
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಕ್ರೈಸ್ತರ ಪರಮ ಪವಿತ್ರ ದಿನಗಳಲ್ಲಿ ಒಂದಾದ “ಗುಡ್ ಫ್ರೈಡೇ” ಶ್ರದ್ಧಾ ಭಕ್ತಿಗಳಿಂದ ಏಸುವಿನ ಪ್ರಾರ್ಥನೆಯೊಂದಿಗೆ ಕಿರವತ್ತಿಯ ಸಂತ ಜೋಸೆಫರ ದೇವಾಲಯದಲ್ಲಿ ಆಚರಿಸಲಾಯಿತು.

ಫಾ.ಮೈಕೇಲ್ ಪಿಂಟೋ ಧರ್ಮಗುರುಗಳ ನೇತೃತ್ವದಲ್ಲಿ ಏಸುವಿಗೆ ಮರಣ ದಂಡನೆ ವಿಧಿಸಿದ ಚಿತ್ರಪಟವನ್ನು ಹಿಡಿದು ಶಿಲುಬೆಯೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಗುಡ್ ಫ್ರೈಡೇ ಪವಿತ್ರ ಸಂದೇಶವನ್ನು ಸಾರಲಾಯಿತು.

ಈ ಸಂದರ್ಭದಲ್ಲಿ ಕ್ರೈಸ್ತ ಧರ್ಮದ ಕುಟುಂಬ ವರ್ಗದವರು , ಸಮುದಾಯದ ಹಿರಿಯರು, ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡು ಪ್ರಾರ್ಥಿಸಿದರು.





Prathidvani Yellapura