
ಪ್ರತಿಧ್ವನಿ ಯಲ್ಲಾಪುರ : ಒಂದೇ ದಿನ ಒಂದೇ ಏರಿಯಾದಲ್ಲಿ ನಾಲ್ಕು ನಾಯಿಗಳು ಸಾವನಪ್ಪಿದ ಧಾರುಣ ಘಟನೆ ಶುಕ್ರವಾರ ಪಟ್ಟಣದ ತಳ್ಳೀಗೇರಿಯಲ್ಲಿ ನಡೆದಿದೆ.

ಬದ್ದತೆ ತೋರಿದ ಸಮಾಜ ಸೇವಕ ವಿಜಯ್ ಮಿರಾಶಿ

ವಿಷಯ ತಿಳಿಯುತ್ತಲೆ ಸ್ಥಳಕ್ಕಾಗಮಿಸಿದ ಸ್ಥಳೀಯ ಮುಖಂಡ ಸಮಾಜ ಸೇವಕ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ್ ಮಿರಾಶಿ ಪರಿಸ್ಥಿತಿಯ ಗಂಭೀರತೆ ಅರಿತು ಸಂಬಂಧಿಸಿದ ಅಧಿಕಾರಿಗಳಿಗೆ ಕರೆಮಾಡಿ ಸಾವನಪ್ಪಿದ ಶ್ವಾನಗಳನ್ನು ಬೇರೆಡೆಗೆ ಸಾಗಿಸಲು ಸೂಚಿಸಿದರು ಮೊದಲಿಗೆ ಅಲ್ಲಿಯ ಜನರು ಹಾವಿನ ಕಡಿತಕ್ಕೆ ಈ ರೀತಿ ನಾಯಿಗಳು ಸಾವನಪ್ಪಿವೆ ಎಂದು ಭಾವಿಸಿದ್ದರು,ಸ್ಥಳೀಯ ಜನರ ಆತಂಕ ಕಂಡು ವಿಷಪೂರಿತ ಹಾವನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸುವ ಪ್ರಯತ್ನ ಮಾಡಿಸಿದರು ಆದರೆ ಹಾವು ಸಿಗಲಿಲ್ಲ. ಸಾವನಪ್ಪಿದ ನಾಯಿಗಳನ್ನು ಪಟ್ಟಣ ಪಂಚಾಯತ ಸಿಬ್ಬಂದಿಗಳು ಬೇರೆಡೆಗೆ ಸಾಗಿಸಿದರು ಶನಿವಾರ ಬೆಳಗ್ಗೆ ಮತ್ತೆರಡು ನಾಯಿಗಳು ಸತ್ತು ಬಿದ್ದಿರುವುದು ಕಂಡು ಬಂತು ಆಗ ಅನುಮಾನಗೊಂಡು ಪರಿಶೀಲಿಸಿದಾಗ ನಾಯಿಗಳಿಗೆ ವಿಷವಿಕ್ಕಿರುವುದು ಮೇಲ್ನೋಟಕ್ಕೆ ದೃಡವಾಯಿತು.

ಇಂತಹ ಅಮಾನವೀಯ ಕೃತ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ, ಇದರಿಂದ ವಿಷ ವಸ್ತುವನ್ನು ಹಸುಗಳು ಅಥವ ಇತರೆ ಪ್ರಾಣಿಗಳು ತಿನ್ನುವ ಆತಂಕವಿದ್ದು ಇದೊಂದು ಅತ್ಯಂತ ಕೆಟ್ಟ ಕೃತ್ಯವಾಗಿದೆ ಇದನ್ನು ತನಿಖೆಗೆ ಒಳಪಡಿಸಬೇಕೆಂದು ಸ್ಥಳೀಯ ಪ್ರಮುಖ ವಿಜಯ್ ಮಿರಾಶಿ ಆಗ್ರಹಿಸಿದ್ದಾರೆ



















Prathidvani Yellapura