

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಕ್ರಿಯಾಶೀಲ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ನಂದೊಳ್ಳಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಮಂಗಳವಾರ ಬೇಟಿ ನೀಡಿದರು.

ಸೊಸೈಟಿ ಯ ಅಭಿವೃದ್ಧಿ ವೇಗಕ್ಕೆ ಸಂತಸವಾಗಿ ಉತ್ತಮ ಆರ್ಥಿಕ ವ್ಯವಹಾರ, ಸಾರ್ವಜನಿಕ ವಲಯದಲ್ಲಿ ಸೊಸೈಟಿಯ ಸೇವಾ ಪ್ರಕ್ರಿಯೆ ಮತ್ತು ಗ್ರಾಹಕ ಸ್ನೇಹಿ ಸಂಸ್ಥೆಯಾಗಿ ಮತ್ತಷ್ಟು ಪ್ರಗತಿ ಸಾಧಿಸಲೆಂದು ಶುಭ ಹಾರೈಸಿದರು.

ಈ ಸಂದರ್ಭಲ್ಲಿ ಪಿ.ಎಲ್.ಡಿ ಬ್ಯಾಂಕ ಅಧ್ಯಕ್ಷರ ಆರ್.ಎಸ್ ಭಟ್ಟ. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕರ ವಿ.ಎಸ್.ಭಟ್ಟ. ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಗಣೇಶ ಹೆಗಡೆ ಸವಣಗೆರೆ, ಪಟ್ಟಣ ಪಂಚಾಯತ ಮಾಜಿ ಉಪಾಧ್ಯಕ್ಷ ಅಮಿತ ಅಂಗಡಿ,ಸೊಸೈಟಿಯ ಅಧ್ಯಕ್ಷರು, ಉಪಾಧ್ಯಕ್ಷರು , ನಿರ್ದೇಶಕರು ಮತ್ತು ಹೆಬ್ಬಾರ ಅಭಿಮಾನಿಗಳು ಉಪಸ್ಥಿತರಿದ್ದರು.




















Prathidvani Yellapura