Breaking News

ಪ್ರತಿಧ್ವನಿ ಸುದ್ದಿಯ ಬಿಗ್ ಇಂಪ್ಯಾಕ್ಟ್ ಹುಣಶೆಟ್ಟಿಕೊಪ್ಪದ ಅಪಾಯಕಾರಿ ಟ್ರಾನ್ಸಫಾರ್ಮರ್ ಸ್ಥಳ ಬದಲಿಸಿದ ಹೆಸ್ಕಾಂ

ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಹುಣಶೆಟ್ಟಿಕೊಪ್ಪದಲ್ಲಿ ಬಸ್ ನಿಲುಗಡೆ ಸಮೀಪದಲ್ಲೇ ಅಪಾಯಕಾರಿಯಾದ ಸ್ಥಿತಿಯಲಿದ್ದ ವಿದ್ಯುತ್ ಟ್ರಾನ್ಸಫಾರ್ಮರ್ ಕುರಿತು ” ಪ್ರತಿಧ್ವನಿ ಯಲ್ಲಾಪುರ ” ವೆಬ್ ನ್ಯೂಸ್ ಎಚ್ಚರಿಸಿ ಸುದ್ದಿ ಪ್ರಕಟಮಾಡಲಾಗಿತ್ತು ವಸ್ತು ಸ್ಥಿತಿಯ ಗಂಭೀರತೆ ಅರಿತ ಹೆಸ್ಕಾಂ ಇಲಾಖೆ ಶನಿವಾರ ಟ್ರಾನ್ಸಫಾರ್ಮರ್ ಸ್ಥಳ ಬದಲಿಸಿ ಮುಂದೆ ಆಗಬಹುದಾಗಿದ್ದ ಅನಾಹುತ ತಪ್ಪಿಸಿದೆ.

ಹುಣಶೆಟ್ಟಿಕೊಪ್ಪದಲ್ಲಿ ಬಸ್ ನಿಲುಗಡೆ ಸಮೀಪದಲ್ಲೇ ಟ್ರಾನ್ಸಫಾರ್ಮರ್ ಇದ್ದು ಮಹಿಳೆಯರು ಮಕ್ಕಳು ಹಿರಿಯರು ಬಸ್ ಹತ್ತುವ ಮತ್ತು ಇಳಿಯುವ ಧಾವಂತದಲ್ಲಿ ವಿದ್ಯುತ್ ಪ್ರವಹಿಸುವ ಟ್ರಾನ್ಸಫಾರ್ಮರ್ ತಾಕಿ ಏ‌ನಾದರು ಅಪಾಯ ಸಂಭವಿಸುವ ಸಾದ್ಯತೆ ಇತ್ತು. ಈ ವಿಷಯವನ್ನು ಸ್ಥಳೀಯ ಪ್ರಮುಖ ಸಮಾಜ ಸೇವಕ ವಿನಾಯಕ ತಿನೇಕರ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ಗಮನಕ್ಕೆ ತಂದರು. ಸಾಮಾಜಿಕ ಬದ್ದತೆಯ ಹಿನ್ನೆಲೆಯಲ್ಲಿ ಪ್ರತಿಧ್ವನಿ ಹೆಸ್ಕಾಂ ಇಲಾಖೆಗೆ ಎಚ್ಚರಿಸಿ ಸುದ್ದಿ ಪ್ರಕಟಿಸಿತ್ತು ಇದೀಗ ಸುದ್ದಿಗೆ ಸ್ಪಂದಿಸಿ ಟ್ರಾನ್ಸಫಾರ್ಮರ್ ಸ್ಥಳಾಂತರಿಸಿದ್ದು ಹೆಸ್ಕಾಂ ಇಲಾಖೆಯ ಸರ್ವರಿಗು ಪ್ರತಿಧ್ವನಿ ವಂಧಿಸುತ್ತದೆ.

ಅಪಾಯಕಾರಿ ಸ್ಥಿತಿಯಲಿದ್ದ ವಿದ್ಯುತ್ ಟ್ರಾನ್ಸಫಾರ್ಮರ್ ಸ್ಥಳ ಬದಲಿಸಿ ಅನಾಹುತ ತಪ್ಪಿಸಿದ ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹಾಗು ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಸ್ಥಳಾಂತರಕಾರ್ಯಕ್ಕೆ ವೇಗ ನೀಡಿದ ಸ್ಥಳೀಯ ಪ್ರಮುಖ ವಿದ್ಯುತ್ ಗುತ್ತಿಗೆದಾರ, ಆತ್ಮೀಯ ರೀಗನ್ ಡಿಸೋಜ ಅವರಿಗು ವಿಶೇಷವಾಗಿ ಇಲಾಖೆಯ ಗಮನಕ್ಕೆ ತರುವಲ್ಲಿ ಸಹಕಾರಿಯಾದ ಪ್ರತಿಧ್ವನಿ ವೆಬ್ ನ್ಯೂಸ್ ಸಂಪಾದಕರಿಗೆ ಸಮಸ್ತ ಹುಣಶೆಟ್ಟಿಕೊಪ್ಪ ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ವಿನಾಯಕ ತಿನೇಕರ್, ಸ್ಥಳೀಯ ಪ್ರಮುಖ ಹಾಗು ಸಾಮಾಜಿಕ ಕಾರ್ಯಕರ್ತ,ಹುಣಶೆಟ್ಟಿಕೊಪ್ಪ, ಯಲ್ಲಾಪುರ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ತಾಲೂಕು “ಫೋಟೋಗ್ರಾಫರ್ ಯೂನಿಯನ್” ಅಸ್ತಿತ್ವಕ್ಕೆ – ಅಧ್ಯಕ್ಷರಾಗಿ ಗುರುಮೂರ್ತಿ ಗಾಂವ್ಕರ್,ಕಾರ್ಯದರ್ಶಿಯಾಗಿ ಗಣೇಶ್ ಪತ್ತಾರ್ ಆಯ್ಕೆ

ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ತಾಲೂಕಿನಲ್ಲಿ ನೂತನವಾಗಿ “ಫೋಟೋಗ್ರಾಫರ್ ಯೂನಿಯನ್” ಅಸ್ತಿತ್ವಕ್ಕೆ ಬಂದಿರುವುದು ಸ್ಥಳೀಯ ಛಾಯಾಗ್ರಾಹಕರಿಗೆ ಒಗ್ಗಟ್ಟಿನ ವೇದಿಕೆ ನಿರ್ಮಾಣದ …

Leave a Reply

Your email address will not be published. Required fields are marked *