
ಪ್ರತಿಧ್ವನಿ ಯಲ್ಲಾಪುರ: ಪಟ್ಟಣದಲ್ಲಿ ಸೋಮವಾರ ಸಂಜೆ ಕೆಲ ಸಮಯ ಸಣ್ಣದಾಗಿ ಸುರಿದ ಮಳೆಗೆ ಜೋಡುಕೆರೆಯಲ್ಲಿ ಅಡಗಿರುವ ಮೊಸಳೆ ರಸ್ತೆ ಮೇಲೆ ಸಂಚರಿಸಿದೆ.
ಜಿಟಿಜಿಟಿ ಮಳೆಯ ನಡುವೆ ರಸ್ತೆ ಮೇಲೆ ಓಡಾಟ ನಡೆಸಿರುವುದು ಸ್ಥಳಿಯರೊಬ್ಬರ ಮೊಬೈಲ್ ನಲ್ಲಿ ಸೆರೆಯಾಗಿದೆ.
ದಿನದಿಂದ ದಿನಕ್ಕೆ ಮೊಸಳೆ ಸುದ್ದಿಯಾಗುತ್ತಿದ್ದು ಅರಣ್ಯ ಇಲಾಖೆ ಗಂಭೀರವಾಗಿ ಗಮನ ಹರಿಸಿ ಮೊಸಳೆ ಹಿಡಿಯುವ ಕಾರ್ಯವಾಗಬೇಕಿದೆ ಇಲ್ಲವಾದಲ್ಲಿ ಎರಡು ಕೆರೆಗಳಿಗು ಭದ್ರವಾದ ಫೆನ್ಸಿಂಗ್ ಅಳವಡಿಸಬೇಕಿದೆ.
ಆಗೊಮ್ಮೆ ಈಗೊಮ್ಮೆ ಮೊಸಳೆ ಸಾರ್ವಜನಿಕರಿಗೆ ಕಾಣಿಸುತ್ತಿದ್ದು ಈ ರಸ್ತೆಯಲ್ಲಿ ಓಡಾಟ ನಡೆಸುವ ಮಕ್ಕಳು,ಮಹಿಳೆಯರು, ವಯೋ ವೃದ್ದರು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆಯವರು ಇದನ್ನು ಲಘುವಾಗಿ ಪರಿಗಣಿಸಿದಂತೆ ಕಂಡು ಬರುತ್ತಿದ್ದು ಸಾರ್ವಜನಿಕರೆ ಕಾರ್ಯಾಚರಣೆ ನಡೆಸಿ ಮೊಸಳೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಈ ಸಂಬಂಧ ಈ ದಿನ ರಾತ್ರಿ “oppression jodkere crocodile “ ಗೆ ಮಂಜುನಾಥ ನಗರದ ಯುವ ಸಮೂಹ ಸಿದ್ದವಾಗಿದೆ. ದಾಂಡೇಲಿ ಮೂಲದ ಸ್ನೇಕ್ ಕ್ಯಾಚರ್ ಗಜಾನನ ಮುಳೆ ನೇತೃತ್ವದಲ್ಲಿ ಸ್ಥಳೀಯರ ತಂಡ ಕಾರ್ಯಾಚರಣೆಗಿಳಿಯಲಿದೆ ಎಂದು ಸ್ಥಳೀಯ ಪ್ರಮುಖ ಸತೀಶ್ ಶಿವಾನಂದ ನಾಯ್ಕ್ ಪ್ರತಿಧ್ವನಿ ಗೆ ಪ್ರತಿಕ್ರಯಿಸಿದ್ದಾರೆ.





Prathidvani Yellapura