Breaking News

ಯಲ್ಲಾಪುರ ಪಟ್ಟಣ ಸಮೀಪದ ಅರಣ್ಯದಲ್ಲಿ ಶ್ರೀಗಂಧ ಚೋರರ ಕರಾಮತ್ತು ಗಂಧದ ಮರ ಕಡಿದ ಕಳ್ಳರು.


ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಸಮೀಪದಲ್ಲಿರುವ ನಾರಾಯಣಪುರ ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಕಳ್ಳರು ತಮ್ಮ ಕೈಚಳಕ ತೋರಿದ್ದು ಗುಣಮಟ್ಟದ ಮತ್ತು ಉತ್ತಮ ತಿರುಳಿರುವ ಗಂಧದ ತುಂಡುಗಳನ್ನು ಹೊತ್ತೊಯ್ದು ತಿರುಳಿಲ್ಲದ ಎಳೆಯ ತುಂಡುಗಳನ್ನು ಸ್ಥಳದಲ್ಲೆ ಬಿಟ್ಟು ಹೋಗಿದ್ದಾರೆ.


ಸ್ಥಳದಲ್ಲಿ ಕಳ್ಳರು ಬಿಟ್ಟು ಹೋದ 44 ಕೆಜಿ ಬುಡಚಿ ಮತ್ತು ತಿರುಳಿಲ್ಲದ ತುದಿ ಭಾಗ 85 ಕೆಜಿ ತೂಕದ ತುಂಡುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ನ್ಯಾಯಾಧೀಶರ ಅನುಮತಿ ಪಡೆದು ಪ್ರಥಮ ವರ್ತಮಾನ ವರದಿ ಸಲ್ಲಿಸಲಾಗಿದೆ.


ಪಟ್ಟಣ ವ್ಯಾಪ್ತಿಯಲ್ಲಿ ಬೆಳೆದು ಉತ್ತಮ ತಿರುಳು ಹೊಂದಿರುವ ಮರಗಳು ಅಲ್ಲಲ್ಲಿ ಕಾಣಿಸುತ್ತಿದ್ದು ಇಂದಲ್ಲ ನಾಳೆ ಕಳ್ಳರ ಪಾಲಾಗುವ ಸಾಧ್ಯತೆ ಹೆಚ್ಚಿದೆ. ಅರಣ್ಯ ಇಲಾಖೆ ಇಂತಹ ಮರಗಳನ್ನು ಇಲಾಖೆಯ ನಿಯಮಾವಳಿ ಅಡಿಯಲ್ಲಿ ಸರ್ಕಾರದ ಸಮ್ಮತಿ ಪಡೆದು ಕಟಾವು ಮಾಡಿ ವಶಕ್ಕೆ ಪಡೆದರೆ ರಾಜ್ಯ ಬೊಕ್ಕಸಕ್ಕೆ ಒಂದಷ್ಟು ಆರ್ಥಿಕ ವರಮಾನ ಸೇರ್ಪಡೆ ಆಗಲಿದೆ. ಅಲ್ಲದೆ ಇಂತಹ ಮರಗಳನ್ನು ಕಳ್ಳರು ಕಡಿಯುವ ಸಂದರ್ಭದಲ್ಲಿ ಸಾರ್ವಜನಿಕರು ಕಂಡಾಗ ಅವರ ಮೇಲೆ ಹಲ್ಲೆಯಾಗುವ ಅಥವ ಜೀವಕ್ಕೆ ಅಪಾಯವಾಗುವ ಸಾದ್ಯತೆ ಇದ್ದು ಈ ಕುರಿತು ಇಲಾಖೆ ಗಂಭೀರವಾಗಿ ಗಮನಹರಿಸಿ ಶ್ರೀಗಂಧದ ಮರಗಳ ವಿಚಾರದಲ್ಲಿ ಸೂಕ್ತ ನಿಲುವುತಾಳ ಬೇಕಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ.

ವಿಶೇಷ ಎಂದರೆ ಯಲ್ಲಾಪುರ ತಾಲೂಕಿನಲ್ಲಿ ನಡೆದ ಬಹುತೇಕ ಶ್ರೀಗಂಧದ ಕಳ್ಳತನ ಪ್ರಕರಣಗಳಲ್ಲಿ ಮರ ಕಡಿದ ಕಳ್ಳರು ಇದುವರೆಗು ಪತ್ತೆಯಾದ ಉದಾಹರಣೆಗಳಿಲ್ಲ, ಯಾವುದಾದರು ಪ್ರಕರಣದಲ್ಲಿ ಕಳ್ಳರ ಸೆರೆಯಾದರೆ ಅದು ಬಾಕಿ ಕಳ್ಳರಿಗೆ ಎಚ್ಚರಿಕೆ ಆಗಲಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ಕಟ್ಟಿಗೆ ಡಿಪೋ ಸಾರ್ವಜನಿಕ ಗಜಾನನೋತ್ಸವ ಸಮಿತಿ ಆವಾರದಲ್ಲಿ ವಿವಿಧ ಸ್ಪರ್ಧಾ ಕಾರ್ಯಕ್ರಮ ಆಯೋಜನೆ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಕಟ್ಟಿಗೆ ಡಿಪೋ “ಸಾರ್ವಜನಿಕ ಶ್ರೀ ಗಜಾನನೋತ್ಸವ ಸಮಿತಿ ” ಆವಾರದಲ್ಲಿ ಪ್ರಸಕ್ತ ವರ್ಷ ಚೌತಿ …

Leave a Reply

Your email address will not be published. Required fields are marked *