
ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ವಜ್ರಳ್ಳಿ ಸರ್ವೋದಯ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ದಾವಣಗೆರೆಯ ” ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆ” ನೀಡುವ ಶಿಕ್ಷಣ ಕ್ಷೇತ್ರದ ಪ್ರಶಸ್ತಿಗಳಿಗೆ ಭಾಜನರಾಗಿದ್ದು ಯಲ್ಲಾಪುರ ತಾಲೂಕಿಗೆ ಓದಿದ ಶಾಲೆಗೆ ಕಲಿಸಿದ ಗುರುಗಳಿಗೆ ಹೆತ್ತ ತಂದೆತಾಯಿಗಳಿಗೆ ಗೌರವ ತಂದಿದ್ದಾರೆ.

ಕಳೆದ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರಯುಕ್ತ ಸರ್ವೋದಯ ಪ್ರೌಢಶಾಲೆ ವಜ್ರಳ್ಳಿಯ ವಿದ್ಯಾರ್ಥಿಗಳಾದ
ರಶ್ಮಿತಾ ಶಂಕರ್ ಗೌಡ ಕನ್ನಡ ಕೌಸ್ತುಭ ಪ್ರಶಸ್ತಿ.
ದಿಶಾ ಪ್ರಮೋದ್ ಹೆಬ್ಬಾರ್ ಕನ್ನಡ ಕುವರಿ ಪ್ರಶಸ್ತಿ.
ಗಗನ್ ಗಾಂವ್ಕರ್ ಕನ್ನಡ ಕುವರ ಪ್ರಶಸ್ತಿ ಪಡೆದುಕೊಂಡಿರುತ್ತಾರೆ. ಕನ್ನಡ ಶಿಕ್ಷಕಿ ಸೀಮಾ ಗೌಡ ಮಾರ್ಗದರ್ಶನದಲ್ಲಿ ಕಲಿತ ಮಕ್ಕಳು ಇವರಾಗಿದ್ದು,
ಸರ್ವೋದಯ ಶಿಕ್ಷಣ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು, ಮುಖ್ಯಾಧ್ಯಾಪಕರು ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.














Prathidvani Yellapura