


ಪ್ರತಿಧ್ವನಿ,ಯಲ್ಲಾಪುರ – ತಾಲೂಕಿನ ಆರ್ತಿ ಬೈಲ್ ಘಟ್ಟದಲ್ಲಿ ಗುರುವಾರ ಮುಂಜಾನೆ ಲಾರಿ ಮತ್ತು ಟ್ರಾಕ್ಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ತೆರಳುತ್ತಿದ್ದ 5 ಜನ ಯಾತ್ರಿಕರು ಸ್ಥಳದಲ್ಲೇ ಮೃತಪಟ್ಟಿದ್ದು ಉಳಿದ ಗಾಯಗೊಂಡವರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.





ಧಾರವಾಡ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ 26 ರಿಂದ 30 ವರ್ಷದ ವಯಸ್ಸಿನ ಹುಡುಗರು ಧಾರವಾಡ ದಿಂದ ಧರ್ಮಸ್ಥಳಕ್ಕೆ ಪ್ರವಾಸಕ್ಕೆ ಎಂದು ತೆರಳುವ ಸಂದರ್ಭದಲ್ಲಿ ಆರತಿ ಬೈಲ ಹತ್ತಿರ 2-30 ರ ಸುಮಾರಿಗೆ ಟುಪಾನ್ (ಟ್ಯಾಕ್ಸ) ಮತ್ತು ಲಾರಿ ಮದ್ಯ ಅಪಘಾತವಾಗಿದೆ. ಟುಪಾನ್ ನಲ್ಲಿ 09 ಜನ ಪ್ರಯಾಣಿಸುತ್ತಿದ್ದು ಸ್ಥಳದಲ್ಲಿ 05 ಜನರು ಮರಣ ಹೊಂದಿದ್ದಾರೆ ಇನ್ನೂ ಉಳಿದ 04 ಜನರನ್ನು ಯಲ್ಲಾಪುರ ಆಸ್ಪತ್ರೆಗೆ ಕರೆತಂದು ಬಂದು ಪ್ರಾಥಮಿಕ ಚಿಕಿತ್ಸೆ ನೀಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕೆಎಂಸಿಗೆ ರವಾನಿಸಲಾಗಿದೆ.

ಸ್ಥಳಕ್ಕೆ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯ, ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಡಿವೈಎಸ್ಪಿ ಗೀತಾ ಪಾಟೀಲ, ಯಲ್ಲಾಪುರ ಪಿ.ಐ.ರಮೇಶ್ ಹಾನಾಪುರ ಹಾಗು ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈ ಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ದೊರೆಯಬೇಕಿದೆ.
Prathidvani Yellapura