
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ನೂತನನಗರ ಜಡ್ಡಿಯಲ್ಲಿ ಸರ್ಕಾರ ಬಡವರಿಗಾಗಿ ನೀಡುವ ಅನ್ನಭಾಗ್ಯದ ಅಕ್ಕಿಯನ್ನು ಕಲಘಟಗಿಯ ಶಾರುಖ್ ಮತ್ತು ಶಾನು ಎಂಬುವರು ಕಡಿಮೆ ಬೆಲೆಗೆ ಕೊಂಡು ಕದ್ದು ಸಾಗಿಸುವ ಮಾಹಿತಿ ತಿಳಿದು ಆಹಾರ ಇಲಾಖೆ ರಾಘವೇಂದ್ರ ರಾಮ ಗೌಡ ಎಂಬುವರು ಯಲ್ಲಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದು ಅಕ್ರಮ ದಂದೆಕೋರರನ್ನು ಪೊಲೀಸರು ಅಕ್ಕಿ ಮತ್ತು ಕೃತ್ಯಕ್ಕೆ ಬಳಸಿದ ವಾಹನ ಸಹಿತ ವಶಕ್ಕೆ ಪಡೆದಿರುತ್ತಾರೆ.

ಸರ್ಕಾರ ಬಡವರಿಗಾಗಿ ಹಸಿವು ಮುಕ್ತ ಭಾರತ ಎಂಬ ಉದ್ದೇಶದಿಂದ ರಾಜ್ಯ ಹಾಗು ಕೇಂದ್ರ ಸರ್ಕಾರ ಜಂಟಿಯಾಗಿ ಜನತೆಗೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಉಚಿತವಾಗಿ ಅಕ್ಕಿ ನೀಡುತ್ತಿದ್ದಾರೆ. ಕೆಲವು ಮಂದಿ ಸೊಸೈಟಿ ಅಕ್ಕಿ ಬಳಸುವುದಿಲ್ಲ, ಮತ್ತೆ ಕೆಲವರಿಗೆ ಇದು ಹೆಚ್ಚಾಗಿ ಉಳಿಯುತ್ತದೆ, ಇದನ್ನೆ ಬಂಡವಾಳ ಮಾಡಿಕೊಂಡ ಕೆಲವು ಮಂದಿ ಇದನ್ನೆ ದಂದೆಯಾಗಿ ಮಾಡಿಕೊಂಡಿದ್ದು ಅನ್ನ ಭಾಗ್ಯದ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಬೇರೆಡೆಗೆ ಕೊಂಡೊಯ್ದು ಅದನ್ನು ಪಾಲೀಶ್ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ ಈ ದಂದೆ ಬೇರೆ ಬೇರೆ ಕಡೆಗಳಲ್ಲಿ ನಡೆದಿರುವುದನ್ನು ಕೇಳುತ್ತಿದ್ದೆವು ಆ ದಂದೆ ಯಲ್ಲಾಪುರಕ್ಕೆ ಕಾಲಿಟ್ಟಿರುವುದು ಆಘಾತಕಾರಿಯಾಗಿದೆ.
ಅನ್ನ ಭಾಗ್ಯದ ಅಕ್ಕಿ ಮಾರುವುದು ಸಹ ಶಿಕ್ಷಾರ್ಹ ಅಪರಾಧವಾಗಿದ್ದು ಜನತೆ ಎಚ್ಚರವಹಿಸಬೇಕಿದೆ.
ಸದ್ಯ ಯಲ್ಲಾಪುರ ಪೊಲೀಸರು 51 ಸಾವಿರ ಮೌಲ್ಯದ 15 ಕ್ವಿಂಟಾಲ್ ಅಕ್ಕಿ ಹಾಗು ಸಾಗಿಸಲು ಬಳಸಿದ ವಾಹನ ಸಹಿತ ಕಲಘಟಗಿ ಮೂಲದ ಶಾರುಖ್ ನಜೀರ್ ಅಹಮ್ಮದ್ ನೇಸರಗಿ ಹಾಗು ಶಾನು ರೆಹಮಾನ್ ಯಾದವಾಡ ಎಂಬ ಅಕ್ರಮ ದಂದೆಕೋರರನ್ನು ಬಂಧಿಸಿದ್ದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.











Prathidvani Yellapura