
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ-ಬೇಸಿಗೆಯ ರಜಾದಿನಗಳಲ್ಲಿ ಸುತ್ತ ಮುತ್ತಲಿನ ಪ್ರವಾಸೀ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಸ್ಥಳೀಯ ಬಸ್ ತಂಗುದಾಣಗಳನ್ನು ಹಾಳು ಮಾಡುತ್ತಿದ್ದಾರೆ. ಪ್ರವಾಸದ ನೆಪದಲ್ಲಿ ಬರುವ ಕೆಲವರು ಇಂತಹ ತಂಗುದಾಣಗಳಲ್ಲಿನ ಅಸಭ್ಯ ವರ್ತನೆ, ಸಾರ್ವಜನಿಕ ಸ್ಥಳದ ದುರುಪಯೋಗದಿಂದ ಸ್ಥಳೀಯ ನಾಗರಿಕರು ತಲೆತಗ್ಗಿಸುವಂತೆ ಮಾಡಿದೆ. ಹೊರಗಿನಿಂದ ಬರುವ ಪ್ರವಾಸಿಗರ ಮೇಲೆ ಸ್ಥಳೀಯ ಆಡಳಿತ ನಿಗಾವಹಿಸಬೇಕಿದೆ. ಎಂದು ಹಿರಿಯ ಕಾಂಗ್ರೆಸ್ ಮುಖಂಡ ವಜ್ರಳ್ಳಿಯ ಟಿ.ಸಿ.ಗಾಂವ್ಕಾರ ಹೇಳಿದರು.

ಯಲ್ಲಾಪುರ ತಾಲ್ಲೂಕಿನ
ವಜ್ರಳ್ಳಿ ಸಮೀಪದ ಬೀಗಾರ್ ಕ್ರಾಸ್ ಬಳಿಯ ಬಸ್ ನಿಲ್ದಾಣದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡ ಸ್ವಚ್ಚತಾ ಕಾರ್ಯದಲ್ಲಿ ಕಪಾಲ್ಗೊಂಡು ಮಾತನಾಡಿದ ಅವರು ಕೇಲವು ಪ್ರವಾಸಿಗರು ದುಶ್ಚಟಗಳ ದಾಸರಾಗಿದ್ದು ತಂಗುದಾಣ ಲ್ಲಿಯೇ ನಿಂತು ಕುಡಿದು, ತಿಂದು ಮೋಜು ಮಸ್ತಿ ಮಾಡಿ ನಿರುಪಯುಕ್ತ ಬಾಟಲಿ,ಪ್ಲಾಸ್ಟಿಕ್ ಕಸಗಳನ್ನು ಬಸ್ ತಂಗುದಾಣದೆದುರು ಚೆಲ್ಲಿ ಹೋಗುತ್ತಿದ್ದಾರೆ. ಹಳ್ಳಿಗಳಿಂದ ಪಟ್ಟಣಕ್ಕೆ ಹೋಗುವ ಸ್ಥಳೀಯರಿಗೆ ಕಿರಿಕಿರಿಯಾಗುತ್ತಿದೆ. ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯರಾದ ನಾರಾಯಣ ಕೋಮಾರ, ಮಹೇಶ್ ಗಾಂವ್ಕರ್ ಸಾಂಬೇಕುಂಬ್ರಿ ಯವರು ಸೇರಿದಂತೆ ಅನೇಕ ಕಾಂಗ್ರೇಸ್ ಕಾರ್ಯಕರ್ತರು
ಸ್ವಚ್ಛತಾ ಕಾರ್ಯದಲ್ಲಿ ಕೈ ಜೋಡಿಸಿದರು.ಆ ಮೂಲಕ ಸಾಮಾಜಿಕ ಶುಚಿತ್ವ ದ ಜಾಗೃತಿ ಮೂಡಿಸಿದ್ದಾರೆ.
Prathidvani Yellapura