Breaking News

ಅಧಿಕಾರಿಗಳೆ ತಡೆದಿದ್ದ ಷರತ್ತು ಅವಧಿ ಮುಗಿಯದ ಭೂಮಿ ಮಾರಾಟ – ಅಧಿಕಾರಿಗಳಿಂದಲೆ ಖಾತೆ ಬದಲಾವಣೆಗೆ ಹುನ್ನಾರ.


ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ತಟಗಾರ ಕ್ರಾಸ್ ಸಮೀಪದಲ್ಲಿ ಸರ್ಕಾರದ ಷರತ್ತು ಅವಧಿ ಮುಗಿಯದ ಭೂಮಿ ಮಾರಟಕ್ಕೆ ಆಕ್ಷೇಪಣೆ ಸಲ್ಲಿಸಲಾಗಿದ್ದ ಭೂಮಿಯನ್ನು ಅಧಿಕಾರಿಗಳು ಚಾಣಾಕ್ಷತನದಿಂದ ಮಾರಾಟಕ್ಕೆ ಮತ್ತೆ ವೇದಿಕೆ ಸಿದ್ದಪಡಿಸಿರುವುದರ ಮೂಲಕ ಮತ್ತೆ ಹೋರಾಟದ ಅಖಾಡಕ್ಕೆ ಸಾಮಾಜಿಕ ಹೋರಾಟಗಾರ ಮಂಜುನಾಥ ವಿ ಹೆಗಡೆ ಮುಂದಾಗಿದ್ದಾರೆ.
ತಟಗಾರ ಕ್ರಾಸ್ ನ ಸರ್ವೆ ನಂ 31-16-3 ಜಾಗವು ಸರ್ಕಾರದ ಷರತ್ತಿನ ಅವಧಿ ಒಳಗೊಂಡಿದೆ.ಈ ಹಿಂದೆ ಒಮ್ಮೆ ಮಾರಾಟದ ತಂತ್ರ ರೂಪಿಸಲಾಗಿತ್ತು ಅಂದಿನ ಅಧಿಕಾರಿಳಿಗೆ ವಸ್ತು ಸ್ಥಿತಿ ತಿಳಿಸಿ ಬೇಕಾದ ದಾಖಲೆ ಪತ್ರ ಒದಗಿಸಿ ಮಾರಾಟವನ್ನು ತಡೆಹಿಡಿಯಲಾಗಿತ್ತು. ಅಲ್ಲದೆ ಇದೇ ಜಾಗಕ್ಕೆ ಹೊಂದಿಕೊಂಡಿರುವ ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಲಾಗಿತ್ತು ಈ ಹಿನ್ನೆಲೆಯಲ್ಲಿ ಬೆಂಗಳೂರಿನ ” ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದಲ್ಲಿ ” ದೂರು ದಾಖಲಿಸಿ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿರುವಂತೆಯೆ ಅಧಿಕಾರಿಗಳು ಒಳಗಿಂದೊಳಗೆ ಹೊಸ ವರಸೆ ತೆಗೆದಿದ್ದು ಮತ್ತೆ ಮಾರಾಟಕ್ಕೆ ವೇದಿಕೆ ಸಿದ್ದಪಡಿಸಿಕೊಂಡಿದ್ದು ಖಾತೆ ಬದಲಾವಣೆಯ ಹುನ್ನಾರ ನಡೆಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಯ ಮೇಲಾಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಸರ್ಕಾರಿ ಷರತ್ತು ಅವಧಿ ಇರುವಂತಯೆ ಮಾರಾಟ ಮಾಡುವ ಅವಕಾಶ ರಾಜ್ಯದ ಎಲ್ಲಾ ನಾಗರಿಕರಿಗು ಒದಗಿಸಬೇಕೆಂದು ಮಂಜುನಾಥ ವಿ ಹೆಗಡೆ ಆಗ್ರಹಿಸಿದ್ದಾರೆ.


ಯಲ್ಲಾಪುರ ಪಟ್ಟಣ ಪಂಚಾಯತ್ ನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು ಅಧಿಕಾರಿಗಳ ದುಂಡಾ ವರ್ತನೆಗೆ ಜನರು ಬೇಸತ್ತಿದ್ದಾರೆ. ಭೂಮಿ ಮಾರಾಟದ ಪ್ರಯತ್ನದ ಹಿಂದೆ ಯಾವ ಅಧಿಕಾರಿಗಳ ಕಾಣದ ಕೈ ಕೆಲಸ ಮಾಡುತ್ತಿದೆ ಪತ್ತೆ ಹಚ್ಚಿ ಸಮಸ್ಯೆ ಉಲ್ಬಣಿಸದಂತೆ ಬಗೆಹರಿದಬೇಕಿದೆ. ಸಾಮಾಜಿಕ ಹೋರಾಟಗಾರ ಮಂಜುನಾಥ ವಿ ಹೆಗಡೆ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ದೇವರ ದುಡ್ಡಿಗು ರಕ್ಷಣೆ ಇಲ್ಲವಾಯಿತೆ..ರಾಮ.ರಾಮ.. ಅಯೋಧ್ಯೆ ಶ್ರೀ ರಾಮನ ದುಡ್ಡು ದೋಚಿದ ಖದೀಮರು.

ಕೇಬಲ್ ನಾಗೇಶ್, ಯಲ್ಲಾಪುರ..🖋 ಪ್ರತಿಧ್ವನಿ ಯಲ್ಲಾಪುರ : ದೇಶದಾದ್ಯಂತ ಗಂಭೀರ ಚರ್ಚೆಯಲ್ಲಿರುವ ಪ್ರಭು ಶ್ರೀರಾಮನ ಹಣ ಲಪಟಾಯಿಸಿದ ಟ್ರಸ್ಟ್ ಮತ್ತು …

Leave a Reply

Your email address will not be published. Required fields are marked *