Breaking News

ಮಳೆಯ ನರ್ತನ, ಹೂಗಳ ದರ್ಶನ,ಯಲ್ಲಾಪುರದಲ್ಲಿ ಮಾರಾಟಕ್ಕೆ ಹರಿದು ಬಂದ ಬಣ್ಣ ಬಣ್ಣದ ಅಂದ ಚಂದದ ಹೂಗಿಡಗಳು..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಜಿಟಿಜಿಟಿ ಮಳೆಯಾಗುತ್ತಿದ್ದು ವಾತಾವರಣವೆಲ್ಲಾ ತಂಪಾಗಿದೆ. ಭೂಮಿಯು ತಂಪಾಗುತ್ತಲೇ ಪ್ರತಿವರ್ಷದಂತೆ ಈ ವರ್ಷವೂ ವಿವಿಧ ಜಾತಿಯ ಹೂಗಿಡಗಳು ಯಲ್ಲಾಪುರ  ಮಾರುಕಟ್ಟೆಗೆ ಮಾರಾಟಕ್ಕೆ ಲಗ್ಗೆ ಇಟ್ಟಿವೆ.


ಪ್ರತಿವರ್ಷ ಯಲ್ಲಾಪುರದ ಅಂಚೆಕಚೇರಿಯ ಮುಂಭಾಗ ಪೂನಾ ನರ್ಸರಿಯಿಂದ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಹೂಗಿಡಗಳು ಮಾರಾಟಕ್ಕೆ ಬರುತ್ತವೆ. ಅದರಂತೆ ಈ ಬಾರಿಯೂ ವಿವಿಧ ಬಣ್ಣದ ಗುಲಾಬಿ, ಸೇವಂತಿಗೆ, ಮಲ್ಲಿಗೆ, ದಾಸವಾಳ, ಚೆಂಡು ಹೂ, ಕಾಗದದ ಹೂ, ಗೊರಟೇ ಹೂ, ಕನಕಾಂಬರ, ಡೇರೆ ಇನ್ನಿತರ ಆಕರ್ಷಿಸುವ ಬಣ್ಣಬಣ್ಣದ ಹೂಗಿಡಗಳು ಮಾರಾಟಕ್ಕೆ ಬಂದಿವೆ.

  ಜೊತೆಯಲ್ಲಿ ಉತ್ತಮ ಜಾತಿಯ ಮಾವಿನ ಸಸಿಗಳು ಅಲಂಕಾರಿಕ ಸಸ್ಯಗಳು ಜನರನ್ನು ಆಕರ್ಷಿಸುತ್ತಿವೆ.


ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಪ್ರತಿವರ್ಷ ಯಲ್ಲಾಪುರಕ್ಕೆ ಬರುವುದು ನಮಗೆ ರೂಢಿಯಾಗಿದೆ. ಪ್ರತಿವರ್ಷವೂ ಸಾವಿರಕ್ಕೂ ಅಧಿಕ ಸಸಿಗಳನ್ನು ಮಾರಾಟ ಮಾಡುತ್ತೇವೆ. ದರದಲ್ಲಿ ಕಳೆದ ಬಾರಿಗಿಂತ ವತ್ಯಾಸವಿಲ್ಲ. 1೦೦ರೂ ಗೆ ಒಂದು ಗಿಡದಂತೆ ಮಾರುತ್ತಿದ್ದೇವೆ. ಉತ್ತಮ ಜಾತಿಯ ಮತ್ತು ಕಸಿ ಮಾಡಿದ ಗ್ರಾಹರಿಗೆ ನಂಬಿಕೆ ಇರುವಂತೆ ಗಿಡಗಳನ್ನು ನೀಡುತ್ತಿದ್ದೇವೆ. ಬೇಡಿಕೆಗೆ ಅನುಸಾರವಾಗಿ ಇನ್ನೂ ಹೆಚ್ಚಿನ ಗಿಡಗಳು ಬೇಕಾದಲ್ಲಿ ಮತ್ತೆ ನರ್ಸರಿಯಿಂದ ತರಿಸಿಕೊಳ್ಳುತ್ತೇವೆ. – ಮನೋಜ , ಹೂ ಗಿಡಗಳ ವ್ಯಾಪಾರಿ, ಪೂನಾ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *