
ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ತಾಲೂಕಿನಲ್ಲಿ ನೂತನವಾಗಿ “ಫೋಟೋಗ್ರಾಫರ್ ಯೂನಿಯನ್” ಅಸ್ತಿತ್ವಕ್ಕೆ ಬಂದಿರುವುದು ಸ್ಥಳೀಯ ಛಾಯಾಗ್ರಾಹಕರಿಗೆ ಒಗ್ಗಟ್ಟಿನ ವೇದಿಕೆ ನಿರ್ಮಾಣದ ಮಹತ್ವದ ಹೆಜ್ಜೆಯಾಗಿದೆ. ಇಂತಹ ಸಂಘಟನೆ ವೃತ್ತಿಪರರ ಹಕ್ಕುಗಳ ರಕ್ಷಣೆ, ಕೌಶಲ್ಯಾಭಿವೃದ್ಧಿ, ಪರಸ್ಪರ ಸಹಕಾರ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ನೆರವಾಗಲಿದೆ.

ನೂತನ ಅಧ್ಯಕ್ಷರಾಗಿ ಹಿರಿಯ ಛಾಯಾಗ್ರಾಹಕ ಗುರುಮೂರ್ತಿ ಗಾಂವ್ಕರ್ ಆಯ್ಕೆಯಾಗಿದ್ದು ಕ್ರಿಯಾಶೀಲ ಛಾಯಾಗ್ರಾಹಕ ಗಣೇಶ್ ಪತ್ತಾರ್ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ ಉಳಿದಂತೆ ಖಜಾಂಚಿಯಾಗಿ ಚಂದ್ರಶೇಖರ ಭಟ್ಟ,ಉಪಾಧ್ಯಕ್ಷರಾಗಿ ವಿನಾಯಕ ಗುಮ್ಮಾನಿ ಸಂಘಟನಾ ಕಾರ್ಯದರ್ಶಿ ಶಶಿಕಾಂತಯ್ಯ ಆರ್.ಬಿ , ಜಂಟಿ ಕಾರ್ಯದರ್ಶಿ ಯಾಗಿ ಮೋಹನ್ ಆವರ್ಸಾ, ಯಲ್ಲಾಪುರ ಆಸರೆ ಯೋಜನೆ ಮೇಲ್ವಿಚಾರಕ ರಾಕೇಶ್ ಡೊಂಗರೇಕರ್ ಹಾಗು ಗೌರವಾಧ್ಯಕ್ಷರಾಗಿ ಗಣಪತಿ ಆರ್ ಹೆಗಡೆ ಅವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಫೋಟೋಗ್ರಾಫರ್ ಯೂನಿಯನ್ ಸದಸ್ಯರು ಜಿಲ್ಲಾ ಸಂಘಟನೆ ಪ್ರಮುಖರು ಇನ್ನಿತರರು ಉಪಸ್ಥಿತರಿದ್ದರು.









Prathidvani Yellapura