ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ಎಡಬಿಡದೆ ಸುರಿಯುತ್ತಿರುವ ರಣ ಮಳೆಗೆ ಹಲವು ಅವಘಡಗಳು ಸಂಭವಿಸಿದೆ.ಅದೃಷ್ಟವಶಾತ್ ಜೀವಹಾನಿ, ಜಾನುವಾರುಗಳಿಗೆ ಹಾನಿ ಸಂಭವಿಸಿಲ್ಲ.


ಕೋಳಿಕೇರಿ ಬಸವಣ್ಣ ನಗರದಲ್ಲಿ ಲಕ್ಷ್ಮೀ ಸುಬ್ಬಾ ಮರಾಠಿ ಬುವರ ವಾಸ್ತವ್ಯದ ಮನೆ ಲಗ್ತಾ ಇರುವ ಶೌಚಾಲಯ ಹಾಗು ಅಡಿಕೆ ತೋಟದ ಮೇಲೆ ಮರದ ಕಾಂಡ ಬಿದ್ದಿದ್ದು ಅದೃಷ್ಟವಶಾತ್ ಜನ ಅಥವಾ ಜಾನುವಾರುಗಳಿಗೆ ತೊಂದರೆಯಾಗಿರುವುದಿಲ್ಲ.

ಬಿಳಕಿ ಗ್ರಾಮದಲ್ಲಿ ಪಿಲ್ಲು ಸಾವೇರ್ ಸಿದ್ದಿ ಎಂಬುವರ ವಾಸದ ಮನೆ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ ಜನ ಅಥವಾ ಜಾನುವಾರುಗಳಿಗೆ ಯಾವುದೇ ಹಾನಿ ಸಂಭವಿಸಿರುವುದಿಲ್ಲ.

ಕೋಳಿಕೇರಿ ಸುಭಾಷ್ ಯಲ್ಲಪ್ಪ ಹರಿಜನ ಎಂಬುವರ ಮನೆ ಮೇಲೆ ಮರ ಬಿದ್ದಿದ್ದು ಹಾನಿ ಸಂಭವಿಸಿದೆ ಜನ ಅಥವಾ ಜಾನುವಾರುಗಳಿಗೆ ಯಾವುದೆ ಸಮಸ್ಯೆ ಆಗಿರುವುದಿಲ್ಲ.
ಎಲ್ಲಾ ಅವಘಡಗಳು ಸಂಭವಿಸಿದ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದು ವರದಿ ಒಪ್ಪಿಸುತ್ತಿದ್ದಾರೆ.
ಒಟ್ಟಿನಲ್ಲಿ ಮಳೆಗಾಲದ ಪ್ರಾರಂಭದಲ್ಲಿ ಮಳೆಯೆ ಕಾಣದೆ ಕಂಗಾಲಾದ ರೈತರ ಮುಖದಲ್ಲಿ ಮಳೆ ಸುರಿಯುತ್ತಿರುವುದರಿಂದ ಮಂದಹಾಸವಿದೆ. ಕೆರೆಕಟ್ಟೆಗಳು ತುಂಬುವ ಪ್ರಕ್ರಿಯೆ ಆಗುತ್ತಿದ್ದು ಕೆಲವೆಡೆ ಅವಘಡಗಳು ಸಂಭವಿಸಿದೆ.ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ.










Prathidvani Yellapura