

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ವೆಂಕಟರಮಣ ಮಠದಲ್ಲಿ ರವಿವಾರ 2026 ನೆ ಸಾಲಿನಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿದ ಯಲ್ಲಾಪುರ ಯುಗಾದಿ ಉತ್ಸವ ಸಮಿತಿ ಲೆಕ್ಕಾಚಾರ ಸಮರ್ಪಣಾ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಯಲ್ಲಾಪುರ ಯುಗಾದಿ ಉತ್ಸವ ಸಮಿತಿ ಅಧ್ಯಕ್ಷ ವಿಶಾಲ್ ವಾಳಂಬಿ ವಹಿಸಿದ್ದು ಜಮಾ-ಖರ್ಚಿನ ಮಾಹಿತಿ ನೀಡಿ ಉತ್ಸವದ ಯಶಸ್ಸಿಗೆ ಕಾಣೀಕರ್ತರಾದ ಸರ್ವರನ್ನು ಸ್ಮರಿಸಿ ಧನ್ಯವಾದ ತಿಳಿಸಿದರು.

26 ನೆ ವರ್ಷದ ನಿಮಿತ್ತ ಯುಗಾದಿ ಉತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆದಿದ್ದು ಪ್ರತಿ ವರ್ಷಕ್ಕಿಂತ ಹೆಚ್ಚಿನ ರೀತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಸಂಘಟಕರ ಪರಿಶ್ರಮಕ್ಕೆ ಧನ್ಯವಾಧಗಳೂ ಎಂದು ಸಮಿತಿಯ ಉಪಾಧ್ಯಕ್ಷ ಆರ್ ಎಸ್ ಭಟ್ , ಚಂದಗಳಿ ಹೇಳಿದರು.

ಇನ್ನೊರ್ವ ಉಪಾಧ್ಯಕ್ಷ ಗಜಾನನ ಭಟ್ ಕಳಚೆ ಮಾತನಾಡಿ ಯುಗಾದಿ ಉತ್ಸವದ ಯಶಸ್ವಿಯಾಗಿ ನಡೆಯಲು ತನೂ ಮನ ಧನ ಸಹಾಯ ನೀಡಿದ ದಾನಿಗಳ ಮತ್ತು ಶ್ರಮಿಸಿದ ಸರ್ವರ ಸಹಾಯ ಸಹಕಾರವನ್ನೂ ಪ್ರಶಂಶಿದರು.


2026 ರ ಯುಗಾದಿ ಉತ್ಸವ ನಿಮಿತ್ತ ವಸೂಲಾದ ಹಣ 5,96,064-00 ರುಪಾಯಿಗಳು. ಅದರಲ್ಲಿ ಒಟ್ಟು ವೆಚ್ಚ 5,79,770-00 ರುಪಾಯಿಗಳು ಒಟ್ಟು ಉಳಿಕೆ 16,294 ರುಪಾಯಿಗಳು ಎಂಬುದಾಗಿ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷ ಮಹೇಶ ನಾಯ್ಕ, ರಾಮು ಆಚಾರಿ , ಗಣೇಶ ದೇವಡಿಗಾ, ಸತೀಶ ನಾಯ್ಕ ಕಾರ್ಯದರ್ಶಿ ಸಿದ್ದಾರ್ಥ ನಂದೊಳಿಮಠ ಉಪಸ್ಥಿತರಿದ್ದರು.









Prathidvani Yellapura