Breaking News

Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

ಗರಿಗೆದರಿದ ಕಾಂಗ್ರೆಸ್ ಪಕ್ಷದ ಚುನಾವಣಪೂರ್ವ ಬೂತ್ ಮಟ್ಟದ ಸಂಘಟನಾ ಚಟುವಟಿಕೆ

ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಕಾಳಮ್ಮನಗರದ ಎರಡು ಸ್ಥಳಗಳಲ್ಲಿ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಸಭೆ ನಡೆಯಿತು.ಪಕ್ಷದ ನಾಯಕರಾದ ವಿ.ಎಸ್ ಪಾಟೀಲ್, ಶ್ರೀನಿವಾಸ್ ಭಟ್ ಧಾತ್ರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬ್ಲಾಕ್ ಅಧ್ಯಕ್ಷ ಡಿ.ಎನ್ ಗಾಂವ್ಕರ್ ಅಧ್ಯಕ್ಷತೆ ವಹಿಸಿದ್ದರು. ಜನರು ನೆಮ್ಮದಿಯ ಜೀವನ ನಡೆಸಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದು ಅನಿವಾರ್ಯವಾಗಿದೆ ಎಂಬುದು ನಾಯಕರ ಅಭಿಪ್ರಾಯವಾಗಿತ್ತು. ಮಾಜಿ ಅಧ್ಯಕ್ಷ ವಿ.ಸ್ ಭಟ್ ಪ್ರಮುಖರಾದ ಎನ್.ಕೆ ಭಟ್, ಉಲ್ಲಾಸ ಶಾನಭಾಗ , ಎಂಡಿ ಮುಲ್ಲಾ, …

Read More »

ಸಾವು ಕಂಡರೂ ಎಚ್ಚೆತ್ತುಕೊಳ್ಳದ ಮಂದಿಗೆ ಏನನ್ನಬೇಕು????? ‌‌‌‌ ಅದನ್ನು ಕೊಲೆ ಎನ್ನಬೇಕೆ!!?

ಕಳೆದ ತಿಂಗಳು ಒಣಗಿದ ತೆಂಗಿನ ಮರ ಬಿದ್ದು ಪೌರ ಕಾರ್ಮಿಕನ ಸಾವು. ಪಟ್ಟಣದಲ್ಲಿ ಇಂದಿಗು ಅಪಾಯಕಾರಿ ಸ್ಥಿತಿಯಲ್ಲಿ ಒಣಗಿ ನಿಂತಿರುವ ತೆಂಗಿನ ಮರಗಳು . ‌ ‌‌‌ಇನ್ನಾರ ಬಲಿಗಾಗಿ ಕಾಯುತ್ತಿವೆಯೊ?? ಅದು ನಮ್ಮಲ್ಲಿ ಒಬ್ಬರಾಗಿದ್ದರೆ!! ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ……… ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಅಕ್ಬರ್‌ಗಲ್ಲಿ ಮತ್ತು ಇಸ್ಲಾಂಗಲ್ಲಿ ಸಂಪರ್ಕಿಸುವ ರಸ್ತೆಯಲ್ಲಿ ಒಣಗಿದ ತೆಂಗಿನಮರ ಬಿದ್ದು ತಂದೆ ಸ್ಥಳದಲ್ಲೇ ಪ್ರಾಣ ಬಿಟ್ಟ ಒಂದನೆ ತರಗತಿ ಓದುವ ಮಗಳು …

Read More »

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಆಯೋಜನೆಯಲ್ಲಿ ನಡೆದ “ತಿಂಗಳ ನನ್ನ ಕವನ ಹಾಗೂ ಯುಗಾದಿ ಸಂಭ್ರಮ”

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ.......... ಪ್ರತಿಧ್ವನಿ,ಯಲ್ಲಾಪುರ : ಪ್ರಕೃತಿಯದ್ದು ಭೂಮಿಯೊಂದಿಗಿನ ಅಧ್ಯಯನವಿದ್ದಂತೆ. ಭವಿಷ್ಯ, ಭೂತ , ವರ್ತಮಾನಗಳಲ್ಲೂ ಪ್ರಕೃತಿ ನಿತ್ಯನೂತನ. ಹಿರಿಯರು ಬರೆದರು, ಇಂದಿನವರೂ ಬರೆಯುತ್ತಾರೆ, ಮುಂದಿನವರೂ ಬರೆಯುತ್ತಾರೆ. ಅಲ್ಲಿಗೆ ಪ್ರಕೃತಿಯೊಂದಿಗಿನ ಯುಗಾದಿಯ ಸಂಬಂಧವನ್ನು ಹಳೆಯದು ಎನ್ನಲು ಯಾವ ಕಾಲಕ್ಕೂ ಸಾಧ್ಯವಿಲ್ಲ. ಅಖಿಲ ಭಾರತ ಸಾಹಿತ್ಯ ಪರಿಷತ್ತು, ಸಾಹಿತ್ಯದ ಜೀವಂತಿಕೆಗೋಸ್ಕರ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ಎಂದು ಖ್ಯಾತ ಯಕ್ಷಗಾನ ಅರ್ಥದಾರಿ, ತಾ.ಪಂ ಮಾಜಿ ಅಧ್ಯಕ್ಷೆ ಚಂದ್ರಕಲಾ ಭಟ್ಟ …

Read More »

ಎಲ್ಲರ ನೆಚ್ಚಿನ ಸ್ನೇಹಿತ ವೃತ್ತಿಯಲ್ಲಿ ಶಿಕ್ಷಕ ವಿಜಯ್ ಎಸ್ ನಾಯಕ ಅವರಿಗೆ ನಿವೃತ್ತಿ

ಎಲ್ಲರ ಮೆಚ್ಚಿನ ಶಿಕ್ಷಕ ತಿಮ್ಮಾಪುರ ಶಾಲೆಯ ವಿಜಯ್ ಎಸ್ ನಾಯಕ ನಿವೃತ್ತಿ ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ……….. ಪ್ರತಿಧ್ವನಿ,ಯಲ್ಲಾಪುರ : ವೃತ್ತಿ ದಿನಗಳಲ್ಲಿ ಎಂದು ನಿವೃತ್ತಿಯಾಗುತ್ತದೆಯೋ ಎಂದು ಭಾವಿಸುವ ಮನಸ್ಸುಗಳಿಗೆ ನನ್ನದೊಂದು ಸಲಹೆ, ನಿವೃತ್ತಿಯಾಗುವ ದಿನ ಬೆಳಕಾಗುವುದೇ ಬೇಡ ಎಂಬ ಭಾವ ಬರುವುದಂತೂ ಖಂಡಿತ. ಅದಕ್ಕೆ ನಾನೇ ತಾಜಾ ಉದಾಹರಣೆ. ಶಿಕ್ಷಕನಾಗಿ ವೃತ್ತಿ ನಿರ್ವಹಿಸುತ್ತಾ ಬದುಕು ಕಟ್ಟಿಕೊಂಡ ನನಗೆ ಯಲ್ಲಾಪುರ ತಾಲೂಕು ಅದರಲ್ಲೂ ಹಿಟ್ಟಿನಬೈಲು, ಚಿಕ್ಕಮಾವಳ್ಳಿ, ಮಾವಳ್ಳಿ …

Read More »

ಭಕ್ತಿಭಾವದಲ್ಲಿ ಆಚರಣೆಯಾದ ಯಲ್ಲಾಪುರದ ಶ್ರೀರಾಮನವಮಿ

ಕಾಳಮ್ಮನಗರದ ಸಾಯಿನಾಥ ಮಂದಿರದಲ್ಲಿ ಶ್ರೀರಾಮನವಮಿ‌ ಪ್ರಯುಕ್ತ ವಿಶೇಷ ಪೂಜೆ ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ……… ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ವಿವಿದೆಡೆಯಲ್ಲಿ ಶ್ರೀರಾಮನವಮಿ ಅತ್ಯಂತ ಶ್ರದ್ದಾ ಭಕ್ತಿಯಿಂದ ಜರುಗಿತು.        ಕಾಳಮ್ಮನಗರದ ಸಾಯಿನಾಥ ಮಂದಿರದಲ್ಲಿ ಸಾಯಿನಾಥ ಮಂದಿರದ ಪ್ರಧಾನ ಅರ್ಚಕ ಪ್ರಸಾದ ಭಟ್ಟರ ನೇತೃತ್ವದಲ್ಲಿ  ಸತತ ಆರು ದಿನಗಳಿಂದ ವಿಶೇಷ ಪೂಜಾ ವಿಧಿಗಳು ನಡೆಯಿತು. ಪ್ರತಿನಿತ್ಯ ಸಹಸ್ರಾರು ದೀಪಗಳನ್ನು ಹಚ್ಚಿ ಸಾಯಿನಾಥನನ್ನು ಭಜಿಸಿ ಭಕ್ತರು ಸಂತುಷ್ಟರಾದರು. ಯಲ್ಲಾಪುರದಲ್ಲಿ ನಡೆದ ಶ್ರೀರಾಮನವಮಿ …

Read More »

ದಾಹ ತಣಿಸಲಿಲ್ಲ ಬೇಡ್ತಿ ಕುಡಿವ ನೀರಿನ ಯೋಜನೆ..!!! ‌‌ ‌‌‌ ‌‌ ‌‌‌‌‌‌‌ ಯಲ್ಲಾಪುರದ ದಾಹ ನೀಗಲಿದೆ ಬೊಮ್ಮನಹಳ್ಳಿ ಯೋಜನೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ‌‌‌‌ ‌‌‌‌‌‌ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ…….. ಪ್ರತಿಧ್ವನಿ,ಯಲ್ಲಾಪುರ : ರಾಜ್ಯದಲ್ಲಿ ಕೊಳವೆ ಬಾವಿಯನ್ನೇ ಆಧರಿಸಿ ಕುಡಿಯುವ ನೀರಿನ ಅವಶ್ಯಕತೆ ಪೂರೈಸುತ್ತಿರುವ ಕೆಲವೇ ಪಟ್ಟಣ ಪಂಚಾಯತಗಳಲ್ಲಿ ಯಲ್ಲಾಪುರ ಪಟ್ಟಣ ಪಂಚಾಯತಿಯೂ ಒಂದು. ಅದಕ್ಕೀಗ ಮುಕ್ತಿ ಬೇಕಿದ್ದು ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳ್ಳಲೇ ಬೇಕಿದೆ. ದಿನಕಳೆದಂತೆ ಪಟ್ಟಣ ಪ್ರದೇಶ ಬೆಳೆಯುತ್ತಿದ್ದು ವಸತಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಯಲ್ಲಾಪುರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ 19 ವಾರ್ಡುಗಳಿದ್ದು ಕಳೆದೆರಡು ವರ್ಷಗಳಿಂದ 48 …

Read More »

ಮಂಚಿಕೇರಿ ಅರಣ್ಯ ಇಲಾಖೆಯಿಂದ “ಪಾಲಿಸಿದರೆ ಪಾಲು” ಕಾರ್ಯಕ್ರಮ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ………… ಪ್ರತಿಧ್ವನಿ,ಯಲ್ಲಾಪುರ: ಅರಣ್ಯ ಸಂರಕ್ಷಣೆಯ ಮೂಲಕ ಇಲಾಖೆಯ ಆದಾಯದಲ್ಲಿ ಪಾಲು ಪಡೆದು, ಇಲಾಖೆಯೊಂದಿಗೆ ಗ್ರಾಮಸ್ಥರು ಕೈ ಜೋಡಿಸುವ ಉದ್ದೇಶದಿಂದಲೇ ಗ್ರಾಮ ಅರಣ್ಯ ಸಮಿತಿಗಳನ್ನು ರಚಿಸಲಾಗಿದ್ದು, ಇದರಿಂದ ಬೇಸಿಗೆಯಲ್ಲಿ ಕಾಡಿಗೆ ಬೀಳುವ ಬೆಂಕಿ ತಡೆ; ಅರಣ್ಯ ಕಳ್ಳತನ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳಿಗೆ ನಿಯಂತ್ರಣ ಸಾಧ್ಯವಾಗಿದೆ ಎಂದು ಮಂಚೀಕೇರಿ ವಲಯಾರಣ್ಯಾಧಿಕಾರಿ ಅಮಿತ್ ಚವ್ಹಾಣ ಹೇಳಿದರು.ಅವರು ತಾಲೂಕಿನ ಕುಂದರಗಿ ಗ್ರಾ.ಪಂ ವ್ಯಾಪ್ತಿಯ ಹೆಮ್ಮಾಡಿಯ ಗ್ರಾಮ ಅರಣ್ಯ …

Read More »

ಯಲ್ಲಾಪುರ ಕ್ಷೇತ್ರ ಚುನಾವಣಾಧಿಕಾರಿ ತುರ್ತು ಸುದ್ದಿಗೋಷ್ಟಿ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ…………. ಪ್ರತಿಧ್ವನಿ,ಯಲ್ಲಾಪುರ : ಚುನಾವಣಾ ಆಯೋಗ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಘೋಷಿಸಿದ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲಿದ್ದು ನ್ಯಾಯಸಮ್ಮತ ಮತದಾನ ಪ್ರಕ್ರಿಯೆಗೆ ಎಲ್ಲಾ ರೀತಿಯ ವ್ಯವಸ್ಥೆ ಗಳನ್ನು ಚುನಾವಣಾ ಆಯೋಗದ ನಿರ್ದೇಶನದಲ್ಲಿ ಕೈಗೊಳ್ಳಲಾಗುತ್ತಿದ್ದು ಯಾವುದೆ ಗೊಂದಲವಿಲ್ಲದೆ ಯಶಸ್ವಿಯಾಗಿ ಚುನಾವಣೆ ನಡೆಸಲು ಸಕಲ ಸಿದ್ದತೆ ಕೈಗೊಳ್ಳಲಾಗುತ್ತಿದೆ ಎಂದು ಕ್ಷೇತ್ರ ಚುನಾವಣಾಧಿಕಾರಿ ಅಜ್ಜಪ್ಪ ಸೊಗಲದ ಹೇಳಿದರು.ಅವರು ಪಟ್ಟಣದ ತಹಶಿಲ್ದಾರ್ ಕಚೇರಿಯಲ್ಲಿ ತುರ್ತಾಗಿ ಕರೆಯಲಾದ …

Read More »

ಕಾಡ್ಗಿಚ್ಚಿನಿಂದ ಮನೆ ಕಳೆದುಕೊಂಡ ಬಡ ಕುಟುಂಬಕ್ಕೆ ನಿತ್ಯದ ದವಸಧಾನ್ಯ ನೀಡಿದ ಎಂ.ಎಲ್.ಸಿ ಶಾಂತಾರಾಮ್ ಸಿದ್ದಿ

ನೊಂದ ಕುಟುಂಬಕ್ಕೆ ಅಗತ್ಯ ಆಹಾರ ಸಾಮಾಗ್ರಿಗಳನ್ನು ಒದಗಿಸಿದ ವಿಧಾನಪರಿಷತ್ ಸದಸ್ಯ ಶಾಂತಾರಾಮ್ ಸಿದ್ದಿ ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ…. .ಪ್ರತಿಧ್ವನಿ, ಯಲ್ಲಾಪುರ- ಕಳೆದ ಕೆಲವು ದಿನಗಳ ಹಿಂದೆ ತಾಲ್ಲೂಕಿನ ಆನಗೋಡು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನಾಗರಾಖಾನ್ ಎಂಬಲ್ಲಿ ಕಾಡ್ಗಿಚ್ಚಿನಿಂದಾಗಿ ಕೃಷ್ಣಾ ರಾಮಾ ಸಿದ್ದಿ ಎಂಬುವರ ವಾಸದ ಮನೆ ಸಂಪೂರ್ಣ ಸುಟ್ಟು ಕರಕಲಾಗಿ ಕುಟುಂಬವೆ ಬೀದಿಗೆ ಬಿದ್ದಿತ್ತು. ವಿಧಾನಪರಿಷತ್ ಸದಸ್ಯ ಕುಟುಂಬದ ಸದಸ್ಯರನ್ನು ಕಂಡು ಸಾಂತ್ವನ ಹೇಳಿ ಜರೂರಿಗೆ …

Read More »

ಕಾಡ್ಗಿಚ್ಚಿಗೆ ಮನೆ ಕಳೆದುಕೊಂಡ ಕುಟುಂಬಕ್ಕೆ ಆಸರೆಯಾದ ಸಚಿವ ಶಿವರಾಮ್ ಹೆಬ್ಬಾರ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ‌ ‌‌‌ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ……. ಪ್ರತಿಧ್ವನಿ, ಯಲ್ಲಾಪುರ : ಕಾಡ್ಗಿಚ್ಚಿನಿಂದ ಮನೆ ಸುಟ್ಟು ಬೀದಿಗೆಬಿದ್ದ ಆನಗೋಡಿನ ಸಿದ್ದಿ ಕುಟುಂಬಕ್ಕೆ ತಾತ್ಕಾಲಿಕ ಮನೆ ನಿರ್ಮಾಣಕ್ಕೆ ಸಚಿವ ಶಿವರಾಮ ಹೆಬ್ಬಾರ್ ಸಹಕರಿಸಿ ಆಸರೆಯಾಗಿದ್ದು ಸರ್ಕಾರದಿಂದ ಸಿಗಬೇಕಾದ ಪರಿಹಾರವನ್ನೂ ಕೊಡಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ. ಕಳೆದೆರಡು ದಿನಗಳ ಹಿಂದೆ ತಾಲೂಕಿನ ಆನಗೋಡು ಪಂಚಾಯತ ವ್ಯಾಪ್ತಿಯ ನಾಗರಕಾನ ಗ್ರಾಮದ ನಿವಾಸಿ ಕೃಷ್ಣಾ ರಾಮಾ ಸಿದ್ದಿ ಎಂಬುವರ ವಾಸದ ಮನೆ …

Read More »