
ಪ್ರತಿಧ್ವನಿ ಯಲ್ಲಾಪುರ – ಸುರಿಯುತ್ತಿರುವ ಮಳೆ,ಗುಡ್ಡಗಾಡು ಪ್ರದೇಶಗಳಲ್ಲಿರುವ ಮನೆಗಳು ಸಾಕಷ್ಟು ಶ್ರಮ ವಹಿಸಿ ಎಸ್ಐಆರ್ ಕರ್ತವ್ಯದಲ್ಲಿ ಶಿಕ್ಷಕರು ಹೈರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಅಧಿಕಾರಿಗಳು ಮತ್ತೂ ಒತ್ತಡ ಹೇಉತ್ತಿರುವ ದೂರುಗಳು ಸಂಘದ ಗಮನಕ್ಕೆ ತರುತ್ತಿದ್ದು ಇಂತಹ ನಡೆಯನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಖಂಡಿಸುತ್ತದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಯಲ್ಲಾಪುರ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ತಾಲ್ಲೂಕು ಅಧ್ಯಕ್ಷ ಆರ್ ಆರ್ ಭಟ್, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಂಜೀವ್ ಕುಮಾರ್ ಹೊಸ್ಕೇರಿ ಹಾಗು ಪ್ರಮುಖರಾದ ಸತೀಶ್ ನಾಯಕ, ಮಾರುತಿ ನಾಯ್ಕ್, ವಿಶಾಲ ನಾಯಕ, ವಿನಾಯಕ ಗಾಂವಕರ್, ಪವನ್ ಕುಮಾರ, ಅಮಿತ್ ಚೌಹಾಣ್ ಗಣಪತಿ ಪಟಗಾರ, ಉದಯ ದೇವಾಡಿಗ ಇನ್ನಿತರ ಶಿಕ್ಷಕರು ಉಪಸ್ಥಿತರಿದ್ದರು. ತಹಶೀಲ್ದಾರರ ಅನುಪಸ್ಥಿತಿಯಲ್ಲಿ ಅವರ ಪರವಾಗಿ ಪಿ . ವೈ ಕಾಮರೆಡ್ಡಿ ಶೀರಸ್ತೆದಾರರು ಮನವಿಯನ್ನು ಸ್ವೀಕರಿಸಿದರು.










Prathidvani Yellapura