
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಹುಬ್ಬಳ್ಳಿ ರಸ್ತೆಯ ಹೊರವಲಯದಲ್ಲಿ ಬೈಕ್ ಚಲಾಯಿಸುತ್ತಿದ್ದ ಜರ್ಮನ್ ದೇಶದ ಪ್ರವಾಸಿಗನ ಚಾಲನೆಯ ನಿಯಂತ್ರಣ ತಪ್ಪಿ ತಗ್ಗಿನಲಿದ್ದ ಮರಕ್ಕೆ ಡಿಕ್ಕಿ ಹೊಡೆದು ಗಂಭಿರ ಸ್ವರೂಪದ ಗಾಯಗಳಾಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ನಡೆದಿದೆ.

ಕ್ರಿಸ್ಟಿಯನ್ (43) ಎಂ¨ ಜರ್ಮನ್ ದೇಶದ ಪ್ರಜೆಯು ಗುಜರಾತ್ ನೋಂದಣಿಯ ಮೋಟಾರ್ಬೈಕಿನಲ್ಲಿ ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ಸವಾರಿ ಹೊರಟವನು ಪಟ್ಟಣದ ನವದುರ್ಗ ಗ್ಯಾರೇಜ್ ಪಕ್ಕದ ತಗ್ಗಿನಲ್ಲಿ ಮರವೊಂದಕ್ಕೆ ಡಿಕ್ಕಿ ಹೊಡೆದು ತನ್ನ ತಲೆ, ತೋಳಿಗೆ ಗಂಭೀರ ಸ್ವರೂಪದ ಗಾಯ ಮಾಡಿಕೊಂಡಿದ್ದಲ್ಲದೇ ಬಲ ಪಕ್ಕೆಯ ಎಲುಬು ಮುರಿದು ತೀವ್ರ ಸ್ವರೂಪದ ಗಾಯಗೊಂಡವನನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ.

ಮೃತಪಟ್ಟ ವ್ಯಕ್ತಿಯು ವಿದೇಶಿ ಪ್ರಜೆಯಾಗಿದ್ದು ಅಲ್ಲದೇ ತೀವ್ರ ಸ್ವರೂಪದ ಗಾಯಗಳಾಗಿ ಸಾವನ್ನಪ್ಪಿರುವುದರಿಂದ ಮುಂದಿನ ಕ್ರಮ ಜರುಗಿಸಲು ಆತನ ಕುಟುಂಬಸ್ಥರು ಬರುವವರೆಗೆ ದೇಹವನ್ನು ಶೈತ್ಯಾಗಾರದಲ್ಲಿ ಇಡಬೇಕಿದೆ. ಈ ವ್ಯವಸ್ಥೆ ಯಲ್ಲಾಪುರ ತಾಲೂಕಾ ಆಸ್ಪತ್ರೆಯಲ್ಲಿ ಇಲ್ಲದಿರುವ ಕಾರಣ ದೇಹವನ್ನು ಕಾರವಾರಕ್ಕೆ ರವಾನಿಸಲಾಗಿದೆ.
Prathidvani Yellapura