Breaking News

ಕರುಳು ಹಿಂಡುವ ಘಟನೆ ತಾಲೂಕಿನ ಬಳಗಾರದ ಹಂಸನಗದ್ದೆಯಲ್ಲಿ ಬಾಲಕನೋರ್ವನ ಸಾವು..

ಪ್ರತಿಧ್ವನಿ,ಯಲ್ಲಾಪುರ : ಮನೆಯಲ್ಲಿ ವಿದ್ಯುತ್ ಹೋದಾಗ ಚಿಮಣಿ ದೀಪ ಹಚ್ಚಲು ಹೋದ 4 ವರ್ಷ 6ತಿಂಗಳು ಪ್ರಾಯದ ಬಾಲಕನೋರ್ವ ದೇಹಕ್ಕೆ ಬೆಂಕಿ ತಗುಲಿ ಮೃತಪಟ್ಟ ಘಟನೆ ತಾಲೂಕಿನ ಬಳಗಾರ ಗ್ರಾಮದ ಹಂಸನಗದ್ದೆಯಲ್ಲಿ ನಡೆದಿದೆ.
ರವಿ ಗಣಪತಿ ಗೌಡ ಎಂಬುವರ ಮಗನಾದ ಯತೀನ ರವಿ ಗೌಡ ಎಂಬಾತನೇ ಮೃತ ಬಾಲಕನಾಗಿದ್ದು ಜೂ.26 ರಂದು ಸಂಜೆ 7 ಗಂಟೆಯ ಸುಮಾರಿಗೆ ತನ್ನ ಮನೆಯ ಕರೆಂಟ್ ಹೋದಾಗ ಚಿಮಣಿ ದೀಪ ಹಚ್ಚಲೆಂದು ಹೋದವನಿಗೆ ಆಕಸ್ಮಿಕವಾಗಿ ದೇಹಕ್ಕೆ ಬೆಂಕಿ ತಗುಲಿ ಸಂಪೂರ್ಣ ದೇಹ ಸುಟ್ಟಿದ್ದು ಯಲ್ಲಾಪುರ ಕಣ್ಣಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಜೂ.29 ರಂದು ಬಾಲಕ ಮೃತಪಟ್ಟಿರುತ್ತಾನೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಪರಿಸರಕ್ಕು ಪೂರಕ ಮನಸ್ಸಿಗು ನೆಮ್ಮದಿ  ಹೂ ಮತ್ತು ಹಣ್ಣಿನಗಿಡಗಳ ಪೋಷಣೆ – ಹಿಮವತಿ ಭಟ್ಟ..

ಪ್ರತಿಧ್ವನಿ ಯಲ್ಲಾಪುರ : ಪ್ರತಿಯೊಬ್ಬರ ಮನೆಗಳಲ್ಲಿ ಹೂವು, ಹಣ್ಣಿನ ಗಿಡಗಳನ್ನು ಬೆಳೆಸುವ ಅಭ್ಯಾಸ ಶ್ರೇಷ್ಠವಾದದ್ದು. ಅದನ್ನು ಪ್ರತಿಯೊಬ್ಬ ಮಹಿಳೆಯರೂ ರೂಢಿಸಿಕೊಳ್ಳಬೇಕು. …

Leave a Reply

Your email address will not be published. Required fields are marked *