
ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ-ಹಳಿಯಾಳ ರಾಜ್ಯ ರಸ್ತೆ ಅತ್ಯಂತ ಧಾರುಣ ಸ್ಥಿತಿ ತಲುಪಿರುವ ಕುರಿತು ಪ್ರತಿಧ್ವನಿ ಯಲ್ಲಾಪುರ ವೆಬ್ ಶುಕ್ರವಾರ ಸುದ್ದಿ ಪ್ರಕಟಿಸಿತ್ತು.

ಸುದ್ದಿ ಪ್ರಕಟಗೊಂಡ ಕೆಲವೇ ಗಂಟೆಗಳಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ತಾತ್ಕಾಲಿಕ ದುರಸ್ತಿ ಆರಂಭಗೊಂಡಿದ್ದು ಸಾರ್ವಜನಿಕ ಹಿತ ದೃಷ್ಟಿಯಿಂದ ಸುದ್ದಿ ಮಾಡಿದ್ದ ಪ್ರತಿಧ್ವನಿ ಗೆ ಸಮಾಧಾನ ತಂದಿದೆ.


ಸುದ್ದಿ ಪ್ರಕಟಿಸಿದ ಕೂಡಲೆ ಕಾರ್ಯ ಪ್ರವೃತ್ತರಾದರು ಎಂಬ ಸಂತಸಕ್ಕಿಂತ ರಸ್ತೆ ಪರಿಸ್ಥಿತಿ ಕಂಡು ಮತ್ಯಾರಿಗು ಅವಘಡ ಸಂಭವಿಸವಾರದು ಎಂಬ ದೊಡ್ಡತನ ತೋರಿ ದುರಸ್ತಿಗೆ ಮುಂದಾದ ಯಲ್ಲಾಪುರ ಲೋಕೋಪಯೋಗಿ ಇಲಾಖೆ ಎಇಇ ರಾಮಲಿಂಗ್ ಅವರ ಬದ್ದತೆಗೆ ಪ್ರತಿಧ್ವನಿ ವಂದಿಸುತ್ತದೆ.

ಸದ್ಯ ಮಳೆ ವಾತಾವರಣದಲ್ಲಿ ಸಂಪೂರ್ಣ ಸರಿಯಾಗದಿದ್ದರು ಕನಿಷ್ಟ ಅನಾಹುತ ಆಗದ ರೀತಿಯಲ್ಲಿ ದುರಸ್ತಿ ಆದರು ಸಹ ಒಳ್ಳೆಯ ಕಾರ್ಯವಾದಂತಾಗಲಿದೆ. ಪ್ರತಿಧ್ವನಿ ಯಲ್ಲಾಪುರ ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತದೆ.










Prathidvani Yellapura