

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಕಟ್ಟಿಗೆ ಡಿಪೋ “ಸಾರ್ವಜನಿಕ ಶ್ರೀ ಗಜಾನನೋತ್ಸವ ಸಮಿತಿ ” ಆವಾರದಲ್ಲಿ ಪ್ರಸಕ್ತ ವರ್ಷ ಚೌತಿ ಗಣಪತಿಯ ಧಾರ್ಮಿಕ ಆರಾಧನೆಯೊಂದಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ಆಯೋಜನೆಗೊಂಡಿದೆ ಸಾರ್ವಜನಿಕರು ಭಾಗವಹಿಸಿ ನಗದು ಬಹುಮಾನದೊಂದಿಗೆ ಪ್ರಶಸ್ತಿ ಗಳಿಸಬಹುದಾಗಿದೆ.
ದಿನಾಂಕ 18-9-26 ರಂದು ಶುಕ್ರವಾರ ಸಂಜೆ 6-30 ಕ್ಕೆ ಸಮಿತಿ ಆವಾರದಲ್ಲಿ “ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ” ಐತಿಹಾಸಿಕ ಮತ್ತು ಪೌರಾಣಿಕ ಪಾತ್ರಗಳ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿದೆ.


ಸ್ಪರ್ಧಾ ವಿವರ.
ಸ್ಪರ್ಧೆಯು ಎರಡು ವಿಭಾಗದಲ್ಲಿ ನಡೆಸಲಾಗುತ್ತಿದ್ದು ಹಿರಿಯರ ಮತ್ತು ಕಿರಿಯರ ವಿಭಾಗದಲ್ಲಿ ನಡೆಯಲಿದೆ. 4 ರಿಂದ 10 ವರ್ಷ ವಯೋಮಿತಿ ಕಿರಿಯರ ವಿಭಾಗ 11 ರಿಂದ 21 ವಯೋಮಿತಿ ಹಿರಿಯರ ವಿಭಾಗ
ನಿಯಮಗಳು.
⏺ ಸ್ಪರ್ಧೆಯು ಐತಿಹಾಸಿಕ ಮತ್ತು ಪೌರಾಣಿಕ ಪಾತ್ರಗಳಿಗೆ ಮಾತ್ರ ಸೀಮಿತವಾಗಿರಬೇಕು.
⏺ ಪ್ರತಿ ಸ್ಪರ್ಧಿಗೆ 2 ನಿಮಿಷಗಳ ಕಾಲಾವಕಾಶ ಮಾತ್ರ.
⏺ ಅಪಾಯಕಾರಿ ಮತ್ತು ಹಾನಿಕಾರಕ ವಸ್ತುಗಳನ್ನು ಬಳಸುವಂತಿಲ್ಲ.
⏺ ತೀರ್ಪುಗಾರರ ತೀರ್ಮಾನವೆ ಅಂತಿಮ.
ಹಿರಿಯರ ಮತ್ತು ಕಿರಿಯರ ವಿಭಾಗಕ್ಕೆ ಪ್ರತ್ಯೇಕವಾಗಿ
ಪ್ರಥಮ ಬಹುಮಾನ – 3000
ದ್ವಿತೀಯ ಬಹುಮಾನ – 2000
ತೃತೀಯ ಬಹುಮಾನ – 1000 ನಗದು ಬಹುಮಾನ ನೀಡಲಾಗುವುದು.

ಸಂಜೆ 7-30 ಕ್ಕೆ ಯಲ್ಲಾಪುರದ ಭಾರತಿ ನೃತ್ಯ ಕಲಾ ಕೇಂದ್ರದ ಸುಮ ವೆಂಕಟರಮಣ ಮತ್ತು ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ಜರುಗಲಿದೆ.
ದಿನಾಂಕ 19-9-26 ರಂದು ಶನಿವಾರ ಸಂಜೆ 6-30 ಕ್ಕೆ ಸಮಿತಿ ಆವಾರದಲ್ಲಿ “ವೈಯಕ್ತಿಕ ಕನ್ನಡ ಚಲನಚಿತ್ರ ಗೀತೆಗೆ ನೃತ್ಯ ಸ್ಪರ್ಧೆ” ಏರ್ಪಡಿಸಲಾಗಿದೆ.
ಸ್ಪರ್ಧಾ ವಿವರ.
ಸ್ಪರ್ಧೆಯು ಎರಡು ವಿಭಾಗದಲ್ಲಿ ನಡೆಸಲಾಗುತ್ತಿದ್ದು ಹಿರಿಯರ ಮತ್ತು ಕಿರಿಯರ ವಿಭಾಗದಲ್ಲಿ ನಡೆಯಲಿದೆ. 6 ರಿಂದ 14 ವರ್ಷ ವಯೋಮಿತಿ ಕಿರಿಯರ ವಿಭಾಗ 15 ರಿಂದ 21ವರ್ಷ ವಯೋಮಿತಿ ಹಿರಿಯರ ವಿಭಾಗ.

ನಿಯಮಗಳು.
⏺ ಪ್ರತಿಯೊಬ್ಬ ಸ್ಪರ್ಧಿಯು ಒಬ್ಬರೆ ನೃತ್ಯ ಪ್ರದರ್ಶಿಸಬೇಕು.
⏺ ಕನ್ನಡ ಚಲನ ಚಿತ್ರಗೀತೆಗಳಿಗೆ ಮಾತ್ರ ಅವಕಾಶ.
⏺ ನೃತ್ಯಕ್ಕೆ ಗರಿಷ್ಟ 5 ನಿಮಿಷಗಳ ಕಾಲಾವಕಾಶ.
⏺ ಅಶ್ಲೀಲ ಅಥವಾ ಆಕ್ಷೇಪಾರ್ಹ ಗೀತೆಗಳ ನೃತ್ಯಕ್ಕೆ ಅವಕಾಶವಿಲ್ಲ.
⏺ ನೃತ್ಯದ ಕೌಶಲ್ಯ,ಲಯ,ಹಾವಭಾವ,ವೇಷಭೂಷಣ ಮತ್ತು ವೇದಿಕೆ ನಿರ್ವಣೆಯ ಆಧಾರದ ಮೇಲೆ ತೀರ್ಪು ನೀಡಲಾಗುವುದು.
⏺ ತೀರ್ಪುಗಾರರ ತೀರ್ಮಾನವೆ ಅಂತಿಮ.
ಹಿರಿಯರ ಮತ್ತು ಕಿರಿಯರ ವಿಭಾಗಕ್ಕೆ ಪ್ರತ್ಯೇಕವಾಗಿ
ಪ್ರಥಮ ಬಹುಮಾನ – 5001
ದ್ವಿತೀಯ ಬಹುಮಾನ -3001
ತೃತೀಯ ಬಹುಮಾನ – 2001 ನೀಡಲಾಗುವುದು.
ಮೇಲಿನ ಎಲ್ಲಾ ಸ್ಪರ್ಧೆಗಳನ್ನು ಶ್ರೀಮತಿ ಜ್ಯೋತಿ ಸಂತೋಷ್ ನಾಯ್ಕ್ ನಿರ್ವಹಿಸುತ್ತಿದ್ದು ಸ್ಪರ್ಧಿಗಳು ತಮ್ಮ ಹೆಸರನ್ನು ಇವರ ಬಳಿಯಲ್ಲಿ ನೊಂದಾಯಿಸಿಕೊಳ್ಳಬಹುದಾಗಿದೆ.
ಸಂಪರ್ಕ ಸಂಖ್ಯೆ.
7892236019-7019900957
ಕರೆಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ವಿ.ಸೂ-ಪ್ರತಿ ಸ್ಪರ್ಧೆಗು 50 ರುಪಾಯಿ ಪ್ರವೇಶ ಶುಲ್ಕ ನಿಗಧಿಪಡಿಸಲಾಗಿದೆ.




















Prathidvani Yellapura