
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕೆಲ ವರ್ಷಗಳ ಹಿಂದೆ ಸಿಂಹ ಘರ್ಜಿಸುತ್ತಿತ್ತು ಅದುವೆ ಸಿಪಿಐ ವಿಜಯ್ ಬಿರಾದಾರ ಎಂಬುದು ಯಲ್ಲಾಪುರ ತಾಲೂಕಿನ ಪ್ರತಿಯೊಬ್ಬರಿಗೂ ತಿಳಿದಂತಹ ವಿಷಯ ಅಂತಹ ಖಡಕ್ ಪೊಲೀಸ್ ಆಫಿಸರ್ ಅವರನ್ನು ಸರ್ಕಾರ ಕೊಪ್ಪಳ ಜಿಲ್ಲಾ ಲೋಕಾಯುಕ್ತ ಡಿ.ವೈ.ಎಸ್ ಪಿ ಯಾಗಿ ಬಡ್ತಿ ನೀಡಿದ್ದು ಅಧಿಕಾರ ಸ್ವೀಕರಿಸಿದ್ದಾರೆ.

ವಿಜಯ್ ಬಿರಾದಾರ್ ಅವರು ಸಿಪಿಐ ಆಗಿ ಯಲ್ಲಾಪುರ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದು ಕೆಲವೇ ವರ್ಷಗಳಾದರು ಜನಮಾನಸದಲ್ಲಿ ಸಿಂಗಂ ಖ್ಯಾತಿಯಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಯಲ್ಲಾಪುರ ಠಾಣೆಯಿಂದ ವರ್ಗಾವಣೆ ಆದವರು ಕಲಘಟಗಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಅಲ್ಲಿಂದ ಗದಗ ವರ್ಗಾವಣೆಗೊಂಡು ಅಲ್ಲಿಯು ಉತ್ತಮ ಸೇವೆ ಸಲ್ಲಿಸಿ ಹೆಸರಾದರು ಸದ್ಯ ರಾಜ್ಯ ಸರ್ಕಾರ ಕೊಪ್ಪಳ ಜಿಲ್ಲೆ ಲೋಕಾಯುಕ್ತ ಡಿವೈಎಸ್ಪಿ ಯಾಗಿ ಬಡ್ತಿ ಹೊಂದಿದ್ದು ಅಧಿಕಾರ ಸ್ವೀಕರಿಸಿದ್ದಾರೆ.

ವಿಶೇಷ ಎಂದರೆ ವಿಜಯ್ ಬಿರಾದಾರ ಅವರು ಯಲ್ಲಾಪುರ ದಿಂದ ವರ್ಗವಾಗಿ ತೆರಳಿದ ನಂತರವು ಅವರ ಪ್ರತಿ ನಡೆಯನ್ನು ತಿಳಿದುಕೊಳ್ಳುವ ಕುತೂಹಲ ಯಲ್ಲಾಪುರ ತಾಲೂಕಿನ ಜನತೆ ಉಳಿಸಿಕೊಂಡಿರುವುದು ಅತ್ಯಂತ ವಿಶೇಷ ಸಂಗತಿಯಾಗಿದೆ.

ಸದ್ಯ ಕೊಪ್ಪಳ ಜಿಲ್ಲಾ ಲೋಕಾಯುಕ್ತ ಡಿ.ವೈ.ಎಸ್.ಪಿ ಯಾಗಿ ಬಡ್ತಿ ಹೊಂದಿ ಅಧಿಕಾರ ಸ್ವೀಕರಿಸಿದ್ದಾರೆ. ಅವರ ಭವಿಷ್ಯದ ದಿನಗಳು ಉಜ್ವಲವಾಗಿರಲಿ ಮತ್ತು ಯಶಸ್ವಿಯಾಗಿ ತಮ್ಮ ವೃತ್ತಿ ನಿಭಾಯಿಸಲಿ ಎಂಬುದು ಯಲ್ಲಾಪುರ ತಾಲೂಕಿನ ಸಹಸ್ರಾರು ಅಭಿಮಾನಿಗಳ ಹಾರೈಕೆಯಾಗಿದೆ.













Prathidvani Yellapura