Breaking News

ಸಂಸ್ಕೃತಿಯ ಉಳಿವು ನಮ್ಮೆಲ್ಲರ ಹೊಣೆ: ಯಲ್ಲಾಪುರದಲ್ಲಿ ಬಂಜಾರ ಸಾಧಕರಿಗೆ “ಗೌರವ ಸಮರ್ಪಣೆ”


ಪ್ರತಿಧ್ವನಿ ಯಲ್ಲಾಪುರ: “ನಾಗರಿಕತೆಯ ಓಟದಲ್ಲಿ ನಮ್ಮ ಮೂಲ ಸಂಸ್ಕೃತಿ, ಭಾಷೆ ಮತ್ತು ಉಡುಗೆ-ತೊಡುಗೆಗಳನ್ನು ಮರೆಯಬಾರದು. ಸಮಾಜ ನಮಗೇನು ನೀಡಿದೆ ಎನ್ನುವುದಕ್ಕಿಂತ, ಸಮಾಜದ ಋಣ ತೀರಿಸಲು ನಮ್ಮ ಕೊಡುಗೆ ಏನು ಎಂಬ ಚಿಂತನೆ ಪ್ರತಿಯೊಬ್ಬರಲ್ಲೂ ಮೂಡಬೇಕು,” ಎಂದು ಶಿರಸಿ ಎ.ಸಿ.ಎಫ್  ಅಮೀತ ಚವ್ಹಾಣ ಅವರು ಕರೆ ನೀಡಿದರು.
ಇಲ್ಲಿನ ನಿಸರ್ಗ ಮನೆಯಲ್ಲಿ ‘ಬಂಜಾರ ಸೇವಾ ಪ್ರತಿಷ್ಠಾನ (ರಿ) ಯಲ್ಲಾಪುರ’ ಇತ್ತೀಚೆಗೆ ಆಯೋಜಿಸಿದ್ದ ಬಂಜಾರ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಹಮ್ಮಿಕೊಂಡಿದ್ದ “ಗೌರವ ಸಮರ್ಪಣಾ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಬಂಜಾರ ಸೇವಾ ಪ್ರತಿಷ್ಠಾನದ ಅಧ್ಯಕ್ಷ  ಶಂಕರ ನಾಯ್ಕ ಮಾತನಾಡಿ, “ನಮ್ಮ ಸಮಾಜದ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಇಂದಿನ ಯುವ ಪೀಳಿಗೆಗೆ ದಾಟಿಸಬೇಕಿದೆ. ನಮ್ಮ ವಿಶಿಷ್ಟ ಆಚರಣೆಗಳನ್ನು ಉಳಿಸಿಕೊಳ್ಳುವಲ್ಲಿ ಯುವ ಸಮೂಹ ಜಾಗೃತವಾಗಬೇಕು,” ಎಂದರು.

ಗೌರವದ ಗರಿ: ಸಾಧಕರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ಸಮಾಜದ ಗೌರವವನ್ನು ಹೆಚ್ಚಿಸಿದ ಈ ಕೆಳಗಿನ ಸಾಧಕರನ್ನು ಸಮಾಜದ ಹಿರಿಯರ ಸಮ್ಮುಖದಲ್ಲಿ ಅತ್ಯಂತ ಸಡಗರದಿಂದ ಸನ್ಮಾನಿಸಲಾಯಿತು:
ವೃತ್ತಿ ಗೌರವ: ನಿವೃತ್ತ ಪಿ.ಎಸ್.ಐ ಹಾಗೂ ಪ್ರತಿಷ್ಠಾನದ ಗೌರವಾಧ್ಯಕ್ಷರಾದ  ಭೀಮಸಿಂಗ್ ಲಮಾಣಿ ಮತ್ತು ಅಬಕಾರಿ ಇಲಾಖೆಯಲ್ಲಿ ಪಿ.ಎಸ್.ಐ ಆಗಿ ಪದೋನ್ನತಿ ಪಡೆದ  ಸಿ. ಪಿ. ರಾಠೋಡ ಅವರಿಗೆ ಶುಭ ಕೋರಲಾಯಿತು.


ಅಕ್ಷರ ಲೋಕದ ಸಾಧಕರು: 2025-26ನೇ ಸಾಲಿನ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸಾಹಿತಿ  ಶಿವಲೀಲಾ ಶಂಕರ ಹುಣಸಗಿ ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಾಹಿತಿ  ಗಂಗಾಧರ ಎಸ್. ಲಮಾಣಿ ಅವರಿಗೆ ಗೌರವ ಅರ್ಪಿಸಲಾಯಿತು.
ಕ್ರೀಡೆ ಮತ್ತು ಪ್ರತಿಭೆ: ವಿಭಾಗ ಮಟ್ಟದ ಉತ್ತಮ ದೈಹಿಕ ಶಿಕ್ಷಕ ಪ್ರಶಸ್ತಿ ವಿಜೇತ ಗಂಗಾ ನಾಯ್ಕ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 94 ರಷ್ಟು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿ ಕುಮಾರ ಟ್ಯಾಗೋರ್ ಅವರಿಗೆ ಸನ್ಮಾನಿಸಿ ಉತ್ತೇಜಿಸಲಾಯಿತು.
“ಪ್ರತಿಭೆ ಯಾವುದೇ ತಾಂಡಾ ಅಥವಾ ಹಳ್ಳಿಗೆ ಸೀಮಿತವಲ್ಲ. ಸಮಾಜ ಗುರುತಿಸಿ ಪ್ರೋತ್ಸಾಹಿಸಿದಾಗ ಮಾತ್ರ ಅಂತಹ ಪ್ರತಿಭೆಗಳು ಹೆಮ್ಮರವಾಗಿ ಬೆಳೆಯುತ್ತವೆ.”
ಗಣ್ಯರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ತಾಂಡಾ ನಾಯಕರಾದ ಶ್ರೀ ಈಶ್ವರ್ ರಾಠೋಡ, ಯಲ್ಲಾಪುರ ಪಿ.ಎಸ್.ಐ ಶ್ರೀ ಸೆಟ್ಜಿ ಚವಾಣ್, ಶ್ರೀ ಚಂದ್ರಶೇಖರ ನಾಯ್ಕ, ಶ್ರೀ ದೇವ್ರು, ಶ್ರೀ ಚಂದ್ರಶೇಖರ್ ವಾಗ್ಮೋಡೆ, ಶ್ರೀ ಗಿರೀಶ ಲಮಾಣಿ, ಶ್ರೀ ಹಿರಾಚಂದ್ ಜಾಧವ,ಶ್ರೀ ಲೋಕೇಶ್, ಶ್ರೀಪುರವಂತ ಪವಾರ್,ಶ್ರೀಮತಿ ಹುನಕಿ ಲಮಾಣಿ ಸೇರಿದಂತೆ ಸಮಾಜದ ಹಿರಿಯರು ಮತ್ತು ನೂರಾರು ಯುವಕರು ಭಾಗವಹಿಸಿದ್ದರು.

ಕಾರ್ಯಕ್ರಮದ ಆರಂಭದಲ್ಲಿ
ಸಂಗೀತಾ ಗುರುಪ್ರಸಾದ ಮತ್ತು ಸಂಗಡಿಗರು ಪ್ರಾರ್ಥನೆಯನ್ನು ನಡೆಸಿಕೊಟ್ಟರು,
ಎಸ್. ಟಿ. ಬೇವಿನಕಟ್ಟಿ ಸ್ವಾಗತ ಕೋರಿದರು. ಗಂಗಾಧರ ರವರು ಪ್ರಾಸ್ತಾವಿಕ ನುಡಿ ಆಡಿದರು, ರವಿಕುಮಾರ ಅವರು ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರೆ, ಕೊನೆಯಲ್ಲಿ ಸಾಂಸ್ಕತಿಕ ಕಾರ್ಯಕ್ರಮ ಜರಗಿತು ನಂತರ  ಗುರು ಪ್ರಸಾದ್ ವಂದನಾರ್ಪಣೆ ಮಾಡಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಬಿಜೆಪಿ ವತಿಯಿಂದ ಸಂವಿಧಾನ ಶಿಲ್ಪಿ ಡಾ,ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ..

ಪ್ರತಿಧ್ವನಿ ಯಲ್ಲಾಪುರ: ಭಾರತದ ಸಂವಿಧಾನ ಶಿಲ್ಪಿ,ಸಾಮಾಜಿಕ ನ್ಯಾಯದ ಹರಿಕಾರರು,ಶೋಷಿತರ ದ್ವನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ನಿಮಿತ್ತ ಭಾರತೀಯ ಜನತಾ ಪಾರ್ಟಿ …

Leave a Reply

Your email address will not be published. Required fields are marked *