Breaking News

Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

ಬರಲಿರುವ ತಾ.ಪಂ ಮತ್ತು ಜಿ.ಪಂ ಚುನಾವಣೆಯಲ್ಲಿ ಗೆಲುವು ಯಾರ ಪಾಲು? ಕಾಂಗ್ರೆಸ್ ಗ್ಯಾರಂಟಿಗೋ? ಅಥವಾ ಬಿಜೆಪಿ ಸಿದ್ದಾಂತಕ್ಕೊ..?

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಮೂರು ವರ್ಷಗಳ ಹಿಂದೆಯೇ ನಡೆಯಬೇಕಿದ್ದ, ತಾ.ಪಂ., ಜಿ.ಪಂ. ಚುನಾವಣೆಗಳು, ಸರಕಾರ ಸಕಾಲದಲ್ಲಿ ಸ್ಥಾನ ಮೀಸಲಾತಿ ನಿಗದಿಪಡಿಸದ ಕಾರಣ ವಿಳಂಬವಾಗಿದ್ದು, ಪ್ರಸಕ್ತ ಮೇ ತಿಂಗಳಲ್ಲಿ ನಡೆಯಲಿರುವುದಾಗಿ ತಿಳಿದಿದೆ. ಇದು ಕೂಡ ಖಚಿತಪಟ್ಟಿಲ್ಲ. ಮೇ ತಿಂಗಳ ಒಳಗಾಗಿ ನೂತನ ಮೀಸಲು ಪಟ್ಟಿಯನ್ನು ಒದಗಿಸುವುದಾಗಿ ಸರಕಾರ ಉಚ್ಛ ನ್ಯಾಯಾಲಯಕ್ಕೆ ಮಾತು ಕೊಟ್ಟಿದೆ. ಈ ಭರವಸೆ ಈಡೇರಿದರೆ, ಅದೇ ತಿಂಗಳಲ್ಲಿ ಚುನಾವಣೆ …

Read More »

ಹೋಳಿ ಬಣ್ಣದೋಕುಳಿ ಹೊಸ್ತಿಲಲ್ಲಿ ಕಣ್ಣೀಗೆರೆ ಪಂಚಾಯತ್ ವ್ಯಾಪ್ತಿಯಲ್ಲಿ ” ಸುಗ್ಗಿ ಕುಣಿತ “

ಯಲ್ಲಾಪುರ : ಪೂರ್ವಜರ ಕಾಲದಿಂದಲು ಹೋಳಿ ಹಬ್ಬಕ್ಕು ಮುನ್ನ ಸುಗ್ಗಿ ಕುಣಿತ ನೆರವೇರಿಸುತ್ತಾ ಬಂದಿದ್ದು ಸ್ಥಳೀಯ ದೇವತೆಗಳ ಅಪ್ಪಣೆ ಪಡೆದು ರಣಗಳನ್ನು ಎಬ್ಬಿಸಿ ಸುಗ್ಗಿ ಕುಣಿತ ಆಯೋಜಿಸಲಾಗುತ್ತದೆ ಅದರಂತೆ ಕಣ್ಣೀಗೆರೆ ಪಂಚಾಯತ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ಸುಗ್ಗಿ ಕುಣಿತ ಸದ್ದು ಮಾಡುತ್ತಿದೆ. ಹಿಂದಿನವಕಾಲದ ಹಿರಿಯರು ಆಚರಿಸಿಕೊಂಡು ಬರುತ್ತಿರುವ ಪದ್ದತಿ ಪರಂಪರೆಗಳನ್ನು ಇಂದಿನ ಪೀಳಿಗೆಯವರು ಅಳವಡಿಸಿಕೊಂಡು ಮುಂದೆ ಸಾಗುತ್ತಿರುವುದು ನೆಲದ ಸಂಸ್ಕೃತಿಗಳ ರಕ್ಷಣೆಯಾಗಿದೆ. ಐದು ದಿನಗಳಿಂದ ತಮ್ಮ ಊರು ಮತ್ತು ಮನೆಗಳನ್ನು …

Read More »

ಸಾರ್ಥಕ ಯೋಜನೆಗೆ ಸಾವಿರ ಶರಣು – ಬರಡು ಭೂಮಿಗೆ ನೀರುಣಿಸಿದ ಭಗೀರಥ ಶಾಸಕ ಹೆಬ್ಬಾರ್.

ಯಲ್ಲಾಪುರ – ತಾಲೂಕಿನಲ್ಲಿ ಅತ್ಯಂತ ಬರಡು ಪ್ರದೇಶಗಳಲ್ಲಿ ಒಂದಾದ ಕೆರೆಹೊಸಳ್ಳಿ ಗ್ರಾಮದ ಕೃಷಿ ಮತ್ತು ಕುಡಿಯು ನೀರಿನ ಬವಣೆ ನೀಗಿ ಬಡಜನರ ಪಾಲಿನ ಭಗೀರಥ ಎಂದೆನಿಸಿಕೊಂಡಿರುವ ಶಾಸಕ ಶಿವರಾಮ ಹೆಬ್ಬಾರ್ ಅವರ ಪ್ರಯತ್ನ ಸಾಕಾರಗೊಂಡು ಭೂಮಿ ಹಸಿರಾಗಿ ಕೃಷಿಕರ ಬದುಕು ಹಸನಾಗಿದೆ ಊರಿನ 60 ಕ್ಕು ಹೆಚ್ಚು ಕುಟುಂಬಗಳು ಹೆಬ್ಬಾರ್ ಅವರಿಗೆ ಋಣಿಗಳಾಗಿದ್ದೇವೆ ಎಂದು ಕೆರೆಹೊಸಳ್ಳಿ ವಿ.ಎಫ್.ಸಿ ಮಾಜಿ ಅಧ್ಯಕ್ಷ ಸ್ಥಳೀಯ ಕೃಷಿಕ ದತ್ತಾತ್ರೇಯ ಜಿ ಭಾಗ್ವತ್ ಹೇಳಿದರು. ಅವರು …

Read More »

ಡಾ,ಬಿ.ಆರ್.ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ದೀರ್ಘ ಕಾಲದ ಅಧ್ಯಕ್ಷ ಜಗನ್ನಾಥ ರೇವಣ್ಕರ್ ರಾಜಿನಾಮೆ..!!!!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ – ತಾಲೂಕಿನ ಪ್ರತಿಷ್ಠಿತ ಸಂಘದಲೊಂದಾದ ಡಾ,ಬಿ.ಆರ್.ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಬಹು ದೀರ್ಘ ಸಮಯದಿಂದ ಕ್ರಿಯಾಶೀಲ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಜಗನ್ನಾಥ ರೇವಣಕರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತಾಲೂಕು ಸಂಘಟನೆಯ ಕಾರ್ಯದರ್ಶಿಗೆ ರಾಜಿನಾಮೆ ಪತ್ರ ಬರೆದಿದ್ದು ಪತ್ರದಲ್ಲಿ ತನ್ನ ರಾಜಿನಾಮೆಗೆ ಕಾರಣವೇನೆಂಬುದನ್ನು ಉಲ್ಲೇಖಿಸಿದ್ದಾರೆ. ಸಂಘಕ್ಕಾಗಿ ಬಹು ಸಮಯದಿಂದ ಕಾರ್ಯ ನಿರ್ವಹಿಸುತ್ತಿದ್ದು ಇದೀಗ ವಯಸ್ಸನ್ನು …

Read More »

ಜಿಲ್ಲೆಯಲ್ಲಿಯೇ ಮೊಟ್ಟ ಮೊದಲು ಬಿ ಹಾಗೂ ಇ-ಖಾತಾ ಪಟ್ಟ ವಿತರಿಸಿದ ಶಾಸಕ ಹೆಬ್ಬಾರ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದು ಜಾಗ ಕೊಂಡು ಮನೆ ಕಟ್ಟಿಕೊಂಡು ವಾಸಿಸುತ್ತಿರುವವರ ಸಂಕಷ್ಟ ಇಂದು ದೂರಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ನಾಯಕತ್ವದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರರ ಮುಖಂಡತ್ವದಲ್ಲಿ ಬಿ ಹಾಗೂ ಇ-ಖಾತಾ ಪಟ್ಟ ನೀಡುವ ಕಾರ್ಯಕ್ಕೆ ಶ್ರಮಿಸಿದ ಫಲವೇ ಇಂದು ಫಲಾನುಭವಿಗಳ ಮುಖದಲ್ಲಿ ಮಂದಹಾಸ ಮೂಡುವಂತಾಗಿದೆ. ಇಂತಹ ಜನೋಪಯೋಗಿ ಕಾರ್ಯಕ್ಕೆ ಕ್ಷೇತ್ರದ ಶಾಸಕನಾಗಿ ಅಭಿನಂದನೆ ಸಲ್ಲಿಸುತ್ತೇನೆ. …

Read More »

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 4 ಲಕ್ಷ ಕೋಟಿ ಬಜೆಟ್ ಉತ್ತಮವೆಂದ ರಾಮು ನಾಯ್ಕ್, ಜನಪರವೆಂದ ಡಿ.ಎನ್.ಗಾಂವ್ಕರ್

ಯಲ್ಲಾಪುರ : ರಾಜ್ಯದಲ್ಲಿ ಎಲ್ಲೆಲ್ಲು ಬಜೆಟ್ ನದ್ದೆ ಹವಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ್ದು ಗ್ಯಾರಂಟಿ ಯೋಜನೆಗಳ ನಡುವೆ 4 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದು ಹಲವು ಅಭಿಪ್ರಾಯಗಳು ವ್ಯಕ್ತವಾಗಿವೆ. ಕೆಲವರು ಅದ್ಬುತ ಜನಪರ ಉತ್ತಮ ಬಜೆಟ್ ಎಂದು ಹಾಡಿ ಹೊಗಳಿದರೆ ಮತ್ತೆ ಕೆಲವರು ಇದೊಂದು ಸಪ್ಪೆ ಮತ್ತು ದೂರದೃಷ್ಟಿ ಇಲ್ಲದ ಸಪ್ಪೆ ಅಭಿವೃದ್ಧಿ ವಿರೋದಿ ಬಜೆಟ್ ಎನ್ನುತ್ತಿದ್ದಾರೆ.   ಅದೇನೆ ಇರಲಿ ಯಲ್ಲಾಪುರ ತಾಲೂಕಿನ …

Read More »

ಹಾಲು ಕರೆವ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದ ಹೆಬ್ಬಾರ್.

ಯಲ್ಲಾಪುರ : ದೇಶ ಕಾಯುತ್ತಿರುವ ಸೈನಿಕರು ದೇಶಕ್ಕೆ ಅನ್ನ ನೀಡುವ ಅನ್ನದಾತರಾದ ರೈತರು ದೇಶದ ಅಭಿವೃದ್ಧಿಗೆ ಬಹು ದೊಡ್ಡ ಆಸ್ತಿಯಾಗಿದ್ದಾರೆ. ಅಂತಹ ಅನ್ನದಾತರ ಬಾಳು ಬೆಳಗಲು ಗೋವುಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಹೈನುಗಾರಿಕೆ ಅಭಿವೃದ್ಧಿಗೆ ಇಂತಹ ಸ್ಪರ್ಧೆಗಳು ಸಹಕಾರಿಯಾಗಲಿದೆ ಹಾಗು ಜಿಲ್ಲೆಯಲ್ಲಿಯೆ ಹೈಟೆಕ್ ಸುಸಜ್ಜಿತ ಪಾಲಿ ಕ್ಲೀನಿಕ್ ಯಲ್ಲಾಪುರದಲ್ಲಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.ಅವರು ಪಟ್ಟಣದ ಪಶುವೈದ್ಯ ಆಸ್ಪತ್ರೆ ಆವಾರದಲ್ಲಿ …

Read More »

ಕಲುಷಿತಗೊಂಡ ಆರ್ತಿಬೈಲ್ ಘಟ್ಟದ ಹಳ್ಳದ ನೀರು – ಸದ್ಯಕ್ಕೆ ಬಳಸದಂತೆ ಡಾ,ಪವಾರ್ ಎಚ್ಚರಿಕೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ – ಆರತಿ ಬೈಲ ಕ್ರಾಸ್‌ ಹತ್ತಿರದ ಹಳ್ಳದ ನೀರು ಕಲುಷಿತಗೊಂಡಿದ್ದು, ನೊರೆ ತುಂಬಿ ಹರಿಯುತ್ತಿದೆ. ಇದ್ದಕ್ಕಿದ್ದಂತೆ ಈ ರೀತಿಯಾದಕಾರಣ ಆರೋಗ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿಗಳು ನೀರಿನ ಮಾದರಿಯನ್ನು ಸಂಗ್ರಹಿಸಿ ಆರೋಗ್ಯ ಇಲಾಖೆಯಲ್ಲಿ ಪರೀಕ್ಷೆಗೆ ಕಳುಹಿಸಲಾಗಿದ್ದು  ಮತ್ತೊಂದು ಮಾದರಿಯನ್ನು ಗ್ರಾಮ ಪಂಚಾಯತನಿಂದ ಕಾರವಾರಕ್ಕೆ ಕೂಡಲೇ ಪರೀಕ್ಷೆಗಾಗಿ ರವಾನಿಸಲಾಗಿದೆ. …

Read More »

ಕೇಂದ್ರ ಗೃಹ ಸಚಿವ ಅಮಿತ್ ಶಾ ರನ್ನು ಪಕ್ಷದಿಂದ ಉಚ್ಚಾಟಿಸಲಿ- ಜಗನ್ನಾಥ ರೇವಣ್ಕರ್..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರ ಅಂಬೇಡ್ಕರ್ ಕುರಿತಾದ ಹೇಳಿಕೆಯನ್ನು ಖಂಡಿಸಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಸಮಿತಿಯ ಅಡಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯೂ ಸೇರಿದಂತೆ ವಿವಿಧ ಸಂಘಟನೆಗಳ ಅಡಿಯಲ್ಲಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಕೇಂದ್ರ ಸರ್ಕಾರದ ಗೃಹ ಸಚಿವ ಗೌರವ ಸ್ಥಾನದಲ್ಲಿದ್ದುಸಂವಿಧಾನ ಶಿಲ್ಪಿ, ಡಾ.ಬಾಬಾ ಸಾಹೇಬ ಅಂಬೇಡ್ಕರ್ ಕುರಿತು ಹಗುರವಾದ ಹೇಳಿಕೆನ್ನು …

Read More »

ಕರ್ನಾಟಕ ರಾಜ್ಯ ಧನಗರ ಗೌಳಿ ಪ್ರೊ ಕಬ್ಬಡಿ ಸೀಸನ್ 2 ರಲ್ಲಿ ಸಿಂಧೆ ಸೋಲ್ಜರ್ಸ್ ಕರಡೊಳ್ಳಿ ತಂಡಕ್ಕೆ ತೃತೀಯ ಸ್ಥಾನ

ಯಲ್ಲಾಪುರ : ಕರ್ನಾಟಕ ರಾಜ್ಯ ಧನಗರ ಗೌಳಿ ಪ್ರೊ-ಕಬ್ಬಡ್ಡಿ ಸೀಸನ್-2 ರಲ್ಲಿ  ಪಾಂಡು ಭಾಗು ಸಿಂಧೆ ಇವರ ಮೊದಲ ವರ್ಷದ ಮಾಲೀಕತ್ವದಲ್ಲಿ ಹಾಗೂ ಧೂಳು ಸಿಂಧೆ (ಭಾರತೀಯ ಸೈನಿಕ ) ಇವರ ಅಧ್ಯಕ್ಷತೆಯಲ್ಲಿ ಮೂಡಿ ಬಂದಿರುವ ಸಿಂಧೆ ಸೋಲ್ಜರ್ಸ್ ಕರಡೊಳ್ಳಿ ತಂಡವು ದಿ 16,17 ಡಿಸೆಂಬರ್ 2024 ರಂದು ಕಿರವತ್ತಿ ಪ್ರೌಢ ಶಾಲೆ ಮೈದಾನದಲ್ಲಿ ನಡೆದ ರಾಜ್ಯ ಧನಗರ ಗೌಳಿ ಪ್ರೊಕಬ್ಬಡಿ ಸೀಸನ್-2 ರಲ್ಲಿ ತೃತೀಯ ಸ್ಥಾನ ಪಡೆದು ಜಯದ …

Read More »