನ್ನೆಲೆಯಲ್ಲಿ ಯಲ್ಲಾಪುರದಲ್ಲಿ ಯುಗಾದಿ ಉತ್ಸವವನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಉತ್ಸವದ ಜಾಗೃತಿಗಾಗಿ ಮಂಗಳವಾರ ಬೃಹತ್ ಬೈಕ್ ರ್ಯಾಲಿ ಜರುಗಿತು. ಪಟ್ಟಣ ಕಾಳಮ್ಮನಗರ ಕಾಳಮ್ಮದೇವಾಲಯದಲ್ಲಿ ಪೂಜೆ ನೆರವೇರಿಸಿ ಪ್ರಾರಂಭಗೊಂಡ ಬೈಕ್ ರ್ಯಾಲಿಗೆ ಉತ್ಸವ ಸಮಿತಿ ಪ್ರಮುಖರು ಹಿರಿಯರು ಚಾಲನೆ ನೀಡಿದರು. ಪಟ್ಟಣಾಧ್ಯಂತ ಸಂಚರಿಸಿದ ಬೈಕ್ ರ್ಯಾಲಿ ಗ್ರಾಮದೇವಿ ದೇವಸ್ಥಾನದಲ್ಲಿ ಸಮಾಪ್ತಿಗೊಂಡಿತು. ರ್ಯಾಲಿ ಯಲ್ಲಿ ನೂರಾರು ಬೈಕ್ ಗಳು …
Read More »ನಾಳೆಯಿಂದ ವಿದ್ಯಾರ್ಥಿ ದಿಸೆಯ ಪ್ರಮುಖ ಘಟ್ಟ “ಎಸ್.ಎಸ್.ಎಲ್.ಸಿ” ಪರಿಕ್ಷೆ ಪ್ರಾರಂಭ- ಸಿದ್ದತೆಯಲ್ಲಿ ಶಿಕ್ಷಣ ಇಲಾಖೆ.
ಪ್ರತಿಧ್ವನಿ ಯಲ್ಲಾಪುರ : ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವೆಂದೇ ಕರೆಯುವ ಎಸ್.ಎಸ್.ಎಲ್.ಸಿ ಪರೀಕ್ಷಗಳು ಬುಧವಾರದಿಂದ ಆರಂಭಗೊಳ್ಳಲಿದ್ದು ಪರೀಕ್ಷೆ ಕಾರ್ಯದ ಪೂರ್ವ ತಯಾರಿ ಸಂಪೂರ್ಣಗೊಂಡು ಅಂತಿಮ ಹಂತದ ಕೆಲಸಗಳು ನಡೆಸಲಾಗುತ್ತಿದೆ. ಯಲ್ಲಾಪುರ ತಾಲೂಕಿನಲ್ಲಿ ಒಟ್ಟು 6 ಪರೀಕ್ಷಾ ಕೇಂದ್ರಗಳಿದ್ದು 986 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮಾ,18-ಕನ್ನಡ, 23-ವಿಜ್ಞಾನ, 25-ದ್ವಿತೀಯ ಭಾಷೆ, 28-ಗಣಿತ, 30-ತೃತಿಯ ಭಾಷೆ, ಏ,2-ಸಮಾಜ ವಿಜ್ಞಾನ ಪರೀಕ್ಷೆಗಳು ಜರುಗಲಿದೆ.ಪರೀಕ್ಷೆಗಳು ಸುಗಮವಾಗಿ ನಡೆಸುವ ದೃಷ್ಟಿಯಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ಪರೀಕ್ಷಾ ಕೇಂದ್ರಗಳ ಸುತ್ತ …
Read More »ಇಂದು ಮದ್ಯಾಹ್ನ ಯಲ್ಲಾಪುರದಲ್ಲಿ ಯುಗಾದಿ ಉತ್ಸವ ನಿಮಿತ್ತ ಧರ್ಮ ಜಾಗೃತಿ ಬೈಕ್ ರ್ಯಾಲಿ.🚩
ಪ್ರತಿಧ್ವನಿ ಯಲ್ಲಾಪುರ : ಹಿಂದುಗಳ ನೂತನ ವರ್ಷದ ಆಗಮನಕ್ಕೆ ಎರಡು ದಿನಗಳು ಬಾಕಿ ಇರುವಂತೆ ಯುಗಾದಿ ಉತ್ಸವ ನಿಮಿತ್ತ ಧರ್ಮ ಜಾಗೃತಿಗಾಗಿ ಬೃಹತ್ ಬೈಕ್ ರ್ಯಾಲಿ ಮದ್ಯಾಹ್ನ 3 ಗಂಟೆಗೆ ಕಾಳಮ್ಮ ದೇವಿ ದೇವಾಲಯದಿಂದ ಚಾಲನೆ ದೊರೆಯಲಿದ್ದು ಸಮಸ್ತ ಹಿಂದು ಕುಲಕೋಟಿ ಬಂಧುಗಳು ಆಗಮಿಸಿ ಬೈಕ್ ರ್ಯಾಲಿ ಯಲ್ಲಿ ಪಾಲ್ಗೊಳ್ಳುವಂತೆ ಸಮಿತಿಯವರು ಗೌರವಪೂರ್ವಕ ಧರ್ಮ ಕರೆ ನೀಡಿದ್ದಾರೆ.ಯುಗಾದಿ ಉತ್ಸವದ ಹಿನ್ನೆಲೆಯಲ್ಲಿ ಸಮಸ್ತ ಯಲ್ಲಾಪುರ ಕೇಸರಿಮಯವಾಗಿದ್ದು ಬೈಕ್ ರ್ಯಾಲಿ ಸಾಗುವ ಮಾರ್ಗದುದ್ದಕ್ಕು …
Read More »ಯಲ್ಲಾಪುರದ ಬಿಲ್ಲಿಗದ್ದೆ ಪರಿಸರದಲ್ಲಿ ಅರಣ್ಯ ಅತಿಕ್ರಮಣ ಇದು ಅರಣ್ಯರೋಧನ.!!
ಕೇಬಲ್ ನಾಗೇಶ್, ಯಲ್ಲಾಪುರ 🖋 ಪ್ರತಿಧ್ವನಿ ಯಲ್ಲಾಪುರ : ಪಟ್ಟಣ ಪಂಚಾಯತ ವ್ಯಾಪ್ತಿಗೆ ಬರುವ ಬಿಲ್ಲಿಗದ್ದೆ ಎಂಬಲ್ಲಿ ಹೊಸದಾಗಿ ಅರಣ್ಯ ಅತಿಕ್ರಮಣ ಮಾಡಿರುವುದಲ್ಲದೆ ಅರಣ್ಯ ಇಲಾಖೆಯ ಭಯವಿಲ್ಲದೆ ನಿಧಾನವಾಗಿ ಅಪ್ಪಟ ಅರಣ್ಯವನ್ನು ತೋಟ ಮಾಡುವ ಹುನ್ನಾರ ನಡೆಸಲಾಗುತ್ತಿದೆ ಎಂಬ ಮಾತುಗಳು ಸ್ಥಳೀಯವಾಗಿ ಕೇಳಿ ಬರುತ್ತಿದೆ. ಕಾರಣ ಕಳೆದ ಎರಡು ವರ್ಷಗಳ ಹಿಂದೆ ಕೊಂಡುಕೊಂಡ ಸ್ಥಳಕ್ಕೆ ಹೊಂದಿಕೊಂಡ ಬೆಲೆಬಾಳುವ ಅಪ್ಪಟ ಅರಣ್ಯ ಭೂಮಿಯನ್ನು ಕಬಳಿಸುವ ಹುನ್ನಾರ ನಡೆಸಲಾಗಿದೆ.ಇಷ್ಟೆಲ್ಲಾ ಅವಾಂತರಗಳ ನಡುವೆ ಅರಣ್ಯ …
Read More »ಆರ್.ವಿ.ದೇಶಪಾಂಡೆ ಹುಟ್ಟು ಹಬ್ಬದ ನಿಮಿತ್ತ ಗ್ರಾಮದೇವಿಯರಿಗೆ ಉಡಿ ತುಂಬಿ ವಿಶೇಷಪೂಜೆ ಸಲ್ಲಿಕೆ.
ಪ್ರತಿಧ್ವನಿ ಯಲ್ಲಾಪುರ : ನಾಡಿನ ಹಿರಿಯ ರಾಜಕಾರಣಿ ಉತ್ತರ ಕನ್ನಡ ಜಿಲ್ಲೆಯ ಧೀಮಂತ ನಾಯಕ ಮಾಜಿ ಮಂತ್ರಿ ಹಾಲಿ ಹಳಿಯಾಳ ಕ್ಷೇತ್ರದ ಶಾಸಕ ,ರಾಜ್ಯ ಆಡಳಿತ ಸುಧಾರಣಾ ಶುಓಗದ ಅಧ್ಯಕ್ಷ ಆರ್ ವಿ ದೇಶಪಾಂಡೆ ಅವರಿಗೆ ಹುಟ್ಟು ಹಬ್ಬದ ಸಂಭ್ರಮ. ತನ್ನಿಮಿತ್ತ ಯಲ್ಲಾಪುರದ ಶಕ್ತಿ ದೇವತೆಯರಾದ ಗ್ರಾಮದೇವಿಯರಿಗೆ ಉಡಿ ತುಂಬಿ ಅವರ ಆಯುಷ್ಯ,ಆರೋಗ್ಯ , ಸಂಪತ್ತು ಮತ್ತು ಇನ್ನೂ ಹೆಚ್ಚಿನ ಅಧಿಕಾರ ಸಿಗಲೆಂದು ದೇಶಪಾಂಡೆ ಆಪ್ತರು ಪಕ್ಷದ ಪ್ರಮುಖರಾದ ಡಿ …
Read More »ಬಿಸಿಲ ಧಗೆಗೆ ಬಾಯಾರಿಕೆ ಹೆಚ್ಚಾಗಿ ಎಳನೀರು, ಕಲ್ಲಂಗಡಿ ಹಣ್ಣಿಗೆ ಮೊರೆಹೋದ ಯಲ್ಲಾಪುರದ ಜನತೆ.
ಪ್ರತಿಧ್ವನಿ ಯಲ್ಲಾಪುರ : ಬೇಸಿಗೆಯ ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಬಿಸಿಲ ಹೊಡೆತಕ್ಕೆ ಜನ ಹೈರಾಣಾಗಿ ಹೋಗಿದ್ದಾರೆ. ಬಾಯಾರಿಕೆ ನೀಗಿಸಲು ಎಳನೀರು ಮತ್ತು ಕಲ್ಲಂಗಡಿ ಹಣ್ಣಿಗೆ ಮೊರೆಹೋಗಿದ್ದಾರೆ. ಹಿಂದೆ ಒಮ್ಮೆ 50 ರುಪಾಯಿಗೆ ಜಿಗಿದ ಎಳನೀರು ದರ ವಾಪಸ್ ಬರಲೇ ಇಲ್ಲ ಇದೀಗ ಸಾಕಷ್ಟು ಪ್ರಮಾಣದಲ್ಲಿ ಎಳನೀರು ಸರಬರಾಜಾಗದೆ ದೂರದ ಮಂಡ್ಯ ಮದ್ದೂರಿನಿಂದ ಸಪ್ಲೆ ಬರುತ್ತಿದೆ. ಆ ಕಾರಣದಿಂದ ಸಾರಿಗೆ ವೆಚ್ಚ ಹೆಚ್ಚಾಗುತ್ತಿರುವುದು ವ್ಯಾಪಾರಸ್ಥರು ಗ್ರಾಹಕರಿಗೆ ಕಡಿಮೆ ಹಣಕದಕೆ ನೀಡಲು …
Read More »ಯುಗಾದಿ ಉತ್ಸವಕ್ಕೆ ಕೆಸರಿಮಯವಾಗುತ್ತಿದೆ ಯಲ್ಲಾಪುರ. ಪ್ರತಿ ಮನೆಯ ಮೇಲೆ ಹಾರಲಿ ಭಗವಾಧ್ವಜ
ಪ್ರತಿಧ್ವನಿ ಯಲ್ಲಾಪುರ : ಯುಗಾದಿ ಹಿಂದುತ್ವದ ಭಾವಬುನಾದಿಆತ್ಮೀಯ ಹಿಂದು ಬಂಧುಗಳೆ ಕೆಲವೇ ದಿನಗಳಲ್ಲಿ ಯುಗಾದಿ ಹಬ್ಬ ಬರುತ್ತಲಿದ್ದು ಪ್ರತಿ ಹಿಂದುಗಳ ಮನೆಯ ಮೇಲೆ ಭಗವಾಧ್ವಜ ಹಾರಿಸಬೇಕು.ಧ್ವಜವನ್ನು ತಂದು ಯಾರೋ ಕೊಡುತ್ತಾರೆ ಎಂದು ನಿರ್ಲಕ್ಷಿಸದೆ ನಿಮ್ಮ ಸ್ವಂತ ಹಣದಲ್ಲಿ ಕೇಸರಿ ಧ್ವಜ ತಂದು ಯುಗಾದಿ ಹಬ್ಬದ ದಿನ ಮುಂಜಾನೆ ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸಿ ಮುಂದಿನ ಏಳೇಳು ಜನುಮವು ಇದೇ ಪವಿತ್ರ ಭಾರತ ನೆಲದಲ್ಲಿ ಅದುಸಹ ಹಿಂದು ಧರ್ಮದಲ್ಲೆ ಹುಟ್ಟುವಂತೆ …
Read More »ಅಸಹಾಯಕ ತಾಯಿಯ ಕರುಳಿನ ಕೂಗು – ನನ್ನ ಮಗನ ಚಿಕಿತ್ಸೆಗೆ ನೆರವು ನೀಡಿ -ಬದುಕಿಸಿ..🙏
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ವಿನಾಯಕನಗರ ( ಚೌಡೇಶ್ವರಿ ದೇವಸ್ಥಾನ ಅಂಕೋಲೆಕರ್ ಕಾಂಪೌಂಡ್) ನಿವಾಸಿ ಮಿತೇಶ್ ವಿ ಭಟ್ (24) ಎಂಬ ಯುವಕನಿಗೆ ವಿಚಿತ್ರ ಕಾಯಿಲೆಯೊಂದು ದೇಹ ಹೊಕ್ಕಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದು ಆರ್ಥಿಕವಾಗಿ ಅತ್ಯಂತ ದುರ್ಬಲರಾದ ಕುಟುಂಬಕ್ಕೆ ಸಹೃಧಯ ನಾಗರಿಕರ ಕೈಲಾದ ಸಹಾಯವನ್ನು ಯುವಕನ ಅಸಹಾಯಕ ತಾಯಿ ಪ್ರಭಾವತಿ ಎಂಬುವರು ಮನವಿ ಮಾಡಿದ್ದಾರೆ. ಯುವಕನ ತಾಯಿ ಪ್ರಭಾವತಿಯವರ ಮನವಿ.ಆತ್ಮೀಯರೆನನ್ನ ಹೆಸರು ಪ್ರಭಾವತಿ ವಿಶ್ವೇಶ್ವರ ಭಟ್ಟ 48 ವರ್ಷ, …
Read More »ಕಿರವತ್ತಿಯಲ್ಲಿ ಅಧಿಕೃತವಾಗಿ ಉದ್ಘಾಟನೆಗೊಂಡ ಪೊಲೀಸ್ ಉಪಠಾಣೆ
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ಕಿರವತ್ತಿ ಅತಿ ದೊಡ್ಡ ಪಂಚಾಯತವಾಗಿದ್ದು ವಿಶಾಲವಾದ ಭೂ ವ್ಯಾಪ್ತಿ ಹೊಂದಿದೆ. ಪಟ್ಟಣದಿಂದ 20 ಕಿಲೋಮೀಟರ್ ದೂರವಿದ್ದು ಇಲ್ಲಿಯೆ ಒಂದು ಪೊಲೀಸ್ ಉಪಠಾಣೆ ಇದ್ದರೆ ಸಾರ್ವಜನಿಕರಿಗೆ ಕಾನೂನು ಸುವ್ಯವಸ್ಥೆ ಬಲಪಡಿಸಲು ಹಾಗು ಸಾರ್ವಜನಿಕರಿಗೆ ಸೇವೆ ತ್ವರಿತವಾಗಿ ತಲುಪಲು ಸಾದ್ಯವಾಗಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.ಅವರು ತಾಲೂಕಿನ ಕಿರವತ್ತಿ ಗ್ರಾಮದಲ್ಲಿ ನೂತನ ಪೋಲಿಸ್ ಉಪಠಾಣೆಯನ್ನು ಉದ್ಘಾಟಿಸಿ …
Read More »
Prathidvani Yellapura