
ಪ್ರತಿಧ್ವನಿ ಯಲ್ಲಾಪುರ : ಕೊಡುಗೈ ದಾನಿ,ಸಮಾಜ ಸೇವಕ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಎಂದೇ ಗುಸುಗುಸು ಕೇಳಿ ಬರುತ್ತಿರುವ ಬಿಜೆಪಿ ಯುವ ನಾಯಕ ಬಾಲಕೃಷ್ಣ ನಾಯಕ್ ಬಿಜೆಪಿಯ ಬಳ್ಳಾರಿ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಆಡಳಿತದ ವಿರುದ್ದ ಹೋರಾಟದ ಅಖಾಡಕ್ಕೆ ದುಮುಕಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ವಿವಿಧ ಚಟುವಟಿಕೆಯಲ್ಲಿ ಪ್ರಭಲವಾಗಿ ಕೇಳಿ ಬರುತ್ತಿರುವ ಯುವ ಉದ್ಯಮಿ ಬಾಲಕೃಷ್ಣ ನಾಯಕ್ ದೇವಸ್ಥಾನಗಳಿಗೆ, ಬಡವರ ಆರೋಗ್ಯಕ್ಕೆ,ಶಾಲ ಮಕ್ಕಳಿಗೆ, ಕುಡಿಯುವ ನೀರಿನ ವ್ಯವಸ್ಥೆಗೆ, ಕ್ರೀಡಾ ಚಟುವಟಿಕೆಗಳಿಗೆ ಸಹಾಯ ಮಾಡುವ ಮೂಲಕ ಕ್ಷೇತ್ರದಾದ್ಯಂತ ಮಿಂಚಿನ ಸಂಚಲನ ಮೂಡಿಸಿ ಇದೀಗ ಹೋರಾಟದಕಡೆ ಹೆಜ್ಜೆ ಹಾಕಿದ್ದಾರೆ.

ರಾಜ್ಯ ಬಿಜೆಪಿಯು ಆಡಳಿತಾರೂಡ ಕಾಂಗ್ರೆಸ್ ಸರ್ಕಾರದ ವಿರುದ್ದ ಹಲವು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಚಾಟಿ ಬೀಸುವ ಸಲುವಾಗಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಳ್ಳಾರಿಯಿಂದ – ಬೆಂಗಳೂರು ಪಾದಯಾತ್ರೆ ಜರುಗುತ್ತಿದ್ದು ಪಾದಯಾತ್ರೆಯಲ್ಲಿ ಮಾಜಿ ಸಚಿವ ಶ್ರೀ ರಾಮುಲು, ಮಾಜಿ ಶಾಸಕಿ ರೂಪಾಲಿ ನಾಯಕ್ ಹಾಗು ರಾಜ್ಯದ ಪ್ರಭಲ ಬಿಜೆಪಿ ನಾಯಕರೊಂದಿಗೆ ಯಲ್ಲಾಪುರ ಬಾಲಕೃಷ್ಣ ನಾಯಕ್ ಹೆಜ್ಜೆ ಹಾಕಿರುವುದು ವಿಶೇಷವಾಗಿದೆ. ಪಾದಯಾತ್ರೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಹಲವು ಬಿಜೆಪಿ ನಾಯಕರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಉತ್ತರ ಕನ್ನಡ ಬಿಜೆಪಿ ಜಿಲ್ಲಾದ್ಯಕ್ಷ ಎನ್ ಎಸ್ ಹೆಗಡೆ ಕರ್ಕಿ, ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ, ಹರ್ತೆಬೈಲ್,ಬಿಜೆಪಿ ಬನವಾಸಿ ಮಂಡಲಾದ್ಯಕ್ಷ ರಮೇಶ ನಾಯ್ಕ, ಯಲ್ಲಾಪುರ ಮಂಡಲಾಧ್ಯಕ್ಷ ಪ್ರಸಾದ್ ಹೆಗಡೆ, ಪ್ರಮುಖರಾದ ಸೋಮೇಶ್ವರ ನಾಯ್ಕ್, ವಕೀಲರಾದ ಗಣೇಶ್ ಪಾಟಣಕರ್, ರಜತ್ ಬದ್ದಿ, ಕಿರವತ್ತಿ ಅರ್ಜುನ ಬೆಂಗೇರಿ, ವಿನೋದ್ ತಳೇಕರ್ ಸೇರಿದಂತೆ ಹಲವು ನಾಯಕರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ.

ಒಟ್ಟಿನಲ್ಲಿ ಬಳ್ಳಾರಿ ಪಾದಯಾತ್ರೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಇತ್ತೀಚಿನ ದಿನಗಳಲ್ಲಿ ಕ್ಷೇತ್ರದಾದ್ಯಂತ ಮಿಂಚಿನ ಸಂಚಾರಮಾಡುತ್ತ, ರಾಜ್ಯ ರಾಜಕಾರಣಕ್ಕೆ ಬರುವರೇನೊ ಎಂಬ ಗುಸುಗುಸು ಸುದ್ದಿಗೆ ಕಾರಣೀಕರ್ತರಾದ ಬಾಲಕೃಷ್ಣ ನಾಯಕ್ ನಡೆ ಮಾತ್ರ ಹಾಟ್..ಹಾಟ್ ಟಾಪಿಕ್ ಆಗಿದ್ದು ಗುಸುಗಸು ಸುದ್ದಿಗೆ ರೆಕ್ಕೆಪುಕ್ಕ ಬರುವುದಂತು ಸುಳ್ಳಲ್ಲ..











Prathidvani Yellapura