Breaking News

Monthly Archives: August 2026

ಶಾಂತಿ ಕ್ರಾಂತಿ ರಿ ರಿಲೀಸ್ ಆಗಲಿ ರವಿಚಂದ್ರನ್ ಗೆಲ್ಲಲಿ – ಸಾಮಾಜಿಕ ಜಾಲತಾಣದಲ್ಲಿ ಸಕತ್ ಹವಾ..

ಪ್ರತಿಧ್ವನಿ ಯಲ್ಲಾಪುರ : ಸಾಮಾಜಿಕ ಜಾಲತಾಣದಲ್ಲಿ ಯಾವುದೇ ವಿಭಾಗ ತೆರೆದರು ಒಂದೇ ಬೇಡಿಕೆ ಹಾಡುಗಳ ಮೂಲಕ ಮಾತಿನ ಮೂಲಕ ನೃತ್ಯಗಳ ಮೂಲಕ ಅಷ್ಟೇಕೆ ತಾವು ನಿತ್ಯ ಮಾಡುವ ತಮ್ಮ ವೃತ್ತಿಯ ಮೂಲಕ ಶಾಂತಿಕ್ರಾಂತಿ ಕನ್ನಡ ಚಲನ ಚಿತ್ರವನ್ನು ಮತ್ತೊಮ್ಮೆ ರೀ ರಿಲೀಸ್ ಮಾಡಬೇಕೆಂದು ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಅವರಿಗೆ ಒತ್ತಾಯಿಸುತ್ತಿದ್ದಾರೆ. 90 ರ ದಶಕದಲ್ಲಿ ಆಗಲೆ‌ ಪ್ಯಾನ್ ಇಂಡಿಯಾ ಚಿತ್ರ ನೀಡಿದ ಹೆಗ್ಗಳಿಕೆ ನಮ್ಮ ಕನ್ನಡ ಚಿತ್ರರಂಗದ್ದು ಅದರಲ್ಲು …

Read More »

ಯಲ್ಲಾಪುರ ಪೊಲೀಸರ ಕಾರ್ಯಾಚರಣೆ ನೈಜ ವಾರಸುದಾರರ ಕೈ ಸೇರಿದ ಮೊಬೈಲ್ ಫೋನ್ ಗಳು

ಪ್ರತಿಧ್ವನಿ ಯಲ್ಲಾಪುರ :  ಯಲ್ಲಾಪುರ ಪೊಲೀಸರ CEIR ಪೋರ್ಟಲ್ ಕಾರ್ಯಾಚರಣೆ – ಹತ್ತು ಮೊಬೈಲ್ ವಾರಸುದಾರರ ಕೈಗೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಕಳೆದುಕೊಳ್ಳುವುದು ಅಥವ ಕಳ್ಳತನವಾಗುವ ಪ್ರಕರಣಗಳು ಹೆಚ್ಚುತ್ತಲಿವೆ,ಪೊಲೀಸರು ವಿವಿಧ ರೂಪದಲ್ಲಿ ಜಾಗೃತಿ ಮೂಡಿಸುತ್ತಾ ಬಂದರು ಮೊಬೈಲ್ ಕಳೆದುಕೊಳ್ಳುವ ಪ್ರಕರಣಗಳು ಹೆಚ್ಚತ್ತಲೆ ಇವೆ.ಯಲ್ಲಾಪುರ ಪೊಲೀಸರು ಮೊಬೈಲ್ ಕಾಣೆಯಾದ ಪ್ರಕರಣಗಳ ಬೆನ್ನು ಹತ್ತಿದ್ದು CEIR ಪೊರ್ಟಲ್ ಮೂಲಕ 10 ಮೊಬೈಲ್ ಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ತಲುಪಿಸಿದ್ದಾರೆ. ಈ ಸಂದರ್ಭದಲ್ಲಿ ಪಿಎಸ್ಐ …

Read More »

ಯಲ್ಲಾಪುರದ ಸ್ವರ ಮಾಧುರಿ ಸಂಗೀತ ವಿದ್ಯಾಲಯದ ಆಶ್ರಯದಲ್ಲಿ ಗುರು ಪೂರ್ಣಿಮಾ ನಿಮಿತ್ತ ನಾದ ಪೂರ್ಣಿಮಾ ಸಂಗೀತ ಕಾರ್ಯಕ್ರಮ.

ಪ್ರತಿಧ್ವನಿ ಯಲ್ಲಾಪುರ – ತಾಲೂಕಿನ ಹೆಸರಾಂತ ಸಂಗೀತ ವಿದ್ಯಾಲಯವಾಗಿ ಗುರುತಿಸಿಕೊಂಡ ರಮೇಶ್ ಹೆಗಡೆ ಸಾರಥ್ಯದ ” ಸ್ವರ ಮಾಧುರಿ ಸಂಗೀತ ವಿದ್ಯಾಲಯ ” ಆಶ್ರಯದಲ್ಲಿ ತಟಗಾರ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ ಪ್ರಾಂಗಣದಲ್ಲಿ ಗುರು ಪೂರ್ಣಿಮಾ ನಿಮಿತ್ತ ಮತ್ತು ದಿ, ಸಂಗೀತ ಉಡುಪ ಗುರುಗಳ ಸ್ಮರಣಾರ್ಥವಾಗಿ ನಾದ ಪೂರ್ಣಿಮಾ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವೇ|ಶ್ರೀ, ನಾಗಪತಿ ಹೆಗಡೆ ದೇವಾಲಯದ ಅರ್ಚಕರು ಕಾರ್ಯಕ್ರಮ ಉದ್ಘಾಟಿಸಿ ಶುಭಕೋರಿದರು, ದೇವಸ್ಥಾನದ ಅಧ್ಯಕ್ಷ ಗೋಪಾಲ ಹಂಗಾರಿ …

Read More »

ಯಲ್ಲಾಪುರ ಅಂಬೇಡ್ಕರ್ ನಗರದ ಸರ್ಕಲ್ ನಲ್ಲಿ ಕುಸಿಯುವ ಭೀತಿಯಲ್ಲಿದೆ ಹಳೆಯ ಮನೆ – ಜನರೆ ಎಚ್ಚರ.!!

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಅಂಬೇಡ್ಕರ್ ನಗರದ ಅಕ್ಬರ್ ಅಂಗಡಿ ಸರ್ಕಲ್ ನಲ್ಲಿ ಚಚ್೯ ರಸ್ತೆಯಲ್ಲಿರುವ ಕಲಾಲ್ ಕುಟುಂಬಕ್ಕೆ ಸೇರಿದ ನೂರಕ್ಕು ಅಧಿಕ ವರ್ಷಗಳ ಹಿಂದಿನ ಹಳೆಯ ಮನೆಯೊಂದು ನಿಧಾನವಾಗಿ ಕುಸಿಯುತ್ತಲಿದ್ದು ಅಪಾಯದ ಮಟ್ಟಕ್ಕೆ ತಲುಪಿದೆ. ಸದ್ಯ ಕುಸಿಯುವ ಸ್ಥಿತಿಯಲ್ಲಿರುವ ಹಳೆಯ ಮನೆಯಲ್ಲಿ ಇಲ್ಲಿಯವರೆಗು ವಾಸವಾಗಿದ್ದ ಕುಟುಂಬ ಬೇರೆಡೆಗೆ ಸ್ಥಳಾಂತರವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ,ಆದರೆ ಮನೆಯ ಹಿಂಬಾಗದ ಮಚ್ಚೀಗಲ್ಲಿಗೆ ಹೋಗುವ ರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸಲು ಭಯಪಡುತ್ತಿದ್ದಾರೆ,ಕಾರಣ ಮನೆಯ ಗೋಡೆಯ ಇಟ್ಟಿಗೆಗಳು ನಿಧಾನವಾಗಿ …

Read More »

ವೈಯಕ್ತಿಕ ದ್ವೇಷವೋ ಅಡಿಕೆ ಗಿಡಗಳ ಮೇಲಿನ ಆಕ್ರೋಶವೊ ದುಷ್ಕರ್ಮಿಗಳ ಕೃತ್ಯಕ್ಕೆ ಬಲಿಯಾದ ಅಡಿಕೆ ಗಿಡಗಳು.

ಪ್ರತಿಧ್ವನಿ ಯಲ್ಲಾಪುರ : ಅತಿಕ್ರಮಣ ಅರಣ್ಯ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದರೆ ಅರಣ್ಯ ಇಲಾಖೆಯವರು ತೆರವುಗೊಳಿಸುವುದು ಎಲ್ಲರಿಗು ತಿಳಿದ ವಿಚಾರ ಆದರೆ ಇಲ್ಲೊಬ್ಬ ಕೃಷಿಕರ ಮಾಲ್ಕಿ ಜಾಗದಲ್ಲಿ ನೆಟ್ಟಿರುವ ಅಡಿಕೆ ಗಿಡಗಳನ್ನು ಕತ್ತರಿಸಿರುವುದು ಅಕ್ಷಮ್ಯ ಮತ್ತು ಕೆಟ್ಟ ಸಂಪ್ರದಾಯಕ್ಕೆ ದಾರಿ ಮಾಡಿದಂತಾಗಿದೆ. ಯಲ್ಲಾಪುರ ತಾಲೂಕಿನ ನಂದೊಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಹುಲುಗಾನ ಗ್ರಾಮದ ಸರ್ವೇ ನಂಬರ್ 38/2 ರಲ್ಲಿ ಸುಬ್ರಾಯ ವೆಂಕಟರಮಣ ಭಟ್ ಎಂಬುವರ ತೋಟದ ಮದ್ಯ ಭಾಗದಲ್ಲಿ ಮಕ್ಕಳಂತೆ …

Read More »

ಮಂಗಳೂರು ಸಂಚಾರಿ ಪೀಠದ ವ್ಯಾಪ್ತಿಗೆ ಉತ್ತರ ಕನ್ನಡ ಜಿಲ್ಲೆಸೇರ್ಪಡೆ ವಿರೋಧಿಸಿ ಯಲ್ಲಾಪುರದಲ್ಲಿ ವಕೀಲರಿಂದ ಪತ್ರ ಚಳುವಳಿ..

ಪ್ರತಿಧ್ವನಿ ಯಲ್ಲಾಪುರ : ಹೈಕೋರ್ಟ್ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಆರಂಭಿಸಲು ಸರಕಾರ ಮುಂದಾಗಿದ್ದು ಉತ್ತರ ಕನ್ನಡ ಜಿಲ್ಲೆಯನ್ನು ಅದರ ವ್ಯಾಪ್ತಿಗೆ ಸೇರಿಸಲು ಹೊರಟಿರುವುದಕ್ಕೆ ನಮ್ಮ ವಿರೋದವಿದೆ ಈ ಸಂಬಂಧ ಮುಖ್ಯ ನ್ಯಾಯ ಮೂರ್ತಿಗಳಿಗು, ರಾಜ್ಯಪಾಲರಿಗೆ ಹಾಗು ಮುಖ್ಯಮಂತ್ರಿಗಳಿಗೆ ಪತ್ರ ವಕೀಲರಿಂದ ಪತ್ರ ಚಳುವಳಿ ಪ್ರಾರಂಭಿಸಲಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷ ವಿ.ಟಿ.ಭಟ್ ಹೇಳಿದರು. ಅವರು ಪಟ್ಟಣದ ನ್ಯಾಯಾಯಲದ ಆವರಣದಲ್ಲಿ ಹಮ್ಮಿಕೊಂಡ ಮಂಗಳೂರು ಸಂಚಾರಿ ಪೀಠದ ವ್ಯಾಪ್ತಿಗೆ ಉತ್ತರಕನ್ನಡ ಜಿಲ್ಲೆ ಸೇರ್ಪಡೆ …

Read More »

“ಅಖಿಲ ಕರ್ನಾಟಕ ಅಹಿಂದ ವೇದಿಕೆ” ಯಲ್ಲಾಪುರ ನಗರ ಘಟಕ ಸ್ಥಾಪನೆ  – ದ್ಯಾಮಣ್ಣ ಬೋವಿ ವಡ್ಡರ್.

ಪ್ರತಿಧ್ವನಿ ಯಲ್ಲಾಪುರ : ರಾಜ್ಯದಲ್ಲಿ ಅಹಿಂದ ಪರವಾದ ಧ್ವನಿ ಎತ್ತುವ ಸಲುವಾಗಿ ಈಗಾಗಲೆ” ಅಖಿಲ ಕರ್ನಾಟಕ ಅಹಿಂದ ವೇದಿಕೆ ” ಸ್ಥಾಪಿಸಿದ್ದು ಪ್ರಾರಂಭಿಕ ಹಂತದಲ್ಲಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಘಟಕಗಳನ್ನು ಅನುಷ್ಟಾನಗೊಳಿಸಲು ಮುಂದಾಗಿದ್ದು ಇದೀಗ ಯಲ್ಲಾಪುರ ನಗರ ಘಟಕಕ್ಕೆ ಆಸಕ್ತ ಸದಸ್ಯರು ಸೇರಬಹುದಾಗಿದೆ ಎಂದು “ಅಖಿಲ ಕರ್ನಾಟಕ ಅಹಿಂದ ವೇದಿಕೆ ಸ್ಥಾಪಕಾಧ್ಯಕ್ಷ ದ್ಯಾಮಣ್ಣ ಬೋವಿ ವಡ್ಡರ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ಮೂಲಕ ಮನವಿ ಮಾಡಿದ್ದಾರೆ. ” ಅಖಿಲ ಕರ್ನಾಟಕ …

Read More »

ಯಲ್ಲಾಪುರ ತಾಲೂಕಿನ ಕೃಷಿ ಕ್ಷೇತ್ರದ ಸುತ್ತ ಒಂದು ಸುತ್ತು

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ರೈತರು ಪ್ರಮುಖವಾಗಿ ಭತ್ತ, ಮೆಕ್ಕೆಜೋಳ, ಕಬ್ಬು ಬೆಳೆಗಳನ್ನು ಬೆಳೆಯುತ್ತಾರೆ. ಮಳೆ ಮತ್ತು ಬೆಳೆ ಪರಿಸ್ಥಿತಿ:-ಮಳೆ:- ಈ ವರ್ಷ ಆಗಸ್ಟ್ 05 ರವರೆಗೆ ವಾರ್ಷಿಕ ವಾಡಿಕೆ ಮಳೆ 1798.00 ಮಿಮೀ ಆಗಬೇಕಾಗಿದ್ದು, ಈವರೆಗೆ 1305.40 ಮಿಮೀ ಮಳೆಯಾಗಿರುತ್ತದೆ. ಒಟ್ಟು 492.60 ಮಿಮೀ ಮಳೆ ಕೊರತೆಯಾಗಿದ್ದು ಶೇ. 27.39 ರಷ್ಟು ಮಳೆ ಕೊರತೆಯಾಗಿರುತ್ತದೆ.ಜೂನ್ ತಿಂಗಳಲ್ಲಿ ವಾಡಿಕೆ ಮಳೆ 533 ಮಿಮೀ ಆಗಬೇಕಿದ್ದು ಕೇವಲ 214 ಮಿಮೀ ಮಳೆಯಾಗಿದ್ದು …

Read More »

ಯಲ್ಲಾಪುರ ಕನ್ನಡ ವೈಶ್ಯ ಸಮಾಜದ  ದಾಮೋದರ್ ಶೆಟ್ಟಿ ನಿಧನ

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಕನ್ನಡ ವೈಶ್ಯ ಸಮಾಜ ಬಾಂಧವರ ಪ್ರೀತಿಯ “ದಾಮಣ್ಣಾ”, ಯಲ್ಲಾಪುರ ಸಮಸ್ತ ನಾಗರಿಕರ ಪ್ರೀತಿಯ “ಅಂಕೋಲೆ ಶೆಟ್ರು” ಎಂದೇ ಪ್ರಸಿದ್ದಿ ಪಡೆದಿದ್ದ  ದಾಮೋದರ್ ಶೆಟ್ಟಿ ಅವರು ಬುಧವಾರ ನಿಧನರಾಗಿದ್ದು ಅಪಾರ ಬಂಧುಬಳಗ ಹಿತೈಷಿಗಳನ್ನು ಅಗಲಿದ್ದಾರೆ. ಮೃತರು ಯಲ್ಲಾಪುರದ ಹಿರಿಯರು ದಿವಂಗತರಾದ ಕಾಮಾಕ್ಷಿ ಗಜಾನನ ಭಟ್, ನಾಗೇಶ್ ಶಾನಬಾಗ್ ಹಾಗು ಇನ್ನಿತರ ಪ್ರಮುಖರ ಶಾಲಾ ಜೀವನದ ಗೆಳೆಯರಾಗಿದ್ದರು. ಯಲ್ಲಾಪುರದ ಹೃದಯಭಾಗದಲ್ಲಿ ಕಿರಾಣಿ ಅಂಗಡಿಯನ್ನು ನಡೆಸುತ್ತಾ  ತಾಲೂಕಿನ ನಾಗರಿಕರ …

Read More »

ಬಿಡುಗಡೆಗು ಮುನ್ನವೆ ವಿಶೇಷ ಪ್ರದರ್ಶನಗಳಲ್ಲಿ ಪ್ರೇಕ್ಷಕರ ಮನಗೆದ್ದ “ಓಹ್ ಮೈ ಡಾಗ್” ಚಲನಚಿತ್ರ

ಪ್ರತಿಧ್ವನಿ ಯಲ್ಲಾಪುರ : ಆಗಸ್ಟ್ 7ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಚಿತ್ರ ನಿರ್ಮಾಪಕ ಅಮಿತ್ ರೈ ಅವರ ಕುಟುಂಬ ಸಮೇತ ನೋಡಬಹುದಾದ ‘ಓಹ್ ಮೈ ಡಾಗ್’ ಚಿತ್ರವು, ಬಿಡುಗಡೆಗೂ ಮುನ್ನವೇ ದೇಶಾದ್ಯಂತ ಹಮ್ಮಿಕೊಂಡಿದ್ದ ವಿಶೇಷ ಪ್ರದರ್ಶನಗಳಲ್ಲಿ ಪ್ರೇಕ್ಷಕರ ಮನ ಗೆಲ್ಲುತ್ತಿದೆ ಭಾರತದ ವಿವಿಧ ನಗರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ನಂತರ, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ವಿಶೇಷ ಪ್ರದರ್ಶನದಲ್ಲೂ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. . …

Read More »