
ಪ್ರತಿಧ್ವನಿ ಯಲ್ಲಾಪುರ : ರಾಜ್ಯದಾದ್ಯಂತ ಅಸ್ತಿತ್ವಕ್ಕೆ ತರಲು ಹೊರಟಿರುವ “ಅಖಿಲ ಕರ್ನಾಟಕ ಅಹಿಂದ ವೇದಿಕೆ ” ಗ್ರಾಮೀಣ ಭಾಗದಿಂದ ಪ್ರಾರಂಭಿಸಲು ನಿರ್ಧರಿಸಿ ಮೊದಲಿಗೆ ಯಲ್ಲಾಪುರ ತಾಲೂಕಿನ ಚಂದಗುಳಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸಂಬಂಧಿಸಿದಂತೆ ಅಖಿಲ ಕರ್ನಾಟಕ ಅಹಿಂದ ವೇದಿಕೆ ಘಟಕವನ್ನು ಶನಿವಾರ ವಿದ್ಯುಕ್ತವಾಗಿಉದ್ಘಾಟಿಸಲಾಯಿತು.

ಚಂದಗುಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಖಿಲ ಕರ್ನಾಟಕ ಅಹಿಂದ ವೇದಿಕೆ ಘಟಕದ ಅಧ್ಯಕ್ಷರಾಗಿ ಈಶ್ವರ ಪಟಗಾರ್, ಉಪಾಧ್ಯಕ್ಷರುಗಳಾಗಿ ಸಂತೋಷ ಹೆಗಡೆ, ನರಸಿಂಹ ದುರ್ಗಾ ಸಿದ್ದಿ, ಈರಪ್ಪ ನಾಗಪ್ಪ ಬೋವಿ ವಡ್ಡರ್ ಹಾಗು ಕಾರ್ಯದರ್ಶಿಯಾಗಿ ಯೋಗೇಶ್ ಪುಟ್ಟಾ ನಾಯ್ಕ್ ಆಯ್ಕೆಯಾದರು.

ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್.ಭಟ್ ನೂತನ ಘಟಕ ಉದ್ಘಾಟಿಸಿ ಅಧ್ಯಕ್ಷ ,ಉಪಾಧ್ಯಕ್ಷ ಪಧಾದಿಕಾರಿಗಳಿಗೆ ಶುಭಕೋರಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಟಿ.ಎಂ.ಎಸ್ ನಿರ್ದೇಶಕ ಅಪ್ಪು ಆಚಾರಿ, ಗುತ್ತಿಗೆದಾರ ಸಂತೋಷ್ ನಾಯ್ಕ್, ಅಖಿಲ ಕರ್ನಾಟಕ ಅಹಿಂದ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಹೆಚ್ ದೇಸಳ್ಳಿ ಉಪಸ್ಥಿತರಿದ್ದು ನೂತನ ಸಂಘಟನೆಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಅಹಿಂದ ವೇದಿಕೆ ಸಂಸ್ಥಾಪಕ ಅಧ್ಯಕ್ಷ ದ್ಯಾಮಣ್ಣ ಬೋವಿ ವಡ್ಡರ್ ವಹಿಸಿ ಸಂಘಟನೆಯ ಬದ್ದತೆ ಮತ್ತು ಶಿಸ್ತಿನ ಬಗ್ಗೆ ನೂತನ ಘಟಕದ ಅಧ್ಯಕ್ಷ ಉಪಾಧ್ಯಕ್ಷ ಪಧಾದಿಕಾರಿಗಳಿಗೆ ಕಿವಿಮಾತು ಹೇಳಿದರು.















Prathidvani Yellapura