

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ನಾಮಧಾರಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಯಲ್ಲಾಪುರ : ಶ್ರೀ ಗುರು ಸಹಕಾರಿ ಸಂಘ ನಿ., ಯಲ್ಲಾಪುರ ಮತ್ತು ನಾಮಧಾರಿ ವೇದಿಕೆ , ಅನಂತ ನೆನಪು ಹಾಗೂ ಸಮಾಜ ಬಾಂಧವರ ಸಹಕಾರದೊಂದಿಗೆ ಯಲ್ಲಾಪುರದ ನಾಮಧಾರಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ.

ಎಸ್.ಎಸ್.ಎಲ್.ಸಿ ಯಲ್ಲಿ ಶೇ.೯೫ಕ್ಕಿಂತ ಹೆಚ್ಚು ಅಂಕ , ಪಿಯುಸಿಯಲ್ಲಿ ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದಿರುವ ಯಾವುದೇ ವಿಭಾಗ, ಯಾವುದೇ ಮಾಧ್ಯಮದಲ್ಲಿ ಉತ್ತೀರ್ಣರಾದವರು ಪುರಸ್ಕಾರಕ್ಕೆ ಅರ್ಹರಾಗಿರುತ್ತಾರೆ. ತಾಲೂಕಿನ ನಾಮಧಾರಿ ಸಮಾಜದವರಿಗೆ ಮಾತ್ರ ಅರ್ಜಿ ನೀಡಲು ಅವಕಾಶವಿದೆ ಎಂದು ಶ್ರೀ ಗುರು ಸಹಕಾರಿ ಸಂಘ ನಿ., ಅಧ್ಯಕ್ಷ ರವೀಂದ್ರ ಎನ್ ನಾಯ್ಕ ತಿಳಿಸಿದ್ದಾರೆ.
ಪುರಸ್ಕಾರ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಜು.೫ರ ಒಳಗಾಗಿ ದೃಡಪಟ್ಟ ಅಂಕಪಟ್ಟಿ, ಆಧಾರ ಕಾರ್ಡ್, ಸ್ವಯಂ ವಿಳಾಸವಿರುವ ಲಕೋಟೆ ಮತ್ತು ಫೋಟೋ ಸಹಿತ ಅರ್ಜಿಯನ್ನು ಶ್ರೀ ಗುರು ಸಹಕಾರಿ ಸಂಘ ನಿ., ಶಾಂತಾ ಕಾಂಪ್ಲೆಕ್ಸ್, ದೇವಿ ಮೈದಾನ, ಯಲ್ಲಾಪುರ, ಉತ್ತರಕನ್ನಡ ಇವರ ವಿಳಾಸಕ್ಕೆ ತಲುಪಿಸಬೇಕು.
Prathidvani Yellapura