
.
ಪ್ರತಿಧ್ವನಿ ಯಲ್ಲಾಪುರ : ಅಂದು ಆಲೆಮನೆ ಹೆಸರಿನಲ್ಲಿ ಅಕ್ಕಪಕ್ಕದ ಮನೆಗಳ ರೈತಾಪಿ ವರ್ಗದವರು ಒಂದೆಡೆ ಸೇರಿ ಬೆಲ್ಲ ಮಾಡುವ ಕಾಯಕದಲ್ಲಿ ಒಬ್ಬರಿಗೊಬ್ಬರು ಕೈ ಜೋಡಿಸಿ ಸಹಕರಿಸುತ್ತಾ ಕಬ್ಬಿನ ಹಾಲನ್ನು ಸವಿಯುತ್ತಿದ್ದರು. ಸಂಭ್ರಮಿಸುತ್ತಿದ್ದರು. ಗ್ರಾಮೀಣ ಭಾಗದಲ್ಲಿ ಹಿಂದಿನಕಾಲದ ಸಾಂಪ್ರದಾಯಿಕ ಪದ್ದತಿಗಳು ಇಂದಿಗು ಜೀವಂತವಾಗಿದೆ. ಅದರಲ್ಲಿ ಆಲೆಮನೆ ಹಬ್ಬ ಎಲ್ಲರನ್ನು ಒಂದೆಡೆಗೆ ಸೇರಿಸುತ್ತಾ ರೈತ ಬಾಂಧವ್ಯವನ್ನು ಗಟ್ಟಿಯಾಗಿಸುತ್ತಿದೆ ಇಂತಹ ಕಾರ್ಯಕ್ರಮ ಸಂಘಟಿಸಿರುವುದು ಶ್ಲಾಘನೀಯ ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅಭಿನಂದನಾನುಡಿಗಳನ್ನಾಡಿದರು.

ಅವರು ಭಾನುವಾರ ಕಣ್ಣಿಗೇರಿಯಲ್ಲಿ ಆಯೋಜಿಸಿದ್ದ ” ಆಲೆಮನೆ ಹಬ್ಬದಲ್ಲಿ ” ಪಾಲ್ಗೊಂಡು ಕಾರ್ಯಕ್ರಮ ವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದರು


ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಈ ಭಾಗದ ಮುಖಂಡ ವಿಜಯ್ ಮಿರಾಶಿ, ಸಾಮಾಜಿಕ ಕಾರ್ಯಕರ್ತ ಗಣಪತಿ ಮುದ್ದೇಪಾಲ್, ಕೈಗಾರಿಕಾ ಬ್ಯಾಂಕ್ ವ್ಯವಸ್ಥಾಪಕ ರವೀಂದ್ರ ದೇಸಾಯಿ ಪ್ರಮುಖರಾದ ಲಾರೆನ್ಸ್ ಸಿದ್ದಿ, ಅಣ್ಣಪ್ಪ ನಾಯ್ಕ, ವಾಸುದೇವ ಮಾಪ್ಸೇಕರ್, ಎಂ.ಡಿ.ಮುಲ್ಲಾ ಇನ್ನಿತರ ಪ್ರಮುಖರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಊರ ನಾಗರಿಕರು ಉಪಸ್ಥಿತರಿದ್ದರು. ಕಬ್ಬಿನ ಹಾಲು ಮತ್ತು ತಿನಿಸುಗಳನ್ನು ಸವಿದು ಶುಭಕೋರಿದರು.




Prathidvani Yellapura