

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ವೖ. ಟಿ. ಎಸ್. ಎಸ್ ನ ಕಾಲೇಜು ವಿಭಾಗದ ವಿದ್ಯಾರ್ಥಿ ಸಂಸತ್ ಚುನಾವಣೆಯು ಶನಿವಾರ ನಡೆಯಿತು.


ಪ್ರಧಾನ ಕಾರ್ಯದರ್ಶಿಯಾಗಿ ಭವಿಕ್ ಬಾಲಕೃಷ್ಣ ನಾಯಕ ಅವಿರೋಧ ಆಯ್ಕೆಯಗಿದ್ದು ಮಹಿಳಾ ಪ್ರತಿನಿಧಿಯಾಗಿ ತನಿಶಾ ರವಿ ಶೇಟ್, ಸಾಂಸ್ಕೃತಿಕ ಪ್ರತಿನಿಧಿಗಳಾಗಿ ನಾಗರಾಜ ಎಸ್ ಶಾನಭಾಗ ಮತ್ತು ಸುಮನ ಚವ್ಹಾಣ, ಕ್ರೀಡಾ ಪ್ರತಿನಿಧಿಗಳಾಗಿ ಅನ್ಶ್ ಎಸ್ ಪತ್ತಾರ ಮತ್ತು ಶ್ರೀದೇವಿ ಗಂಗಾನಾಯ್ಕ ಆಯ್ಕೆಯಾಗಿರುತ್ತಾರೆ.

ಪ್ರಾಂಶುಪಾಲ ಆನಂದ ಹೆಗಡೆ ಮಾರ್ಗದರ್ಶನದಲ್ಲಿ ಚುನಾವಣಾಧಿಕಾರಿ ಪರವೀನಬಾನು ಸುಂಕದ ಹಾಗೂ ಎಲ್ಲ ಉಪನ್ಯಾಸಕರ ಸಹಕಾರದಿಂದ ಚುನಾವಣೆ ಯಶಸ್ವಿಯಾಗಿ ಮುಕ್ತಾಯ ಗೊಂಡಿತು.
ಸಂಸ್ಥೆಯ ಅಧ್ಯಕ್ಷರು ಹಾಗೂ ಪಧಾಧಿಕಾರಿಗಳು ಪ್ರಾಂಶುಪಾಲರು, ಉಪನ್ಯಾಸಕರು ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.











Prathidvani Yellapura