Breaking News

Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

ಅಣಲಗಾರ ರಸ್ತೆ ಕಳಪೆ ಕಾಮಗಾರಿ ಸಮಸ್ಯೆ ಬಗೆಹರಿಸುವಂತೆ ಶಾಸಕರಿಗೆ ಗ್ರಾಮಸ್ಥರ ಮನವಿ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ನಂದೊಳ್ಳಿ ಗ್ರಾ.ಪಂ ವ್ಯಾಪ್ತಿಯ ಅಣಲಗಾರ ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಅದನ್ನು ಸರಿಯಾಗಿ ಮಾಡಿಸಿಕೊಡಬೇಕು.‌ ದುರಸ್ತಿ ಆಗದೇ ಬಾಕಿ ಉಳಿದ ರಸ್ತೆಯ ಡಾಂಬರೀಕರಣಕ್ಕೆ ಅನುದಾನ ನೀಡುವಂತೆ ಆಗ್ರಹಿಸಿ ಗ್ರಾಮಸ್ಥರು ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಮನವಿ ಸಲ್ಲಿಸಿದರು. ಈಗಾಗಲೇ 90 ಲಕ್ಷ ರೂ ವೆಚ್ಚದಲ್ಲಿ 2.5 ಕಿಮೀ ರಸ್ತೆ ಕಾಮಗಾರಿ ಆಗಿದ್ದು, ಅದು ಕಳಪೆಯಾಗಿದೆ. ಈಗಾಗಲೇ ಅಧಿಕಾರಿಗಳಿಗೆ ದೂರಲಾಗಿದೆ. …

Read More »

ಅಭ್ಯರ್ಥಿಗಳು ಸೊಸೈಟಿ ಚುನಾವಣೆ ಎದುರಿಸಿದರೆ ಸಾಲದು ಮತ ಪೆಟ್ಟಿಗೆ ಕಾಯಲು ಸಿದ್ದರಿರಬೇಕು..ಪಾಳಿ ಪ್ರಕಾರ..!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಕಳೆದ ಕೆಲವು ದಿನಗಳ ಹಿಂದೆ ಯಲ್ಲಾಪುರ ತಾಲೂಕಿನ ಆನಗೋಡು ಮತ್ತು ಎಲ್.ಎಸ್.ಎಂ.ಪಿ ಸೊಸೈಟಿ ಚುನಾವಣೆ ನಡೆದಿತ್ತು ಅದರಲ್ಲಿ ಕೆಲವರು ತಮ್ಮ ಮತಗಳನ್ನು ಮಾನ್ಯ ಮಾಡುವಂತೆ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು. ಪ್ರಕರಣ ವಿಚಾರಣೆ ಹಂತದಲ್ಲಿರುವಾಗಲೆ ಚುನಾವಣೆ ನಡೆದಿದೆ ನ್ಯಾಯಾಲಯದ ಮೆಟ್ಟಿಲು ಹತ್ತಿದ ಸದಸ್ಯರಿಗು ಮತ ಚಲಾಯಿಸಲು ವ್ಯವಸ್ಥೆ ಕಲ್ಪಿಸಲಾಗಿತ್ತು ಆದರೆ ಆ ಮತಗಳು ಸೇರಿದಂತೆ ಎಣಿಕೆ ನಡೆಯದೆ ಮತ ಪೆಟ್ಟಿಗೆಗಳನ್ನು …

Read More »

ಸರ್ಕಾರಿ ಕರ್ತವ್ಯದಲ್ಲಿ ಜನರಿಗೆ ಉತ್ತಮ ಸೇವೆ ಸಲ್ಲಿಸಿ ನಿಮ್ಮ ಬದುಕು ಸಾರ್ಥಕಗೊಳಿಸಿ- ಶಿವರಾಮ ಹೆಬ್ಬಾರ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಯಲ್ಲಾಪುರ ಪ್ರತಿಧ್ವನಿ,ಯಲ್ಲಾಪರ : ಮನೆಯಲ್ಲಿನ ಮೌಲ್ಯಯುತ ಶಿಕ್ಷಣ ಮಕ್ಕಳಿಗೆ ಸಿಗಬೇಕಿದೆ ಆಗ ಜ್ಞಾನಾರ್ಜನೆಯ ಶಿಕ್ಷಣದೊಂದಿಗೆ ಸಂಸ್ಕಾರವಂತ ಪ್ರಜೆಗಳಾಗಿ ಹೊರಹೊಮ್ಮುವಂತಾಗಲಿದೆ. ಸರ್ಕಾರಿ ನೌಕರರು ತಮ್ಮ ವೃತ್ತಿ ಬದುಕನ್ನು ಸಾರ್ಥಕ ಪಡಿಸಿಕೊಳ್ಳುವಂತಹ ಸೇವೆ ಜನತೆಗೆ ದೊರಕಿಸಿಕೊಡಬೇಕಿದೆ. ನಿಮ್ಮ ಎಲ್ಲಾ ಬೇಡಿಕೆಗಳನ್ನು ನನ್ನ ಪ್ರಯತ್ನದೊಂದಿಗೆ ಸಾಕಾರಗೊಳಿಸುತ್ತೇನೆ. ರಾಜಕೀಯ ವಿಪ್ಲವಗಳು ಪ್ರತಿ ಚುನಾವಣೆಯಲ್ಲಿ ಹೊಸ ಪಾಠವನ್ನು ಪರಿಚಯಿಸುತ್ತಲೆ ಸಾಗುತ್ತದೆ. ಅದನ್ನು ಸ್ಪೂರ್ತಿ ರೂಪದಲ್ಲಿ ಸ್ವೀಕರಿಸಬೇಕಿದೆ. ನಿಮ್ಮ ಗೌರವದ ಸನ್ಮಾನ …

Read More »

ಸೋಲನ್ನು ಸವಾಲಾಗಿ ಸ್ವೀಕರಿಸಿ ಮೇಲೆದ್ದು ಬರಲಿದೆ ಬಿಜೆಪಿ. ಭಾರತ ಸ್ವರ್ಣಪಥದತ್ತ ಸಾಗಿ 9 ವರ್ಷ.. ಸಿ.ಟಿ.ರವಿ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ-ಸಾವಿಗೆ ಹೆದರದ ಬಿಜೆಪಿ ಸೋಲಿಗೆ ಹೆದರುವ ಮಾತೆ ಇಲ್ಲ ಸೋಲನ್ನು ಸವಾಲಾಗಿ ಸ್ವೀಕರಿಸಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ತರುವುದಂತು ಶತಸಿದ್ದ. ದೇಶವನ್ನು ಸ್ವರ್ಣಪಥದತ್ತ ಕೊಂಡೊಯ್ಯಲು ಪ್ರಾರಂಭಿಸಿ  ಒಂಬತ್ತು ವರ್ಷ ಸಂದಿದೆ ಅದು ಪ್ರಧಾನಿ ಮೋದಿ  ನೇತೃತ್ವದ ಕೇಂದ್ರ ಸರ್ಕಾರಕ್ಕೆ ಎಂಬುದು ಕಾರ್ಯಕರ್ತರಾದ ನಮ್ಮೆಲ್ಲರ ಹೆಮ್ಮೆ . ದೇಶದ ಇಟ್ಟ ಕಡೆಯ ಮನುಷ್ಯನಿಗೆ ಸರ್ಕಾರಿ ಸೌಕರ್ಯಗಳು ತಲುಪಿಸಿ ನೀತಿ ಅಧಿಕಾರವನ್ನು …

Read More »

ಯಲ್ಲಾಪುರ ಬರಪೀಡಿತ ತಾಲೂಕೆಂದು ಘೋಷಣೆ ಮಾಡಿ- ಪಿ.ಜಿ ಭಟ್ಟ ಬರಗದ್ದೆ.

ಪ್ರತಿಧ್ವನಿ,ಯಲ್ಲಾಪುರ – ಇತಿಹಾಸದಲ್ಲಿ ಕಂಡು ಕೇಳರಿಯದ ಬಿಸಿ ದಗೆ ಮಳೆಗಾಲದ ಸಂದರ್ಭದಲ್ಲಿ ಕಾಣುತ್ತಿರುವುದು ಇದೇ ಮೊದಲು, ಇದರ ಪರಿಣಾಮ ನೇರವಾಗಿ ಬೆಳೆಗಳ ಮೇಲಾಗುತ್ತಿದ್ದು ಈಗಾಗಲೆ ಅಡಿಕೆ ಗಿಡಗಳು ಬಲಿಯಾಗುತ್ತಿವೆ. ಮಿಳ್ಳೆಗಳೆಲ್ಲ ಉದುರುತ್ತಿದ್ದು ಎಷ್ಟೇ ನೀರು ಕೊಟ್ಟರು ಪ್ರಯೋಜನವಾಗುತ್ತಿಲ್ಲ. ತೆಂಗಿನ ಮರದ ಸಿಂಗಾರವು ಬಿಸಿಲ ದಗೆಗೆ ಬಲಿಯಾಗುತ್ತಿದ್ದು ಸುರುಳಿ ಸುತ್ತುತ್ತಿದೆ. ಈ ಎಲ್ಲಾ ಕಾರಣಗಳಿಂದ ತಾಲೂಕಿನ ರೈತಾಪಿ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದು ಸರ್ಕಾರ ಅವರ ನೆರವಿಗೆ ದಾವಿಸಬೇಕಿದೆ ಅದಕ್ಕಾಗಿ ಯಲ್ಲಾಪುರ ತಾಲೂಕನ್ನು …

Read More »

ಮಂಚಿಕೇರಿ ಗ್ರಾಮೀಣ ಭಾಗದ ಟ್ಯೂಷನ್ ಸೆಂಟರ್ ವಿಧ್ಯಾರ್ಥಿನಿ ನವೋದಯದ ಶಾಲೆಗೆ ಆಯ್ಕೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ – ತಾಲೂಕಿನ ಮಂಚಿಕೇರಿ ಗ್ರಾಮದಲ್ಲಿ ಗ್ರಾಮೀಣ ಭಾಗದ ಮಕ್ಕಳಿಗಾಗಿ ನಡೆಸುತ್ತಿದ್ದ ” ಮಂಚಿಕೇರಿ ಟ್ಯೂಷನ್ ಸೆಂಟರ್” ನ ವಿದ್ಯಾರ್ಥಿನಿ ಅನನ್ಯ ಅಶೋಕ ನಾಯ್ಕ್ ನವೋದಯ ಪ್ರವೇಶ ಪರೀಕ್ಷಯಲ್ಲಿ ಆಯ್ಕೆಯಾಗಿದ್ದು ಸೈ ಎನಿಸಿಕೊಂಡಿದ್ದಾಳೆ.ನವೋದಯ ಶಾಲೆಗೆ ಸೇರಲು ತಾಲೂಕಿನಿಂದ ನಾಲ್ಕು ವಿದ್ಯಾರ್ಥಿಗಳಿಗೆ ಅವಕಾಶವಿದ್ದು 600 ಕ್ಕು ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಅದರಲ್ಲಿ ಆಯ್ಕೆಯಾದ ನಾಲ್ಕು ವಿದ್ಯಾರ್ಥಿಗಳಲ್ಲಿ ಗ್ರಾಮೀಣ ಭಾಗದ ಮಂಚಿಕೇರಿಯ ಅನನ್ಯ …

Read More »

ರಾಸಾಯನಿಕ ಮುಕ್ತ ಮಲ್ಲಿಕ ಮಾವು ಅದರಕ್ಕು ಸಿಹಿ ಉದರಕ್ಕು ಸಿಹಿ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ – ಹಣ್ಣುಗಳ ರಾಜ ಮಾವು ಸರ್ವರಿಗು ಪ್ರಿಯವಾದ ಹಣ್ಣು. ವರ್ಷಕ್ಕೊಮ್ಮೆ ಮಾವಿನ ರುಚಿ ಸವಿಯದವರಿಲ್ಲ ಮತ್ತು ಆ ವರ್ಷ ಮಾವು ತಿನ್ನದೆ ಹೋದರೆ ಏನನ್ನೋ ಕಳೆದುಕೊಂಡ ಅನುಭವವಾಗುತ್ತದೆ. ತಾಲೂಕಿನ ಕಮ್ಮಾರಗದ್ದೆ ಕೃಷಿಕ ಯಾವುದೆ ರಾಸಾಯನಿಕ ಬಳಸದೆ ರುಚಿಭರಿತವಾದ ಮಲ್ಲಿಕಾ ಜಾತಿಯ ಮಾವಿನಹಣ್ಣು ಗಳನ್ನು ಮಾರುಕಟ್ಟೆಗೆ ತಂದು ಮಾರಿ ಎಲ್ಲರಿಗು ಮಾವಿನ ರುಚಿಯನ್ನು ಉಣಬಡಿಸುತ್ತಾ ಭಟ್ಟರ ತೋಟದ ಮಾವು ಎಂದೇ …

Read More »

ಅರಬೈಲ್ ಘಟ್ಟದಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ ಯಶಸ್ವಿ ಕಾರ್ಯಾಚರಣೆ ತಪ್ಪಿದ ಬಾರಿ ದುರಂತ

ಪ್ರತಿಧ್ವನಿ,ಯಲ್ಲಾಪುರ – ತಾಲೂಕಿನಲ್ಲಿ ಹಾದು ಹೋಗಿರುವ ಬಳ್ಳಾರಿ- ಕಾರವಾರ ರಾಷ್ಟ್ರೀಯ ಹೆದ್ದಾರಿ 63 ರ ಅರಬೈಲ್ ಘಟ್ಟ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಗ್ಯಾಸ್ ತುಂಬಿದ್ದ ಟ್ಯಾಂಕರ್ ಒಂದು ಮತ್ತೊಂದು ವಾಹನಕ್ಕೆ ಡಿಕ್ಕಿಯಾಗಿ ರಸ್ತೆಗೆ ಅಡ್ಡಲಾಗಿಬಿದ್ದ ಘಟನೆ ನಡೆದಿತ್ತು. ಗ್ಯಾಸ್ ತುಂಬಿದ್ದ ಟ್ಯಾಂಕರ್ ರತ್ನಗಿರಿಯಿಂದ ಪುತ್ತೂರಿಗೆ ಸಾಗುವ ವೇಳೆ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಮೇಲೆ ಮತ್ತೊಂದು ವಾಹನಕ್ಕೆ ಡಿಕಿಯಾಗಿ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಗೆ ಅಡ್ಡಲಾಗಿ …

Read More »

ಯಲ್ಲಾಪುರ ತಾಲೂಕಿನ ಕೀರ್ತಿ ಶಿಖರಕ್ಕೆ ಮತ್ತೊಂದು ಗರಿ ಮೂಡಿಸಿದ ಹಿತ್ಲಳ್ಳಿ ತನಯ ಹೆಗಡೆ…

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ – ತಾಲೂಕಿನ ಹಿತ್ಲಳ್ಳಿ ಮೂಲದ ತನಯ ಹೆಗಡೆ ಸಿ ಇ ಟಿ ಯಲ್ಲಿ ರಾಜ್ಯಕೆ 45 ನೇ ರ‍್ಯಾಂಕ್ ಹಾಗೂ ಜೆ ಇ ಇ ಅಡ್ವಾನ್ಸಡ್ ನಲ್ಲಿ ದೇಶಕ್ಕೆ 1790 ನೇ ರ‍್ಯಾಂಕ್ ಗಳಿಸಿ ಅದ್ಭುತ ಸಾಧನೆ ಮಾಡಿರುತ್ತಾನೆ. ತನಯ ಹೆಗಡೆ ಹಿತ್ಲಳ್ಳಿ ಗ್ರಾಮದ ನಿವಾಸಿಗಳಾದ ವಿನಾಯಕ ಹೆಗಡೆ ಮತ್ತು ಶಾಂತಲಾ ಹೆಗಡೆ ದಂಪತಿಗಳ ಪುತ್ರನಾಗಿದ್ದು 1 ರಿಂದ 7 …

Read More »

ವಿಶ್ವಗುರು ಭಾರತ ಜಗತ್ತಿಗೆ ಕೊಟ್ಟ ಯೋಗ-ಯಲ್ಲಾಪುರದಲ್ಲಿ ವಿವಿಧೆಡೆ ನಡೆದ ವಿಶ್ವ ಯೋಗ ದಿನಾಚರಣೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ-ಭಾರತ ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ದೇಶ ಎಂಬ ಹೆಮ್ಮೆ ನಮ್ಮೆಲ್ಲರಲ್ಲು ಇದೆ ಅದನ್ನು ವಿಶ್ವವೆ ಒಪ್ಪಿಕೊಂಡು ಜೂ,21 ನ್ನು ಅಂತರಾಷ್ಟ್ರೀಯ ಯೋಗ ದಿನವಾಗಿ ಜಗತ್ತು ಆಚರಿಸುತ್ತಿದೆ. ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಿಶ್ವ ಯೋಗ ದಿನವನ್ನು ನ್ಯಾಯಾದೀಶರು, ವಕೀಲರು, ನ್ಯಾಯಾಲಯ ಸಿಬ್ಬಂದಿಗಳು, ತಾಲೂಕು ಸೇವಾ ಸಮಿತಿ ಸದಸ್ಯರು, ಇನ್ನಿತರರು ಭಾಗವಹಿಸಿ ವಿವಿಧ ಆಸನಗಳನ್ನು ಮಾಡುವುದರೊಂದಿಗೆ ಯೋಗದಿನವನ್ನು ಆಚರಿಸಿದರು. ಯಲ್ಲಾಪುರ ಖ್ಯಾತ ಶಿಲ್ಪಿ ಯೋಗ …

Read More »