Breaking News

Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕ ಸುರಿದ ಮಣ್ಣಿನಿಂದ ಸಾರ್ವಜನಿಕರಿಗೆ ಉಸಿರಾಟದ ತೊಂದರೆ – ಪ್ರತಿಭಟನೆ ಎಚ್ಚರಿಕೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಸಾರ್ವಜನಿಕರ ಸ್ವಾಸ್ಥ್ಯ ಕಾಪಾಡಬೇಕಾದ ಸರ್ಕಾರವೆ ತೆರಿಗೆ ಕಟ್ಟುವ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಯಲ್ಲಿ ಮಹಾ ಎಡವಟ್ಟು ಮಾಡಿದ್ದು ದೂಳಿನ ಸಾಮ್ರಾಜ್ಯವೆ ತಲೆ ಎತ್ತಿದೆ ಸಾರ್ವಜನಿಕರ ಉಸಿರಾಟಕ್ಕು ಸಂಚಕಾರ ತಂದಿದೆ ಈ ಅಕ್ರಮದ ಪೂರ್ಣ ಪ್ರಮಾಣದ ತನಿಖೆಗೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಯಲ್ಲಾಪುರ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಸದಾ …

Read More »

ಆನೆಗಳಿಂದ ಬೆಳೆ ಸಂರಕ್ಷಣೆ – ಮನು ಕುಲದೊಂದಿಗಿನ ಸಂಬಂಧ ಕುರಿತು ಕಾರ್ಯಗಾರ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ, : ಭಾರತವು ಏಷ್ಯಾ ಖಂಡದ ಆನೆಗಳ ಅತಿದೊಡ್ಡ ಜನಸಂಖ್ಯೆಗೆ ನೆಲೆಯಾಗಿದೆ ಮತ್ತು ಅವುಗಳು ಭಾರತದ 19 ರಾಜ್ಯಗಳಲ್ಲಿ ವಿತರಿಸಲ್ಪಡುತ್ತವೆ. ದೊಡ್ಡ ದೇಹದ ಪ್ರಾಣಿಗಳಾಗಿರುವ ಆನೆಗಳಿಗೆ ಹೆಚ್ಚಿನ ಸ್ಥಳಾವಕಾಶ ಮತ್ತು ಹೆಚ್ಚಿನ ಆಹಾರದ ಅಗತ್ಯವಿದೆ. ಹೆಚ್ಚುತ್ತಿರುವ ಮಾನವ ಜನಸಂಖ್ಯೆ ಮತ್ತು ಕುಗ್ಗುತ್ತಿರುವ ಕಾಡುಗಳೊಂದಿಗೆ, ಆನೆಗಳು ಜನರು ಬೆಳೆದ ಬೆಳೆ ಹೊಲಗಳಲ್ಲಿ ಆಹಾರವನ್ನು ಹುಡುಕುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. …

Read More »

ಯಲ್ಲಾಪುರದಲ್ಲಿ ಮತದಾನ ಜಾಗೃತಿ ವಿಡಿಯೋ ಸ್ಕ್ರೀನ್ ಪ್ರಸಾರ ಮತ್ತು ಜಾಗೃತ ಪತ್ರ ವಿತರಣೆ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ಚನಿ ಯಲ್ಲಾಪುರ : ಪಟ್ಟಣದ ಬಸ್ ನಿಲ್ದಾಣದಲ್ಲಿ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರಜೆಗಳಿಗಿರುವ ಮತದಾನವೆಂಬ ಸಾರ್ವಭೌಮ ಅಧಿಕಾರದ ಮಹತ್ವ ಸಾರುವ ವಿಡಿಯೋ ಸ್ಕ್ರೀನ್ ಜಾಗೃತಿ ಪ್ರಚಾರ ಮತ್ತು ಜಾಗೃತಿ ಪತ್ರ ವಿತರಣೆ ಕಾರ್ಯಕ್ರಮ ಜರುಗಿತು. ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸ್ ನಿಲ್ದಾಣದಲಿದ್ದ ಪ್ರಯಾಣಿಕರಿಗೆ ಸುತ್ತಮುತ್ತಲಿನ ಅಂಗಡಿಕಾರರಿಗೆ ಮತದಾನದ ಮಹತ್ವದ ಬಗ್ಗೆ ವಿವರಿಸಿ …

Read More »

ಯಲ್ಲಾಪುರ ಕಲ್ಲಗದ್ದೆಯಲ್ಲಿ ಬೀಡಿಕರ್ ಕುಟುಂಬದಿಂದ ಚೌಡೇಶ್ವರಿ ಮತ್ತು ನಾಗದೇವರ ಪ್ರತಿಷ್ಟಾಪನೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಹೊರವಲಯದ ಕಲ್ಲಗದ್ದೆಯಲ್ಲಿ ಬೀಡಿಕರ ಕುಟುಂಬದ ಅಡಿಯಲ್ಲಿ ಚೌಡೇಶ್ವರಿ ಅಮ್ಮನವರು ಮತ್ತು ನಾಗೇವರ ಪ್ರತಿಷ್ಟಾಪನೆ ಸಾಂಗವಾಗಿ ನೆರವೇರಿತು. ಪಟ್ಟಣದ ಹೊರವಲಯದ ಕಲ್ಲಗದ್ದೆಯಲ್ಲಿ ತಮ್ಮ ಪೂರ್ವಜರ ಕಾಲದಿಂದಲೂ ಪೂಜಿಸುತ್ತಾ ಬರುತ್ತಿದ್ದ ಬೀಡಿಕರ್ ಕುಟುಂಬದ ಸದಸ್ಯರು ಇದೀಗ ಗದ್ದೆಗಳ ನಡುವೆ ಪುಟ್ಟ ಗುಡಿ ನಿರ್ಮಿಸಿ ಪ್ರತಿಷ್ಟಾಪನೆ ಕಾರ್ಯ ನೆರವೇರಿಸಿದರು. ವೈದ್ದಿಕರ ವೇದ ಮಂತ್ರ ಘೋಷಗಳ ನಡುವೆ ಪ್ರತಿಷ್ಟಾಪನೆ …

Read More »

ಯಲ್ಲಾಪುರ ಮಂಜುನಾಥ ನಗರ ರಾಮ ಭಕ್ತ ಬಳಗ ಮತ್ತು ಭಜನಾ ತಂಡದಿಂದ ಶ್ರೀ ರಾಮ ನವಮಿ ಆಚರಣೆ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ರಾಮ ನವಮಿ ಆಚರಣೆ ವಿಡಿಯೋ ದೃಶ್ಯಾವಳಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ ಪ್ರತಿಧ್ವನಿ ಗೆ ಸಬ್ ಸ್ಕ್ರೈಬ್ ಆಗಿ ಪ್ರೋತ್ಸಾಹಿಸಿ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಮಂಜುನಾಥ ನಗರದ ನಾಗರ ಕಟ್ಟೆ ಶ್ರೀರಾಮ ಸರ್ಕಲ್ ನಲ್ಲಿ ಮಂಜುನಾಥ ನಗರದ ರಾಮ ಭಕ್ತ ಬಳಗ ಮತ್ತು ಭಜನಾ ತಂಡದ ವತಿಯಿಂದ ಶ್ರೀರಾಮ ನವಮಿ ಆಚರಿಸಲಾಯಿತು. ಪ್ರಭು ಶ್ರೀರಾಮ ಭಜನೆಯೊಂದಿಗೆ ವಿಶೇಷ …

Read More »

ದಲಿತ ಸಂಘಟನೆಗಳ ಅಡಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ  ಅಂಬೇಡ್ಕರ್ ವೃತ್ತದಲ್ಲಿ ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133 ನೆ ಜಯಂತಿ ಕಾರ್ಯಕ್ರಮ ಅತ್ಯಂತ ಶ್ರದ್ಧೆಯಿಂದ ಭಾವಪೂರ್ಣವಾಗಿ ಆಚರಿಸಲಾಯಿತು. ತಾಲೂಕು ದಂಡಾಧಿಕಾರಿ ತನುಜ ಸವದತ್ತಿ ಮತ್ತು ಅ.ಸೇ.ಸ. ಅಧ್ಯಕ್ಷ ಜಗನ್ನಾಥ ರೇವಣಕರ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಪುಷ್ಪ ನಮನ ಸಲ್ಲಿಸಿದರು.      ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ …

Read More »

ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅತ್ಯಂತ ಗೌರವಯುತವಾಗಿ ಎತ್ತಿ ಹಿಡಿವ ಪಕ್ಷ ಕಾಂಗ್ರೆಸ್ – ದೇಶಪಾಂಡೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಬಡವರ, ರೈತರ, ಕಾರ್ಮಿಕರ ಪರವಾದ ಸುಭದ್ರವಾದ ಆಡಳಿತ ನೀಡುವ ಜನಸಾಮಾನ್ಯರ ಪಕ್ಷ ಕಾಂಗ್ರೆಸ್ ಎಂಬುದು ಈ ದೇಶದ ಹೆಮ್ಮೆಯಾಗಿದೆ. ಈಗಲು ಈ ಭಾಗದ ಜ್ವಲಂತಸಮಸ್ಯೆ ಅತಿಕ್ರಮಣದ ಕಷ್ಟಗಳನ್ನು ಪ್ರಸ್ತುತ ಕೇಂದ್ರ ಸರ್ಕಾರ ಬಗೆಹರಿಸುವಲ್ಲಿ ವಿಫಲವಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಮೈತ್ರಿ ಸರ್ಕಾರ ಬಂದಲ್ಲಿ ಅತಿಕ್ರಮಣ ಸಮಸ್ಯೆ ಕಟಿಬದ್ದವಾಗಿ ಬಗೆಹರಿಸಲಿದ್ದೇವೆ. ಇದು ಕಾಂಗ್ರೆಸ್ ವಾಗ್ದಾನ ಎಂದು ಕಾಂಗ್ರೆಸ್ …

Read More »

ಸಂಸ್ಕಾರಯುತ ಯಶಸ್ವಿ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ವೈ.ಟಿ.ಎಸ್.ಎಸ್ ಉತ್ತಮ ಆಯ್ಕೆ ; ಮತ್ತೊಮ್ಮೆ ಸಾಬೀತು..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದ್ದು ತಾಲೂಕಿನ 6 ಕಾಲೇಜುಗಳ ಪೈಕಿ ಅತ್ಯುತ್ತಮ ಫಲಿತಾಂಶ ಪಡೆದು ಸಂಸ್ಕಾರವಂತ ಯಶಸ್ವಿ ಉತ್ತಮ ದರ್ಜೆಯ ಶಿಕ್ಷಣಕ್ಕೆ ವೈ.ಟಿ.ಎಸ್.ಎಸ್ ಉತ್ತಮ ಆಯ್ಕೆ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ. 7 ದಶಕಗಳ ಸುದೀರ್ಘ ಇತಿಹಾಸವಿರುವ ಯಲ್ಲಾಪುರದ ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆ ರಾಜ್ಯಮಟ್ಟದಲ್ಲೂ ಉತ್ತಮ ಹೆಸರುಗಳಿಸಿರುವ ಸಂಸ್ಥೆಯಾಗಿದೆ. ಈ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ತಾಲೂಕು …

Read More »

ಯಲ್ಲಾಪುರದ ಕೆಬಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ರಂಜಾನ್ ಸಾಮೂಹಿಕ ಪ್ರಾರ್ಥನೆ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಬಳ್ಳಾರಿ-ಕಾರವಾರ ಹೆದ್ದಾರಿ ಪಕ್ಕದಲ್ಲಿರುವ ಈದ್ಗಾ ಮೈದಾನದಲ್ಲಿ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ನೂರಾರು ಮುಸ್ಲಿಂ ಬಾಂಧವರು ಸೇರಿ ಅಲ್ಲಾಹುಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸುಮಾರು ಮೂವತ್ತು ದಿನಗಳ ಉಪವಾಸ ಮಾಡಿ ಶುಕ್ರವಾರ ಚಂದ್ರ ದರ್ಶನ ಪಡೆದು ಗುರುವಾರ ಬೆಳಗ್ಗೆ 9-30 ರ ಸುಮಾರಿಗೆ ಸಮುದಾಯದ ಧರ್ಮ ಗುರುಗಳ ನೇತೃತ್ವದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ …

Read More »

ರಂಜಾನ್ ಹಬ್ಬದ ದಿನವೆ ಯಲ್ಲಾಪುರ ದಲ್ಲಿ  ಅಪಘಾತ ಬೈಕ್ ಸವಾರರಿಬ್ಬರ ದುರ್ಮರಣ..

ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಅರಬೈಲ್ ಘಟ್ಟ ಪ್ರದೇಶದಲ್ಲಿ ಬೈಕ್ ಮತ್ತು ಬಸ್ಸಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಗಂಭೀರ ಗಾಯಗಳಾಗಿ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಮೃತಪಟ್ಟ ಯುವಕರಿಬ್ಬರು ಯಲ್ಲಾಪುರ ಪಟ್ಟಣದ ತಳ್ಳಿಗೆರೆ ನಿವಾಸಿಗಳಾದ ಮುರ್ತುಜ ಇಮ್ತಿಯಾಜ್ ಮುಲ್ಲಾ (21) ಮತ್ತು ತೌಫಿಕ್ ಜಮೀರ್ ಮುಲ್ಲಾ (18) ಎಂಬುವರಾಗಿದ್ದಾರೆ. ಗುರುವಾರ ರಂಜಾನ್ ಹಬ್ಬದ ಸಡಗರದ ನಡುವೆ ಬೈಕ್ ಏರಿ ಯಲ್ಲಾಪುರದಿಂದ ಅಂಕೋಲಾ ಕಡೆಗೆ ಸಾಗುವ ವೇಳೆ …

Read More »