
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಅತ್ಯಂತ ಪ್ರೀತಿಯ ಮತ್ತು ಜನಪ್ರಿಯ ಯೋಜನೆಯಲೊಂದಾದ ಅನ್ನಭಾಗ್ಯ ಯೋಜನೆಯ ಅಕ್ಕಿ ಪ್ರಮಾಣ ಹೆಚ್ಚು ಮಾಡಿದ್ದು ಅಕ್ಕಿ ಹೊರುವುದೇ ದೊಡ್ಡ ಸವಾಲಿನ ಕೆಲಸವಾಗಿದೆ.

ಕುಟುಂಬದ ಒಬ್ಬ ವ್ಯಕ್ತಿಗೆ 5 kg ಅಕ್ಕಿ ನೀಡಿ ಉಳಿದ5 kg ಅಕ್ಕಿಗೆ ತೆರಬೇಕಾದ ಹಣವನ್ನು ಕುಟುಂಬದ ಯಜಮಾನಿ ಖಾತೆಗೆ ಜಮಾ ಮಾಡಲಾಗುತ್ತಿತ್ತು ಈ ಹಿನ್ನೆಲೆಯಲ್ಲಿ ಪ್ರತಿ ಕುಟುಂಬ ಪಡಿತರ ಪಡೆಯುವಾಗ ಸಾಮಾನ್ಯವಾಗಿ ದ್ವಿಚಕ್ರ ವಾಹನ ಅಥವ ಸೈಕಲ್ ಮೇಲೆ ಪಡಿತರ ಕೊಂಡೊಯ್ಯುತ್ತಿದ್ದರು ಸದ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ಘೋಷಿಸಿದಂತೆ ಹೆಚ್ಚುವರಿಯಾಗಿ ಒಬ್ಬ ವ್ಯಕ್ತಿಗೆ 5 kg ಅಕ್ಕಿ ಗಾಗಿ ನೀಡುವ ಹಣದ ಬದಲು ಅಕ್ಕಿಯನ್ನೇ ನೀಡಲು ಸೂಚಿಸಿದ ಹಿನ್ನೆಲೆಯಲ್ಲಿ ವಿಶೇಷವಾಗಿ ಹಿರಿಯನಾಗರಿಕರು,ಅಂಗವೈಕಲ್ಯದವರು ಅನಾರೋಗ್ಯ ಪೀಡಿತ ಗ್ರಾಹಕರು ಅಕ್ಕಿಯ ಮೂಟೆ ಹೊರಲಾಗದೆ ಅವಸ್ಥೆ ಪಡುತ್ತಿದ್ದು ಆಟೋರಿಕ್ಷಾಕ್ಕೆ ಮೊರೆ ಹೋಗುವುದು ಅನಿವಾರ್ಯವಾಗಿದೆ. ಅಕ್ಕಿ ಉಚಿತವಾದರು ಸಾಗಿಸುವ ರಿಕ್ಷಾ ಉಚಿತವಲ್ಲವಲ್ಲಾ.

ಹಸಿದವರ ಹಸಿವು ನೀಗಿಸುವ ಸಿದ್ದರಾಮಯ್ಯ ಕನಸಿನ ಯೋಜನೆ ಅನ್ನಭಾಗ್ಯ ಅತ್ಯಂತ ಅರ್ಥಪೂರ್ಣ ಮತ್ತು ಬಡವರ ಪರವಾದ ಯೋಜನೆಯಾಗಿದ್ದು ಶ್ಲಾಘನೀಯ ಕಾರ್ಯ ಅದಕ್ಕೆ ಮತ್ತಷ್ಟು ಅರ್ಥಪೂರ್ಣವಾಗುವಂತೆ ಹಿರಿಯ ನಾಗರಿಕರಿಗೆ ಪಡಿತರವನ್ನು ಮನೆಗೆ ತಲುಪಿಸುವ ಯೋಜನೆ ರೂಪಿಸಿದಲ್ಲಿ ಮತ್ತಷ್ಟು ಪ್ರಯೋಜನಕಾರಿಯಾಗಿ ದೇಶದಲ್ಲೆ ಪರಿಣಾಮಕಾರಿಯಾಗಿ ಹೊರಹೊಮ್ಮಲಿದೆ ಹಿಂದೆ ಇದೇ ಸರ್ಕಾರದ ಅವಧಿಯಲ್ಲಿ ಏಕಾಂಗಿಯಾಗಿ ಕಾಡ್೯ ಹೊಂದಿರುವ ಹಿರಿಯ ನಾಗರಿಕರಿಗೆ ಪಡಿತರವನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು ಆದರೆ ನಂತರದ ದಿನಗಳಲ್ಲಿ ನಿಂತುಹೋಯಿತು ಸದ್ಯ ನೀಡುವ ಅಕ್ಕಿ ಪ್ರಮಾಣ ಹೆಚ್ಚಿದ್ದು ಹಿರಿಯ ನಾಗರಿಕರಿಗೆ ಮತ್ತೆ ಈ ವ್ಯವಸ್ಥೆ ಅಳವಡಿಸಿದರೆ ಅನುಕೂಲವಾಗಲಿದೆ ಎಂಬುದು ಹಿರಿಯ ನಾಗರಿಕರ ಅಭಿಪ್ರಾಯವಾಗಿದೆ.

ಚುನಾವಣೆ ವೇಳೆಯಲ್ಲಿ ಮತ ಚಲಾಯಿಸಲು ಆಗದ ವಿಶೇಷ ಚೇತನರಿಗೆ,ವಯೋವೃದ್ದರಿಗೆ, ಗಂಭೀರವಾಗಿ ಅನಾರೋಗ್ಯದಿಂದ ಬಳಲುತ್ತಿರುವವರ ಮನೆಗೆ ತೆರಳಿ ಮತ ಚಲಾವಣೆ ಮಾಡಿಸಿದಂತೆ ಪಡಿತರವನ್ನು ಅಂತಹ ನಾಗರಿಕರಿಗೆ ಮನೆಗೆ ತಲುಪಿಸುವ ವ್ಯವಸ್ಥೆ ಆಗಬೇಕಿದೆ ಎಂಬುದು ಹಲವರ ಅಭಿಪ್ರಾಯ ಆಗಿದೆ.



Prathidvani Yellapura