
ಪ್ರತಿಧ್ವನಿ,ಯಲ್ಲಾಪುರ – ತಾಲೂಕಿನ ಆರ್ತಿ ಬೈಲ್ ಘಟ್ಟದಲ್ಲಿ ಗುರುವಾರ ಮುಂಜಾನೆ ಲಾರಿ ಮತ್ತು ಟ್ರಾಕ್ಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ತೆರಳುತ್ತಿದ್ದ 9 ( ಚಾಲಕನು ಸೇರಿದಂತೆ ) ಜನ ಯಾತ್ರಿಕರಲ್ಲಿ ಒಟ್ಟು 6 ಮಂದಿ ಮೃತಪಟ್ಟಿದ್ದು ಉಳಿದ 3 ಮಂದಿ ಗಾಯಗೊಂಡವರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ರವಾನಿಸಲಾಗಿದೆ.


ದಾರವಾಡ ಮೂಲದ ಎಲ್ಲರು ಧರ್ಮಸ್ಥಳ ಹಾಗು ಇತರೆಡೆಗೆ ಪ್ರವಾಸಕ್ಕೆಂದು ತೆರಳುತ್ತಿದ್ದರು. ಗುರುವಾರ 2-30 ರ ಮುಂಜಾನೆ ವೇಳೆ ಆರ್ತಿ ಬೈಲ್ ಘಟ್ಟದಲ್ಲಿ ಅಂಕೋಲಾ ಕಡೆಯಿಂದ ಯಲ್ಲಾಪುರದ ಕಡೆಗೆ ಬರುತ್ತಿದ್ದ ಲಾರಿಗು ಯಲ್ಲಾಪುರದ ಕಡೆಯಿಂದ ಅಂಕೋಲ ಕಡೆಗೆ ಸಾಗುತ್ತಿದ್ದ ಟ್ರಾಕ್ಸ್ ಗು ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಕ್ರೂಸರ್ ನಲಿದ್ದ 6 ಮಂದಿ ಸಾವನಪ್ಪಿದ್ದಾರೆ ಉಳಿದ ಮೂವರು ಗಾಯಗೊಂಡಿದ್ದಾರೆ.

ಮೃತರು ದಾರವಾಡ ಮೂಲದ ಸಂಜೀವ ಮೈಲಾರ ಅಂಗಡಿ ( 33) ಕುರುಬಗಟ್ಟಿ,ಅಕ್ಷಯ ತೇಜಪ್ಪ ಮರಳವರ(26), ಅಭಿಷೇಕ ಈಶ್ವರ (28), ಅಭಿಷೇಕ ಮಲ್ಲೇಶ ಮಡಬಾವಿ (27), ಬಸಪ್ಪ ದೇವಪ್ಪ ಕನಕನವರ (38), ಮಂಜುನಾಥ ಅಶೋಕ ಜುಳಕಿ (33) ಎಂದು ಗುರುತಿಸಲಾಗಿದೆ.
ಶಿವರಾಜ ಗುರಪ್ಪ ಮಡಿವಾಳರ (22), ಸಚಿನ ( 26) ,ಚನ್ನಬಸುಬಸಲಿಂಗಯ್ಯಸಂಪಗಾವಿಮಠ (28) ಎಂಬ ಮೂವರು ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಗೆ ಕಳುಹಿಸಲಾಗಿದೆ.


ವಿಷಯ ತಿಳಿಯುತ್ತಲೆ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದೌಡಾಯಿಸಿದ ಶಾಸಕ ಶಿವರಾಮ ಹೆಬ್ಬಾರ್ ವಿವರ ಪಡೆದು ಮೃತರ ದರ್ಶನ ಪಡೆದರು. ಪೊಲೀಸ್, ವೈದ್ಯರು ಹಾಗು ಇತರೆ ಅಧಿಕಾರಿಗಳೆ ಸೂಚನೆ ನೀಡಿ ಮೃತರ ಕುಟುಂಬಕ್ಕೆ ಸಹಕರಿಸುವಂತೆ ಆದೇಶಿಸಿದರು.

ಮಲೆನಾಡಿನ ಮಳೆಯ ಪರಿಸ್ಥಿತಿ ಬಯಲು ಸೀಮೆಯ ಕಡೆಯ ಜನರಿಗೆ ಅಷ್ಟಾಗಿ ಮಾಹಿತಿ ಇರದಿರುವುದು ಇಂತಹ ಅಪಘಾತಕ್ಕೆ ಕಾರಣವಾಗಿದೆ. ಪ್ರವಾಸಿಗರಾಗಲಿ ಅಥವಾ ಈ ಭಾಗದಲ್ಲಿ ಸಂಚರುಸುವ ಎಲ್ಲಾ ವಾಹನ ಸವಾರರು ಅತ್ಯಂತ ಜಾಗರೂಕರಾಗಿ ವಾಹನ ಚಲಾಯುಸಬೇಕು ಬಾರಿ ಮಳೆಯಾಗುತ್ತಿರುವುದರಿಂದ ಚಾಲನೆಯ ಮೇಲೆ ಎಚ್ಚರವಿರಲಿ. ಮೃತರ ಕುಟುಂಬಕ್ಕೆ ಭಗವಂತ ದುಖಃ ಭರಿಸುವ ಶಕ್ತಿ ಭಗವಂತ ಕರುಣಿಸಲಿ. ಶಿವರಾಮ ಹೆಬ್ಬಾರ್, ಶಾಸಕ,ಯಲ್ಲಾಪುರ ವಿಧಾನಸಭಾ ಕ್ಷೇತ್ರ
Prathidvani Yellapura