
ಪ್ರತಿಧ್ವನಿ ಯಲ್ಲಾಪುರ : ಈ ಹಿಂದೆ ಯಲ್ಲಾಪುರ ತಾಲೂಕಿನಲ್ಲಿ ನಡೆದ ಅಪ್ರಾಪ್ತ ಬಾಲಕಿ ಮೇಲಿನ ದೌರ್ಜನ್ಯ ಪ್ರಕರಣದ ಅಪರಾಧಿಗೆ ಘನ ನ್ಯಾಯಾಲಯವು ಜುಲೈ,1 ರಂದು ತೀರ್ಪು ನೀಡಿದ್ದು ಅಪರಾಧಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಒಂದು ಲಕ್ಷ ದಂಡ ವಿಧಿಸಿ ತೀರ್ಪು ನೀಡಿದೆ.

ತಾಲೂಕಿನ ಉಮ್ಮಚ್ಚಗಿ ಸೂರಬೈಲ್ ನಿವಾಸಿ ಸಂತೋಷ ಪೇದ್ರು ಸಿದ್ದಿ ಮಂಡವಾಳಕರ (27) ಎಂಬಾತನೆ ಶಿಕ್ಷೆಗೊಳಗಾದ ವ್ಯಕ್ತಿಯಾಗಿದ್ದಾನೆ. ಅಪರಾಧ ನಡೆದ ಸಂದರ್ಭದಲ್ಲಿ ಯಲ್ಲಾಪುರ ಠಾಣೆಯ ಪಿ.ಐ ಆಗಿದ್ದ ಸುರೇಶ್ ಯಳ್ಳೂರು ತನಿಖಾಧಿಕಾರಿಯಾಗಿ ಆರೋಪಿಯನ್ನು ಹಿಡಿದು ನ್ಯಾಯಾಲಯಕ್ಕೆ ಒಪ್ಪಿಸಿ ಸಮಗ್ರ ಸಾಕ್ಷಾಧಾರಗಳನ್ನು ಸಂಗ್ರಹಿಸಿ ನೀಡುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದು ಇಲ್ಲಿ ಸ್ಮರಿಸಬಹುದಾಗಿದೆ.

ಸಮಗ್ರ ಸಾಕ್ಷಾಧಾರಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ನ್ಯಾಯಾಲಯ ಸುದೀರ್ಘ ವಿಚಾರಣೆ ನಡೆಸಿದ್ದು ಜುಲೈ1ರ ಬುಧವಾರ ಅಪರಾಧಿಗೆ 20 ವರ್ಷ ಕಠಿಣ ಕಾರಾಗೃಹ ಸಜೆ,ಒಂದು ಲಕ್ಷ ದಂಡ ವಿಧಿಸಿದೆ ಮತ್ತು ಸಂತ್ರಸ್ಥ ಬಾಲಕಿಗೆ ಕಾನೂನು ಸೇವೆಗಳ ಪ್ರಾಧಿಕಾರದಿಂದ ಪರಿಹಾರವಾಗಿ 4 ಲಕ್ಷ ಹಣವನ್ನು ನೀಡುವಂತೆ ಆದೇಶಿಸಿದೆ.
ಈ ಪ್ರಕರಣದ ವಿಚಾರಣೆಯನ್ನು ಮಾನ್ಯ ತ್ವರಿತ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರತಿಭಾ ಬಂಡುರಾವ್ ಕುಲಕರ್ಣಿ ತೀರ್ಪು ನೀಡಿದವರಾಗಿದ್ದಾರೆ.
ಈ ಪ್ರಕರಣದ ತನಿಖೆಯನ್ನುಪಿಐ ಸುರೇಶ್ ಯಳ್ಳೂರ್ ನಡೆಸಿದ್ದು ತನಿಖಾ ಸಹಕಾರಿಯಾಗಿ ಎ.ಎಸ್.ಐ ಮಂಜುನಾಥ ಮನ್ನಂಗಿ, ಕೋಟ್೯ ಮಾನಿಟರಿಂಗನ್ನು ಪಿಎಸ್ಐ ರಾಜಶೇಖರ ವಂದಲಿ ನಿರ್ವಹಿಸಿದ್ದು ಸಿಬ್ಬಂದಿಗಳಾದ ಗಜಾನನ ನಾಯ್ಕ್ ಎಎಸ್ಐ, ವೀರೇಶ್ ಎಂ.ಹೆಚ್ ರವರು ಸಾಕ್ಷಗಳನ್ನು ಕಾಲಕಾಲಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಶ್ರಮಿಸಿದ್ದಾರೆ.







Prathidvani Yellapura