
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನೇ ಲಕ್ಷದಲ್ಲಿಟ್ಟುಕೊಂಡು ಪ್ರತಿಯೊಬ್ಬ ಬಡ ಕುಟುಂಬವು ನೆಮ್ಮದಿಯಿಂದ ಬಾಳಬೇಕು ಮತ್ತು ಸರ್ಕಾರದ ಯೋಜನೆಯಡಿಯಲ್ಲಿ ಬಡವರಿಗೆ ಮನೆಕಟ್ಟಲು 2.75 ಲಕ್ಷ ರೂ. ಬರುವುದರಿಂದ ಉತ್ತಮ ಮನೆಯಾಗದು ಎಂಬ ಕಾರಣಕ್ಕೆ ಪಟ್ಟಣದ 6 ಪ್ರದೇಶಗಳನ್ನು ಸ್ಲಮ್ ಬೋರ್ಡಿಗೆ ಸೇರಿಸಿ ಪ್ರತಿ ಕುಟುಂಬಕ್ಕೆ ಮನೆಕಟ್ಟಲು 5 ಲಕ್ಷ ರೂ. ದೊರೆಯುವುದಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬಡ ಮದ್ಯಮವರ್ಗದವರು ಸ್ವಾಭಿಮಾನಿ ಬದುಕು ನಡೆಸಲೆಂದು ಸಚಿವ ಶಿವರಾಮ ಹೆಬ್ಬಾರ ಈ ಕಾರ್ಯಗಳನ್ನು ಮಾಡಿದ್ದಾರೆ. ಕ್ಷೇತ್ರದ ಒಣ ಭೂಮಿಯಲ್ಲಿ ರೈತನ ಸಂಕಷ್ಟ ಕಂಡು ಮುಂಡಗೋಡು ಮತ್ತು ಬನವಾಸಿ ಹಾಗು ಯಲ್ಲಾಪುರದ ಕೆಲ ಪ್ರದೇಶಗಳಿಗೆ ನೀರು ಹಾಯಿಸಿ ಭೂಮಿ ಹಸಿರಾಗಲು ಪಣತೊಟ್ಟು ಜನಾನುರಾಗಿ ಕಾರ್ಯ ನೆರವೇರಿಸಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ವಿವೇಕ ಹೆಬ್ಬಾರ ಹೇಳಿದರು.

ಅವರು ಪಟ್ಟಣದ ಉದ್ಯಮನಗರ, ಗಣಪತಿಗಲ್ಲಿ, ತಳ್ಳಿಕೇರಿ ಸೇರಿದಂತೆ ವಿವಿದೆಡೆಗಳಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮಾತನಾಡುತ್ತಿದ್ದರು.
Prathidvani Yellapura