
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ಹಾದು ಹೋಗಿರುವ ಬಳ್ಳಾರಿ ಕಾರವಾರ ರಾಷ್ಟ್ರೀಯ ಹೆದ್ದಾರಿ ಅಕ್ಕ ಪಕ್ಕದಲ್ಲಿ ಹಾಕಿರುವ ತಲುಪುವ ಊರುಗಳ ಮಾರ್ಗಸೂಚಿ ಫಲಕಗಳು ಮಸುಕಾಗಿದ್ದು ಪುರಾತನ ಕಾಲದ ಅಳಿದುಳಿದ ಶಾಸನದಂತೆ ಭಾಸವಾಗುತ್ತಿದೆ.

ಪ್ರಯಾಣಿಕರ ಹಿತದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಇಲಾಖೆ ತನ್ನ ಘನತೆ ಉಳಿಸಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳು ಈ ಕೂಡಲೆ ಮಾಸಿಹೋದ ಫಲಕಗಳನ್ನು ಬದಲಿಸಬೇಕಿದೆ ಎಂಬುದು ವಾಹನ ಸವಾರರ ಆಗ್ರಹವಾಗಿದೆ.

ಪರ ಊರುಗಳಿಂದ ಮತ್ತೊಂದು ಊರಿಗೆ ತೆರಳುವ ಪ್ರವಾಸಿಗರಿಗೆ ಸರಕು ಸಾಗಾಣಿಕೆ ವಾಹನಗಳಿಗೆ ಒಟ್ಟಾರೆ ಪ್ರಯಾಣಿಕರಿಗೆ ಊರುಗಳ ಹೆಸರು,ಕಿಲೋಮೀಟರ್ ಗಳ ಮಾಹಿತಿ ಮತ್ತು ಸಂಚರಿಸುವ ದಿಕ್ಕಿನ ಮಾಹಿತಿ ಅತ್ಯಂತ ಉಪಯುಕ್ತವಾಗಿರುತ್ತದೆ ಅದನ್ನು ಸಮರ್ಪಕವಾಗಿ ನೀಡಲು ಅಸಾದ್ಯ ಎಂದಾದರೆ ನಿರ್ವಹಣೆ ಇಲಾಖೆಯ ಕೆಲಸಕ್ಕೆ ಬೆಲೆ ಇಲ್ಲವಾಗಲಿದೆ ಅಲ್ಲದೆ ಇಲಾಖೆಯ ಘನತೆ ಮಣ್ಣು ಪಾಲಾಗಲಿದೆ ಈ ಎಲ್ಲಾ ಹಿನ್ನೆಲೆಯಲ್ಲಿ ಕೂಡಲೆ ಕಾರ್ಯಪ್ರವೃತ್ತರಾಗಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ ಆಗಿದೆ.










Prathidvani Yellapura