
ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ರೈತರ ಮೊಗದಲ್ಲಿ ಸಂತಸ ಮೂಡಿದೆ ಹಾಗೆ ವಿವಿಧ ಪ್ರದೇಶಗಳಲ್ಲಿ ಸಮಸ್ಯೆಗಳು ಉದ್ಭವವಾಗಿವೆ.

ಜಾನುವಾರುಗಳ ಮರಣ ಮೃದಂಗ ಮುಂದುವರೆದಿದ್ದು ಮತ್ತೆರಡು ಎಮ್ಮೆಗಳು ನೀರು ಪಾಲಾಗಿವೆ. ಮದನೂರು ಗ್ರಾಮದ ಗೋಯಾ ಬಾಬು ಕೊಕರೆ ಹಾಗೂ ಮಾಳು ಬಾಬು ಕೊಕರೆ ಎಂಬುವರಿಗೆ ಸೇರಿದ ಎರಡು ಸಾಕು ಎಮ್ಮೆಗಳು ಡೋಮಗೇರಿ ಹಳ್ಳದ ನೀರಿನಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿವಿರುವುದರೊಂದಿಗೆ ತಾಲೂಕಿನಲ್ಲಿ ಜಾನುವಾರುಗಳ ಸಾವಿನ ಸಂಖ್ಯೆ10 ಕ್ಕೇರಿದೆ.

ಗೇರಾಳದ ನಾಗವೇಣಿ ನಾಗಪ್ಪ ಗೌಡ ಎಂಬುವರ ವಾಸ್ತವ್ಯದ ಮನೆಯ ಗೋಡೆ ಕುಸಿದಿದೆ.

ಮಂಚೀಕೇರಿ ನಿವಾಸಿ ಉಡಚವ್ವ ಭೋವಿವಡ್ಡರ ಎಂಬುವರ ಮನೆಗೋಡೆ ಕುಸಿದಿದೆ.

ಮದನೂರು ಗ್ರಾಮದ ಯಲ್ಲವ್ವ ಗೋಪಾಲ ತಳವಾರ ಮನೆ ಗಣೊಡೆ ಕುಸಿದಿದೆ.

ಮದನೂರಿನ ಥೆರೆಜಾ ರುಜಾಯ್ ಸಿದ್ದಿ ಎಂಬುವರ ವಾಸದ ಮನೆಯ ಗೋಡೆ ಕುಸಿದಿದೆ.

ಕಿರವತ್ತಿಯ ಇಂದಿರಾ ನಗರ ನಿವಾಸಿ ಲಕ್ಷ್ಮೀ ಮಂಜುನಾಥ ವಾಲ್ಮೀಕಿ ಎಂಬುವರ ಮನೆಗೋಡೆ ಕುಸಿದಿದೆ.

ಅರಬೈಲು ಘಟ್ಟ ಪ್ರದೇಶದಲ್ಲಿ ಅಲ್ಲಲ್ಲಿ ಮರದ ರೆಂಬೆಕೊಂಬೆಗಳು ಮುರಿದು ಬೀಳುತ್ತಿದ್ದು ಹೆದ್ದಾರಿ ನಿರ್ವಹಣೆಯ ತಂಡ ಮತ್ತು ಅರಣ್ಯ ಇಲಾಖೆ ತಕ್ಷಣದಲ್ಲಿ ಸಂಚಾರಕ್ಕೆ ಅಡಚಣೆಯಾಗದಂತೆ ಮಳೆಯನ್ನೂ ಲೆಕ್ಕಿಸದೇ ಕರ್ತವ್ಯ ನಿರ್ವಹಿಸುತ್ತಿರುವುದು ಪ್ರಶಂಸನೀಯ.
Prathidvani Yellapura