Breaking News

ತಡೆಹಿಡಿದಿದ್ದ ಟಿ.ಎಂ.ಎಸ್ ಚುನಾವಣ ಪಲಿತಾಂಶ ಪ್ರಕಟ- ಮೇಲುಗೈ ಸಾದಿಸಿದ ಸಹಕಾರ ಭಾರತಿ ತಂಡ.


ಪ್ರತಿಧ್ವನಿ ಯಲ್ಲಾಪುರ : ಬಾರಿ ಕುತೂಹಲ ಸೃಷ್ಟಸಿದ್ದ ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಟಿ.ಎಂ.ಎಸ್ ಚುನಾವಣಾ ಫಲಿತಾಂಶ ನ್ಯಾಯಾಲಯದ ಮೆಟ್ಟಿಲೇರಿದ್ದ ಹಿನ್ನೆಲೆಯಲ್ಲಿ ಏಣಿಕೆ ಕಾರ್ಯಕ್ಕೆ ಅಂದು ತಡೆ ನೀಡಲಾಗಿತ್ತು. ನ್ಯಾಯಾಲಯದ ಆದೇಶದಂತೆ ಸೋಮವಾರ ಮತ ಎಣಿಕೆ ಮಾಡಿದ್ದು ಪ್ರಗತಿಪರ ರೈತ ಕಳೆದಬಾರಿ ಸಂಸ್ಥೆಯ ಅಧ್ಯಕ್ಷರಾಗಿದ್ದ ಎನ್.ಕೆ.ಭಟ್ ಅಗ್ಗಾಶಿ ಕುಂಬ್ರಿ ತಂಡ ಮೇಲುಗೈ ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.

ಆರ್.ಎನ್ ಹೆಗಡೆ ಗೊರ್ಸಗದ್ದೆ ಮತ್ತು ಗಣಪತಿ ಮುದ್ದೆಪಾಲ್ ಸಹ ಗೆಲುವಿನ ನಗೆ ಬೀರಿದ್ದಾರೆ.


ಇತಿಹಾಸ ಸೃಷ್ಟಿಸಿದ ಗಣಪತಿ ಮುದ್ದೆಪಾಲ್ ಗೆಲುವು.
ಟಿ.ಎಂ.ಎಸ್ ಇತಿಹಾಸದಲ್ಲಿ ಇದುವರೆಗು ಪಕ್ಷೇತರನಾಗಿ ಸ್ಪರ್ಧಿಸಿ ಯಾರು ಗೆಲುವು ಸಾಧಿಸಿರಲಿಲ್ಲ ಆದರೆ ಇದೇ ಮೊದಲ ಬಾರಿಗೆ ಗಣಪತಿ ಮುದ್ದೆಪಾಲ್ ಸಂಸ್ಥೆಯ ಸದಸ್ಯ ಮತದಾರರ ಮನಗೆದ್ದು ಚುನಾವಣೆಯಲ್ಲಿ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದ್ದಾರೆ. ವಿಶೇಷ ಎಂದರೆ ಒಟ್ಟು ಹತ್ತು ಸಹಕಾರಿ ಸಂಸ್ಥೆಗಳ ಮತವು ಬೀಳುವುದರೊಂದಿಗೆ ಪ್ರಚಂಡ ಗೆಲುವನ್ನು ದಾಖಲಿಸಿದಂತಾಗಿದೆ.
ಸೌಹಾರ್ದ ಭಾರತಿ ಮತ್ತು ಸಹಕಾರ ಭಾರತಿ ಎಂಬ ಎರಡು ತಂಡಗಳು ಚುನಾವಣ ರಣ ಕಣಕ್ಕೆ ಇಳಿದಿದ್ದವು. ಒಟ್ಟು 14 ನಿರ್ದೇಶಕರನ್ನು ಒಳಗೊಂಡ ಟಿ.ಎಂ.ಎಸ್ ಸಂಸ್ಥೆಗೆ ಈಗಾಗಲೆ ಎರಡು ಸ್ಥಾನಗಳು ಅವಿರೋದವಾಗಿ ಆಯ್ಕೆಯಾಗಿದ್ದವು ಉಳಿದ ಹತ್ತು ಸ್ಥಾನಗಳಿಗೆ ಮತದಾನ ನಡೆದಿತ್ತು. ಆದರೆ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಮತ ಎಣಿಕೆ ನಡೆದಿರಲಿಲ್ಲ ಇದೀಗ ನಡೆದಿದ್ದು ಸಹಕಾರಿ ಭಾರತಿ ತಂಡ ಮೇಲುಗೈ ಸಾಧಿಸಿದಂತಾಗಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ತಾಲೂಕು “ಫೋಟೋಗ್ರಾಫರ್ ಯೂನಿಯನ್” ಅಸ್ತಿತ್ವಕ್ಕೆ – ಅಧ್ಯಕ್ಷರಾಗಿ ಗುರುಮೂರ್ತಿ ಗಾಂವ್ಕರ್,ಕಾರ್ಯದರ್ಶಿಯಾಗಿ ಗಣೇಶ್ ಪತ್ತಾರ್ ಆಯ್ಕೆ

ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ತಾಲೂಕಿನಲ್ಲಿ ನೂತನವಾಗಿ “ಫೋಟೋಗ್ರಾಫರ್ ಯೂನಿಯನ್” ಅಸ್ತಿತ್ವಕ್ಕೆ ಬಂದಿರುವುದು ಸ್ಥಳೀಯ ಛಾಯಾಗ್ರಾಹಕರಿಗೆ ಒಗ್ಗಟ್ಟಿನ ವೇದಿಕೆ ನಿರ್ಮಾಣದ …

Leave a Reply

Your email address will not be published. Required fields are marked *