Breaking News

Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

ಸಂಪನ್ನಗೊಂಡ ಕೋಳಿಕೇರಿ ಕಾಳು ಘಾಡಿ-ಬಾಳು ಘಾಡಿ ಜಾತ್ರೋತ್ಸವ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಸುಮಾರು 300 ವರ್ಷಗಳ ಹಿಂದಿನಿಂದ ಶ್ರದ್ಧಾ ಭಕ್ತಿಯಿಂದ ಪೂಜಿಸಲ್ಪಡುತ್ತಾ ಜಾತ್ರೋತ್ಸವವಾಗಿ ಆಚರಿಸಲ್ಪಡುವ ತಾಲೂಕಿನ ಕೋಳಿಕೇರಿಯ ಕಾಳು ಘಾಡಿ-ಬಾಳು ಘಾಡಿ ಜಾತ್ರೆಯು ಅತ್ಯಂತ ಸಂಭ್ರಮ ಸಡಗರದಿಂದ ಶ್ರದ್ಧಾ ಭಕ್ತಿಯಿಂದ ಪೂಜಿಸಲ್ಪಡುವುದರೊಂದಿಗೆ ಸಂಪನ್ನಗೊಂಡಿತು. ಮುಂಜಾನೆಯಿಂದಲೇ ಪೂಜಾ ವಿಧಿ ವಿಧಾನಗಳ ಸಿದ್ಧತೆ ಜರುಗಿ ಹಿರಿಯರ ಸಮ್ಮುಖದಲ್ಲಿ ಆಚಾರ , ಸಂಪ್ರದಾಯಗಳೊಂದಿಗೆ ಪೂಜಿಸಲ್ಪಟ್ಟು ಪ್ರಾರಂಭಗೊಂಡ ಜಾತ್ರೆಗೆ ಸಂಜೆಯವರೆಗೂ ಭಕ್ತರ ದಂಡೇ ಹರಿದು ಬಂದಿತ್ತು. ಪ್ರತಿ …

Read More »

ನಾಮಧಾರಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ-ಅರ್ಜಿ ಸಲ್ಲಿಸಿ- ರವಿಂದ್ರ ನಾಯ್ಕ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ನಾಮಧಾರಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಯಲ್ಲಾಪುರ : ಶ್ರೀ ಗುರು ಸಹಕಾರಿ ಸಂಘ ನಿ., ಯಲ್ಲಾಪುರ ಮತ್ತು ನಾಮಧಾರಿ ವೇದಿಕೆ , ಅನಂತ ನೆನಪು ಹಾಗೂ ಸಮಾಜ ಬಾಂಧವರ ಸಹಕಾರದೊಂದಿಗೆ ಯಲ್ಲಾಪುರದ ನಾಮಧಾರಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಎಸ್.ಎಸ್.ಎಲ್.ಸಿ ಯಲ್ಲಿ ಶೇ.೯೫ಕ್ಕಿಂತ ಹೆಚ್ಚು ಅಂಕ , ಪಿಯುಸಿಯಲ್ಲಿ ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದಿರುವ ಯಾವುದೇ …

Read More »

ಯಲ್ಲಾಪುರ ತಾಲೂಕಿನ ಮಣ್ಣಿನ ಕುಡಿ ಭಾರತೀಯ ಅರಣ್ಯ ಸೇವೆ ಪರೀಕ್ಷೆಯಲ್ಲಿ ದೇಶಕ್ಕೆ 30 ನೆ ರ‍್ಯಾಂಕ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸುಚೇತ್ ಬಾಳ್ಕಲ್ UPSC ನಡೆಸುವ ಸಿವಿಲ್ ಸರ್ವಿಸ್ ನ ಭಾರತೀಯ ಅರಣ್ಯ ಸೇವೆ ಪರೀಕ್ಷೆಯಲ್ಲಿ ದೇಶಕ್ಕೆ 30 ನೇ ರಾಂಕ್ ಗಳಿಸುವ ಮೂಲಕ ರಾಜ್ಯಕ್ಕೆ ಹೆಮ್ಮೆ ತಂದಿರುತ್ತಾರೆ. UPSC ನಡೆಸುವ ಸಿವಿಲ್ ಸರ್ವಿಸ್ ನ ಪ್ರೆಲಿಮ್ಸ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಮೂಲಕ ಭಾರತೀಯ ಅರಣ್ಯ ಸೇವೆಗೆ ಆಯ್ಕೆಯಾದ ಇವರು …

Read More »

ಯಲ್ಲಾಪುರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ NSS ಗೆ ಒಂದು ದಿನದ ತರಬೇತಿ ಕಾರ್ಯಗಾರ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೇಂದ್ರ ಸರ್ಕಾರದ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ರಾ.ಸೇ.ಯೋ.ಸ್ಥಳೀಯ ನಿರ್ದೇಶಕರ ಕಚೇರಿ ಬೆಂಗಳೂರು ,ರಾಷ್ಟ್ರೀಯ ಸೇವಾ ಯೋಜನೆ ಕೋಶ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಹಾಗೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಹಾಗೂ 2 ಇವುಗಳ ಸಂಯುಕ್ತ ಆಶ್ರಯದಲ್ಲಿ “ಔಪಚಾರಿಕ ಶಿಕ್ಷಣ ಹಾಗೂ ನಿಯಮಿತ ಉದ್ಯೋಗದಲ್ಲಿಲ್ಲದ ಯುವಕರ ಸಮೀಕ್ಷೆ …

Read More »

ಆನಗೋಡ ಶಾಲೆಯ ವಿದ್ಯಾರ್ಥಿನಿ ರಾಷ್ಟ್ರಮಟ್ಟಕ್ಕೆ ಆಯ್ಕೆ..!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ, ಯಲ್ಲಾಪುರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಗೋಡ ಶಾಲೆಯ ವಿದ್ಯಾರ್ಥಿನಿಯಾದ ಕುಮಾರಿ ಸಂಜನಾ ಪಟಗಾರ ಇವಳು ರಾಜ್ಯ ಮಟ್ಟದ ಇನ್ಸ್ಪೈರ್ ಅವಾರ್ಡ್ ವಿಜ್ಞಾನ ಮಾದರಿ ತಯಾರಿಕ ಸ್ಪರ್ಧೆಯಲ್ಲಿ ಗೆದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಇವಳಿಗೆ ಶಾಲಾ ಶಿಕ್ಷಕ ವೃಂದ ಹಾಗೂ ಎಸ್. ಡಿ. ಎಂ. ಸಿ ಯವರು ಹಾಗು ಊರ ನಾಗರಿಕರು ಮತ್ತು ಜನಪ್ರತಿನಿಧಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಶಾಲೆಯ ವಿಜ್ಞಾನ …

Read More »

ಉಸ್ತುವಾರಿ ಸಚಿವರಾಗಿ  26 ದಿನ ಕಳೆದರು ಯಲ್ಲಾಪುರ ಕ್ಷೇತ್ರ ಕಾಲಿಡದ ಮಂಕಾಳ ವೈದ್ಯ ಏನಿದರ ಮರ್ಮ.?

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ. ಪ್ರತಿಧ್ವನಿ,ಯಲ್ಲಾಪುರ : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೇರಿದ ನಂತರದ ಮೊದಲ ಅಧಿವೇಶನ ಜು.3 ರಿಂದ ನಡೆಯಲಿದ್ದು ನೂತನ ಸಚಿವರು ಸದನದಲ್ಲಿ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ದರಾಗಬೇಕಿದ್ದು ಅದಕ್ಕಾಗಿ ಕನಿಷ್ಠ ಅಧ್ಯಯನ ಬೇಕಿದೆ ಇಲ್ಲವಾದಲ್ಲಿ ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಲಾಗದೆ ತಡವರಿಸಬೇಕಾಗುತ್ತದೆ. ಆದರೆ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿಯಾಗಿ ಭಟ್ಕಳ ಶಾಸಕ ಮಂಕಾಳ ವೈದ್ಯ ಆಯ್ಕೆಯಾದಾಗಿನಿಂದ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರದಿರುವುದು ಆಶ್ಚರ್ಯವಾಗಿದೆ. …

Read More »

ಯಲ್ಲಾಪುರದ ಕೆನರಾ ಬ್ಯಾಂಕ್ ಜನರೇಟರೊಳಗೊಬ್ಬ ಮಾನಸಿಕ ಅಸ್ವಸ್ಥ

ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ವೆಂಕಟರಮಣ ಮಠದ ಕಟ್ಟಡದಲ್ಲಿರುವ ಕೆನರಾಬ್ಯಾಂಕ್‌ಗೆ ಸಂಬAಧಿಸಿದ ಜನರೇಟರ್ ಪೆಟ್ಟಿಗೆಯೊಳಗೆ ಮಾನಸಿಕ ಅಸ್ವಸ್ಥನಂತಿರುವ ಯುವಕನೊಬ್ಬ ಅವಿತು ಕುಳಿತಿದ್ದು ಕೆಲಕಾಲ ಆತಂಕ ಸೃಷ್ಟಿ ಮಾಡಿತ್ತು. ಕೆನರಾ ಬ್ಯಾಂಕ್ ಜನರೇಟರ್ ಡಬ್ಬಿಯೊಳಗೆ ಅವಿತು ಕುಳಿತಿದ್ದ ಮಾನಸಿಕ ಅಸ್ವಸ್ಥನಂತಿರುವ ಯುವಕ ಯಾವಾಗ ಮತ್ತು ಎಷ್ಟು ದಿನದಿಂದ ಒಳಗಿದ್ದ ಎಂಬುದು ಯಾರಿಗೂ ತಿಳಿದಿಲ್ಲ. ಬ್ಯಾಂಕ್ ಸಿಬ್ಬಂದಿ ಶನಿವಾರ ಮದ್ಯಾಹ್ನ ಜನರೇಟರ್ ಆನ್ ಮಾಡಲು ತೆರಳಿದಾಗ ಜನರೇಟರ್ ಬಾಗಿಲು ಮುರಿದಿರುವುದು ಕಂಡು ಬಂದಿದೆ. ಅನುಮಾನಗೊಂಡು …

Read More »

ಕೋಳಿಕೇರಿಯಲ್ಲಿ “ಕಾಳು ಘಾಡಿ-ಬಾಳು ಘಾಡಿ” ಸತ್ಪುರುಷರ ಜಾತ್ರೆ ಜುಲೈ 2 ಕ್ಕೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪೂರ್ವಜರ ಕಾಲದಿಂದಲೂ ತಾಲೂಕಿನ ಕೋಳಿಕೇರಿ ಗ್ರಾಮದಲ್ಲಿ ವೀರಯೋಧರಾಗಿ ಮರಣವನ್ನಪ್ಪಿದ ಕಾಳು ಘಾಡಿ ಮತ್ತು ಬಾಳು ಘಾಡಿ ಸತ್ಪುರುಷರ ಜಾತ್ರಾ ಮಹೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದು ಪ್ರಸಕ್ತ ಸಾಲಿನಲ್ಲಿ ಜು.2 ರಂದು ಜಾತ್ರೆ ನಡೆಯಲಿದೆ.ಮಿರಾಶಿ ಕುಟುಂಬದ ಪೂರ್ವಜರು ಆಚರಿಸಿಕೊಂಡು ಬರುತ್ತಿದ್ದರು ಎನ್ನಲಾದ ಜಾತ್ರಾ ಮಹೋತ್ಸವವು ಹಲವು ವಿಶೇಷತೆಗಳನ್ನು ಹೊಂದಿದೆ. ಸತ್ಪುರುಷರ ಸಮಾಧಿ ಕೋಳಿಕೇರಿಯಲ್ಲಿದ್ದು ಬೇಡಿ ಬಂದ ಭಕ್ತರ ಕಷ್ಟ ಕಾರ್ಪಣ್ಯಗಳು, ರೋಗ-ರುಜಿನಗಳನ್ನು …

Read More »

ಕರುಳು ಹಿಂಡುವ ಘಟನೆ ತಾಲೂಕಿನ ಬಳಗಾರದ ಹಂಸನಗದ್ದೆಯಲ್ಲಿ ಬಾಲಕನೋರ್ವನ ಸಾವು..

ಪ್ರತಿಧ್ವನಿ,ಯಲ್ಲಾಪುರ : ಮನೆಯಲ್ಲಿ ವಿದ್ಯುತ್ ಹೋದಾಗ ಚಿಮಣಿ ದೀಪ ಹಚ್ಚಲು ಹೋದ 4 ವರ್ಷ 6ತಿಂಗಳು ಪ್ರಾಯದ ಬಾಲಕನೋರ್ವ ದೇಹಕ್ಕೆ ಬೆಂಕಿ ತಗುಲಿ ಮೃತಪಟ್ಟ ಘಟನೆ ತಾಲೂಕಿನ ಬಳಗಾರ ಗ್ರಾಮದ ಹಂಸನಗದ್ದೆಯಲ್ಲಿ ನಡೆದಿದೆ. ರವಿ ಗಣಪತಿ ಗೌಡ ಎಂಬುವರ ಮಗನಾದ ಯತೀನ ರವಿ ಗೌಡ ಎಂಬಾತನೇ ಮೃತ ಬಾಲಕನಾಗಿದ್ದು ಜೂ.26 ರಂದು ಸಂಜೆ 7 ಗಂಟೆಯ ಸುಮಾರಿಗೆ ತನ್ನ ಮನೆಯ ಕರೆಂಟ್ ಹೋದಾಗ ಚಿಮಣಿ ದೀಪ ಹಚ್ಚಲೆಂದು ಹೋದವನಿಗೆ ಆಕಸ್ಮಿಕವಾಗಿ …

Read More »

ಬ್ರಾಹ್ಮಣಹಾಸಭಾ ತಾಲೂಕಾ ಸಂಚಾಲಕರಾಗಿ ಶಂಕರಭಟ್ಟ ತಾರಿಮಕ್ಕಿ ಸಹ ಸಂಚಾಲಕರಾಗಿ ಕುಮಾರ ಭಟ ಹಂಡ್ರಮನೆ ಆಯ್ಕೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ: ಬೆಂಗಳೂರಿನ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ, ನ್ಯಾಯವಾದಿ ಅಶೋಕ ಹಾರ್ನಳ್ಳಿ ರಾಜ್ಯಾದ್ಯಂತ ಮಹಾಸಭೆಯ ಸಂಘಟನೆಯನ್ನು ಬಲಗೊಳಿಸುವ ಉದ್ದೇಶದಿಂದ ಈಗಾಗಲೇ ಕ್ರಿಯಾಶೀಲರಾಗಿದ್ದಾರೆ. ಅವರ ನಿರ್ದೇಶನದಂತೆ ಮಹಾಸಭೆಯ ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಯಲ್ಲಾಪುರದಲ್ಲಿ ಬ್ರಾಹ್ಮಣ ಸಭೆಯನ್ನು ಕರೆದು, ಸಂಘಟನೆ ಮತ್ತು ಸದಸ್ಯತ್ವದ ಕುರಿತು ಸಲಹೆ-ಸೂಚನೆ ಪಡೆದು ರಾಜ್ಯಾಧ್ಯಕ್ಷರಿಗೆ ವರದಿ ಒಪ್ಪಿಸಿದ್ದಾರೆ.ವರದಿಯಲ್ಲಿ ಶಿಫಾರಸು ಮಾಡಿದಂತೆ ಯಲ್ಲಾಪುರ ತಾಲೂಕಿನ ನೂತನ ಸಂಚಾಲಕರಾಗಿ ಶಂಕರ ಭಟ್ಟ …

Read More »