

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ವಿನಾಯಕನಗರ ಸಾರ್ವಜನಿಕ ಗಜಾನನೋತ್ಸವ ಸಮಿತಿ ಅಡಿಯಲ್ಲಿ ಒಂಬತ್ತನೆ ವರ್ಷದ ಚೌತಿ ಗಣಪನ ಸಂಭ್ರಮಾಚರಣೆ ವಿಜ್ರಂಭಣೆಯಿಂದ ಜರುಗುತ್ತಿದ್ದು ಐದು ದಿನಗಳ ಕಾಲವಪೂಜಿಸಲ್ಪಡುವ ಗಣಪನ ಸಾನಿಧ್ಯದಲ್ಲಿ ಸೆ,17 ರ ಗುರುವಾರದಂದು ಗಣಹವನ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ ಎಂದು ಸಮಿತಿ ಅಧ್ಯಕ್ಷ ಶ್ಯಾಮಸುಂದರ ಭಾಸ್ಕರ ಆಚಾರಿ ಪ್ರತಿಧ್ವನಿ ಗೆ ತಿಳಿಸಿದ್ದಾರೆ.

ದಿನಾಂಕ 14 ರಂದು ಪ್ರತಿಷ್ಟಾಪಿಸಲ್ಪಟ್ಟ ಗಣಪತಿಯು ಸತತ ಐದು ದಿನಗಳ ಕಾಲ ಶ್ರದ್ದಾ ಭಕ್ತಿಯಿಂದ ಪೂಜೆ ಪುನಸ್ಕಾರಗಳು ಜರುಗಲಿದ್ದು. 17 ಕ್ಕೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆದು 18 ರಂದು ವಿಶೇಷ ಪೂಜೆ,ಫಲಾವಳಿ ಸವಾಲು ಜರುಗಿ ವಿಸರ್ಜನೆ ನಡೆಯಲಿದೆ.

ಈ ಎಲ್ಲಾ ಶ್ರದ್ದಾ ಭಕ್ತಿ ಕಾರ್ಯಕ್ರಮಗಳಲ್ಲಿ ಸಮಸ್ತ ಸಾರ್ವಜನಿಕರು ಪಾಲ್ಗೊಂಡು ಅನ್ನಪ್ರಸಾದ ಸ್ವೀಕರಿಸಿ ತನು,ಮನ,ಧನ ಸಹಾಯದೊಂದಿಗೆ ಗಜಮುಖನ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿ ಅಧ್ಯಕ್ಷ ಶ್ಯಾಮಸುಂದರ ಭಾಸ್ಕರ ಆಚಾರಿ ಕೋರಿದ್ದಾರೆ.




















Prathidvani Yellapura