Breaking News

ತೊಗಲು ಹರಳಯ್ಯ ಟ್ರಸ್ಟ (ರಿ) ವತಿಯಿಂದ ಕುಲಕಸುಬು ಜಾಗದ ಸ್ವಚ್ಚತೆ – ಕಚೇರಿ ಉದ್ಘಾಟನೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ

ಯಲ್ಲಾಪುರ: ಕುಟುಂಬದ ಹಿರಿಯರು ತಲ ತಲಾಂತರದಿಂದ ಕುಲಕಸಬಾದ ತೊಗಲು (ಚರ್ಮ) ಹದಮಾಡುವ ಕೆಲಸದ ಸ್ಥಳ ಮಣ್ಣು ಕಸ ಹಾಗು ಗಲಿಜು ನೀರು ಸಂಗ್ರಹ ವಾಗಿ ಜನರು ತೀರುಗಾಡದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಜಾಗದ ಪರಿಸ್ಥಿತಿ ನೊಡಿ ತೊಗಲು ಹರಳಯ್ಯ ಟ್ರಸ್ಟ್ ( ರಿ) ಅಡಿಯಲ್ಲಿ ಸ್ಥಳ ವನ್ನು ಸ್ವಚ್ಚಗೊಳಿಸಿ ಅಲ್ಲಿಯೆ ಕಚೇರಿ ನಿರ್ಮಿಸಿ ಸಮಾಜಮುಖಿ ಸೇವೆಗೆ ಅಣಿಗೊಳಿಸಲಾಗಿದೆ.

ಸಮುದಾಯದ ಹಿರಿಯರ ಆಶಯದಂತೆ ಪೂರ್ವಜರ ಕುಲಕಸುಬು ಸ್ಥಳವನ್ನು ಕಳೆದ ನಾಲ್ಕು ತಿಂಗಳಿಂದ ನಿತ್ಯವು ಸ್ವಚ್ಚತಾ ಕಾರ್ಯ ಮಾಡುತ್ತಲಿದ್ದು ಮಂಗಳವಾರ ಕಚೇರಿಯನ್ನು ಇಲ್ಲಿಯೆ ತೆರೆಯಲಾಯಿತು ಎಂದು ಟ್ರಸ್ಟನ ಸಂಸ್ಥಾಪಕ ಅಧ್ಯಕ್ಷ ಜಗನ್ನಾಥ್ ರೆವಣಕರ್ ಮಾದ್ಯಮಗಳಿಗೆ ಹೇಳಿದರು.


ಮಂಜುನಾಥನಗರದ ಕರೆಗುಂಡಿ ಎಂದು ಕರೆಯಲ್ಪಡುವ ಸ್ಥಳದಲ್ಲಿ ಅನಾದಿ ಕಾಲದಿಂದಲು ನಮ್ಮ ಕುಟುಂಬದ ಹಿರಿಯರು ಕುಲಕಸುಬನ್ನು ಮಾಡುತ್ತಿದ್ದು ಸಮಾನ ಮನಸ್ಕರೊಡನೆ ಸೇರಿ ಸ್ಥಳವನ್ನು ಪಾಳು ಬಿಡದೆ ಸ್ವಚ್ಚ ಗೊಳಿಸಿದ್ದು ಮುಂದಿನ ದೀನಗಳಲ್ಲಿ ಈ ಸ್ಥಳದ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸಲಾಗುವುದು ಎಂದು ಅಂಬೆಡ್ಕರ ನಗರ ಪಟ್ಟಣ ಪಂಚಾಯತ ಸದಸ್ಯ ಹಾಗು ಟ್ರಸ್ಟ ಕಾರ್ಯದರ್ಶಿ ರವಿ ಪಾಟಣಕರ್ ಹೇಳಿದರು.
ಈ ಸಂದರ್ಭದಲ್ಲಿ ಟ್ರಸ್ಟ ನ ಖಜಾಂಜಿ ನಿರಂಜನ್ ಪಾಟನಕರ್ , ಸದಸ್ಯರಾದ ಗಣೇಶ ಪಾಟಣಕರ್, ರೂಪಾ ಪಾಟಣಕರ್, ವಿಶ್ವನಾಥ ಬೊರಕರ್, ಪ್ರಶಾಂತ ಪಾಟಣಕರ್ , ರಾಜಾ ಪಾಲೆಕರ, ಸ್ವಚ್ಚತಾ ಕಾರ್ಯಕ್ರಮ ದಲ್ಲಿ ಭಾಗವಹಿಸಿದರು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *